‘ಸಂಗೀತಾ ಕಳಪೆ, ವಿನಯ್​ ಉತ್ತಮ’: ಮುಖಕ್ಕೆ ಹೊಡೆದಂತೆ ಹೇಳಿದ ಕಾರ್ತಿಕ್​ ಮಹೇಶ್​

|

Updated on: Dec 22, 2023 | 4:15 PM

ಸಂಗೀತಾ ಶೃಂಗೇರಿ ಅವರಿಗೆ ಕಳಪೆ ಪಟ್ಟ ನೀಡಲಾಗಿದೆ. ವಿನಯ್​ ಗೌಡ ಉತ್ತಮ ಎನಿಸಿಕೊಂಡಿದ್ದಾರೆ. ಈ ಅಭಿಪ್ರಾಯ ತಿಳಿಸುವಾಗ ಕಾರ್ತಿಕ್​ ಮಹೇಶ್​ ಯಾವುದೇ ಮುಲಾಜು ನೋಡಿಲ್ಲ. ನೇರವಾಗಿ ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ. ಈ ಮೊದಲು ಸ್ನೇಹಿತರಾಗಿದ್ದ ಕಾರ್ತಿಕ್​ ಮಹೇಶ್​ ಮತ್ತು ಸಂಗೀತಾ ಶೃಂಗೇರಿ ನಡುವೆ ಈಗ ಮನಸ್ತಾಪ ಹೆಚ್ಚಾಗಿದೆ.

ಬಿಗ್ ಬಾಸ್​ ಮನೆಯಲ್ಲಿ ಪ್ರತಿ ವಾರ ಯಾರು ಕಳೆಪೆಯಾಗಿ ಆಡಿದ್ದಾರೆ? ಯಾರು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂಬುದು ತೀರ್ಮಾನ ಆಗುತ್ತದೆ. ಮನೆ ಮಂದಿಯ ಅಭಿಪ್ರಾಯದ ಆಧಾರದಲ್ಲಿ ಒಬ್ಬರಿಗೆ ಕಳಪೆ ಮತ್ತು ಇನ್ನೊಬ್ಬರಿಗೆ ಉತ್ತಮ ಎಂಬ ಪಟ್ಟ ಸಿಗುತ್ತದೆ. ಈ ವಾರ ಸಂಗೀತಾ ಶೃಂಗೇರಿ (Sangeetha Sringeri) ಅವರಿಗೆ ಕಳಪೆ ಪಟ್ಟ ನೀಡಲಾಗಿದೆ. ವಿನಯ್​ ಗೌಡ ಅವರು ಉತ್ತಮ ಎನಿಸಿಕೊಂಡಿದ್ದಾರೆ. ತಮ್ಮ ಅಭಿಪ್ರಾಯ ತಿಳಿಸುವಾಗ ಕಾರ್ತಿಕ್​ ಮಹೇಶ್​ ಅವರು ಯಾವುದೇ ಮುಲಾಜು ನೋಡಿಲ್ಲ. ನೇರವಾಗಿ ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ. ಈ ಮೊದಲು ಸ್ನೇಹಿತರಾಗಿದ್ದ ಕಾರ್ತಿಕ್​ ಮಹೇಶ್​ (Karthik Mahesh) ಮತ್ತು ಸಂಗೀತಾ ಶೃಂಗೇರಿ ನಡುವೆ ಈಗ ಮನಸ್ತಾಪ ಹೆಚ್ಚಾಗಿದೆ. ಈ ಸಂಚಿಕೆ ಡಿಸೆಂಬರ್​ 22ರ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ದಲ್ಲಿ ಪ್ರಸಾರ ಆಗಲಿದೆ. ದಿನದ 24 ಗಂಟೆಯೂ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಬಿಗ್ ಬಾಸ್ (Bigg Boss Kannada) ಕಾರ್ಯಕ್ರಮವನ್ನು ಉಚಿತವಾಗಿ ವೀಕ್ಷಿಸಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on