ಐರನ್​ಮ್ಯಾನ್ ಟ್ರೈಯಥ್ಲಾನ್ ಈವೆಂಟ್: ರಾಜ್ಯ ಮತ್ತು ಕರ್ನಾಟಕ ಪೊಲೀಸ್​ಗೆ ಹೆಮ್ಮೆ ತಂದಿರುವ ಸಂದೀಪ್ ಪಾಟೀಲ್

ಅರುಣ್​ ಕುಮಾರ್​ ಬೆಳ್ಳಿ

Updated on: Aug 29, 2025 | 3:59 PM

ಐರನ್​ನ್ಯಾನ್ ಟ್ರೈಯಥ್ಲಾನ್ ಈವೆಂಟ್ ನಲ್ಲಿ ಭಾಗಿಯಾಗಲು ಸಂದೀಪ್ ಪಾಟೀಲ್ ಸುಮಾರು ಒಂದೂವರೆ ವರ್ಷಗಳಿಂದ ತಯಾರಿ ನಡೆಸಿದ್ದರಂತೆ. ಪಕ್ಕಾ ಸಸ್ಯಾಹಾರಿಯಾಗಿರುವ ಅವರಿಗೆ ದೇಹದಲ್ಲಿ ಎನರ್ಜಿ ಲೆವೆಲ್​ಗಳನ್ನು ಕಾಯ್ದುಕೊಳ್ಳುವುದು ಕಠಿಣ ಸವಾಲಾಗಿತ್ತು ಮತ್ತು ತರಬೇತಿಯ ಜೊತೆ ವೃತ್ತಿಬದುಕಿನಲ್ಲಿ ಯಾವುದೇ ರೀತಿಯ ಹೆಚ್ಚುಕಮ್ಮಿಯಾಗದಂತೆ ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸುವುದು ಅವರ ಅದ್ಯತೆಯಾಗಿತ್ತು.

ಬೆಂಗಳೂರು, ಆಗಸ್ಟ್ 29: ಕರ್ನಾಟಕ ಕೇಡರ್​ನ ಐಪಿಎಸ್ ಅಧಿಕಾರಿ ಮತ್ತು ಕರ್ನಾಟಕ ರಾಜ್ಯ ಮೀಸಲು ಪಡೆಯ ಐಜಿಪಿಯಾಗಿರುವ ಸಂದೀಪ್ ಪಾಟೀಲ್ ಅವರು ರಾಜ್ಯ ಮತ್ತು ಪೊಲೀಸ್ ಇಲಾಖೆಗೆ ಹೆಮ್ಮೆಯುಂಟಾಗುವ ಸಾಧನೆಯೊಂದನ್ನು ಮಾಡಿದ್ದಾರೆ. ವರ್ಲ್ಡ್​ ಟ್ರೈಯಥ್ಲಾನ್ ಕಾರ್ಪೋರೇಷನ್ (World Triathlon Corporation) ಆಯೋಜಿಸುವ ಐರನ್​ನ್ಯಾನ್ ಟ್ರೈಯಥ್ಲಾನ್ ಈವೆಂಟ್​ನಲ್ಲಿ ಭಾಗಿಯಾಗಿ ತಮ್ಮ ಫಿಟ್ನೆಸ್ ಸಾಮರ್ಥ್ಯ ಮತ್ತು ಸಹಿಷ್ಣುತೆಯ ಪರಿಚಯ ನೀಡಿದ್ದಾರೆ. ಡೆನ್ಮಾರ್ಕ್ ರಾಜಧಾನಿ ಕೋಪನ್​ಹೇಗನ್​ನಲ್ಲಿ ನಡೆದ ಐರನ್​ನ್ಯಾನ್ ಟ್ರೈಯಥ್ಲಾನ್ ಸಾಮಾನ್ಯವಾದುದಲ್ಲ, ದೇಹವನ್ನು ತೀವ್ರವಾಗಿ ದಂಡಿಸುವ ಮೂರು ಸ್ಪರ್ಧೆಗಳನ್ನು ಇದು ಒಳಗೊಂಡಿರುತ್ತದೆ. ಸಮುದ್ರದಲ್ಲಿ 3.8 ಕಿಮೀ ಈಜುವುದು, 180 ಕಿಮೀಗಳಷ್ಟು ಸೈಕ್ಲಿಂಗ್ ಮತ್ತು 42 ಕಿಮೀ ಓಟ (ಮ್ಯಾರಥಾನ್); ಎಲ್ಲವನ್ನೂ ಸಂದೀಪ್ ಪಾಟೀಲ್ 14 ಗಂಟೆ 45 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ! ಅವರು ಐರನ್​ಮ್ಯಾನ್ ಅನ್ನೋದಿಕ್ಕೆ ಸಂದೇಹವೇ ಬೇಡ. ಈ ಜಾಗತಿಕ ಈವೆಂಟ್​ನಲ್ಲಿ ಕರ್ನಾಟಕ ಐಪಿಎಸ್ ಕೇಡರ್​ನಿಂದ ಭಾಗವಹಿಸಿದ ಏಕೈಕ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಆಗಿದ್ದಾರೆ.

ಇದನ್ನೂ ಓದಿ:  Independence Day: ಕರ್ನಾಟಕದ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ, 18 ಪೊಲೀಸರಿಗೆ ವಿಶಿಷ್ಟ ಸೇವಾ ಪದಕ ಘೋಷಣೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.