ಬೆಂಗಳೂರಿನಲ್ಲಿ ನಿಲ್ಲದ ಪುಂಡರ ಅಟ್ಟಹಾಸ; ಹಾಡಹಗಲೇ ಮಚ್ಚು ಹಿಡಿದು ಹಪ್ತಾ ವಸೂಲಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 30, 2024 | 3:47 PM

: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ(Bengaluru) ಪುಂಡರ ಅಟ್ಟಹಾಸ ಮೀತಿಮೀರಿದೆ. ಎಷ್ಟೇ ಕಾನೂನು ಕ್ರಮಕೈಗೊಂಡರೂ ಇದಕ್ಕೆ ಬ್ರೇಕ್​ ಹಾಕಲಾಗುತ್ತಿಲ್ಲ. ಅದರಂತೆ ಇದೀಗ ದುಷ್ಕರ್ಮಿಗಳು ಹಾಡಹಗಲೇ ಮಚ್ಚು ಹಿಡಿದು ಹಪ್ತಾ ವಸೂಲಿಗೆ ಇಳಿದಿದ್ದಾರೆ. ಪುಂಡನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವ್ಯಕ್ತಿಯೋರ್ವ ಸೆರೆಯಾದ ಸಿಸಿಟಿವಿ ದೃಶ್ಯವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾನೆ.

ಬೆಂಗಳೂರು, ಮೇ.30: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ(Bengaluru) ಪುಂಡರ ಅಟ್ಟಹಾಸ ಮೀತಿಮೀರಿದೆ. ಎಷ್ಟೇ ಕಾನೂನು ಕ್ರಮಕೈಗೊಂಡರೂ ಇದಕ್ಕೆ ಬ್ರೇಕ್​ ಹಾಕಲಾಗುತ್ತಿಲ್ಲ. ಅದರಂತೆ ಇದೀಗ ದುಷ್ಕರ್ಮಿಗಳು ಹಾಡಹಗಲೇ ಮಚ್ಚು ಹಿಡಿದು ಹಪ್ತಾ ವಸೂಲಿಗೆ ಇಳಿದಿದ್ದಾರೆ. ನಗರದ ಲಿಂಗರಾಜಪುರ ಬಳಿ ಇರುವ ಮೆಡಿಕಲ್ ಶಾಫ್​ನಲ್ಲಿ ನಡೆದಿದೆ ಎನ್ನಲಾದ ಘಟನೆಯಲ್ಲಿ ಸ್ವಲ್ಪ ಯಾಮಾರಿದ್ದರೂ ಶಾಪ್ ಓನರ್ ನೆತ್ತರು ಹರಿಯುತಿತ್ತು. ಪುಂಡನೊಬ್ಬ ಮೆಡಿಕಲ್ ಶಾಪ್​ಗೆ ದಿಢೀರ್​ ಬಂದವನೇ ಅಂಗಡಿ ಮಾಲೀಕನ ಮೇಲೆ ಮಚ್ಚು ಬೀಸಿದ್ದಾನೆ.

ಪುಂಡನೊಬ್ಬನ ಅಟ್ಟಹಾಸಕ್ಕೆ ನಲುಗಿದ ಶಾಪ್ ಮಾಲೀಕ

ಹಣ ಕೊಡದಿದ್ದಾಗ ಮೆಡಿಕಲ್ ಶಾಪ್ ಮುಂಭಾಗದ ಶೋ ಕೇಸ್ ಗ್ಲಾಸ್ ಒಡೆದು, ಅಂಗಡಿ ಮಾಲೀಕನ ಮೇಲೇಯೇ ಮಚ್ಚು ಬೀಸಿದ್ದಾನೆ. ಪುಂಡನ ಅಟ್ಟಹಾಸಕ್ಕೆ ಬೆದರಿದ ಶಾಪ್​ ಮಾಲೀಕನಿಂದ ಹಣ ವಸೂಲಿ ಮಾಡಿದ್ದಾನೆ. ಇದೇ ವೇಳೆ ಬಂದ ಗ್ರಾಹಕ ಮಚ್ಚು ನೋಡಿದ ಕೂಡಲೇ ಪರಾರಿಯಾಗಿದ್ದಾನೆ. ಪುಂಡನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವ್ಯಕ್ತಿಯೋರ್ವ ಸೆರೆಯಾದ ಸಿಸಿಟಿವಿ ದೃಶ್ಯವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾನೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on