AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls; ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಒಳ-ಒಪ್ಪಂದದಿಂದಾಗಿ ಸೋಲಬೇಕಾಯಿತು: ಸಿಟಿ ರವಿ

Karnataka Assembly Polls; ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಒಳ-ಒಪ್ಪಂದದಿಂದಾಗಿ ಸೋಲಬೇಕಾಯಿತು: ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 14, 2023 | 11:26 AM

Share

ಜನರು ನೀಡಿರುವ ತೀರ್ಪನ್ನು ವಿನಮ್ರತೆಯಿಂದ ಸ್ವೀಕರಿಸುವುದಾಗಿ ಸಿಟಿ ರವಿ ಹೇಳಿದರು.

ಚಿಕ್ಕಮಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಒಳಒಪ್ಪಂದ (understanding) ಮತ್ತು ಪಕ್ಷದ ತತ್ವ ಸಿದ್ಧಾಂತಗಳ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು ತಮ್ಮ ಸೋಲಿಗೆ ಕಾರಣ ಎಂದು ಸಿಟಿ ರವಿ (CT Ravi) ಹೇಳಿದರು. ಚಿಕ್ಕಮಗಳೂರಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರವಿ, ಕಳೆದ ಬಾರಿಗಿಂತ 9,000 ದಷ್ಟು ಹೆಚ್ಚು ಮತ ಪಡೆದಿದ್ದರೂ ಸೋಲುವ ಪ್ರಸಂಗ ಎದುರಾಗಿದೆ, ತನ್ನಿಂದ ತಪ್ಪುಗಳಾಗಿರಬಹುದು ಮತ್ತು ಸಂಘಟನೆ (oraganisation) ವಿಷಯದಲ್ಲೂ ಕೊರತೆ ಉಂಟಾಗಿರಬಹುದು, ಎಲ್ಲವನ್ನು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಇದಾಗಿದೆ ಎಂದರು. ಜನರು ನೀಡಿರುವ ತೀರ್ಪನ್ನು ವಿನಮ್ರತೆಯಿಂದ ಸ್ವೀಕರಿಸುವುದಾಗಿ ಸಿಟಿ ರವಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ