AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯಾರೇ ಮಧ್ಯೆ ಬಂದ್ರೂ ನಾನು ಯಾವತ್ತಿದ್ದರೂ ನಿನ್ನ ಫ್ರೆಂಡ್​’: ಕೈ ಜೋಡಿಸಿದ ವಿನಯ್​-ಕಾರ್ತಿಕ್​

ಬಿಗ್​ ಬಾಸ್​ಗೆ ಬರುವುದಕ್ಕೂ ಮುನ್ನವೇ ಕಾರ್ತಿಕ್ ಮಹೇಶ್​ ಮತ್ತು ವಿನಯ್​ ಗೌಡ ಸ್ನೇಹಿತರಾಗಿದ್ದರು. ಆದರೆ ದೊಡ್ಮನೆಯೊಳಗೆ ಅವರಿಬ್ಬರು ಕಿತ್ತಾಡುವಂತೆ ಆಯಿತು. ಈಗ ಮನೆಯ ವಾತಾವರಣ ಬದಲಾಗುತ್ತಿದೆ. ವಿನಯ್​-ಕಾರ್ತಿಕ್​ ಒಂದಾಗಿದ್ದಾರೆ. ಆದರೆ ಸಂಗೀತಾ ಶೃಂಗೇರಿ ಅವರನ್ನು ಕಂಡರೆ ವಿನಯ್​ ಗೌಡ ಅವರಿಗೆ ಆಗುವುದಿಲ್ಲ.

‘ಯಾರೇ ಮಧ್ಯೆ ಬಂದ್ರೂ ನಾನು ಯಾವತ್ತಿದ್ದರೂ ನಿನ್ನ ಫ್ರೆಂಡ್​’: ಕೈ ಜೋಡಿಸಿದ ವಿನಯ್​-ಕಾರ್ತಿಕ್​
ವಿನಯ್​ ಗೌಡ, ಕಾರ್ತಿಕ್​ ಮಹೇಶ್​
ಮದನ್​ ಕುಮಾರ್​
|

Updated on: Dec 11, 2023 | 10:11 PM

Share

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಶೋನಲ್ಲಿ ವಿನಯ್​ ಗೌಡ (Vinay Gowda) ಮತ್ತು ಕಾರ್ತಿಕ್​ ಮಹೇಶ್​ ಅವರು ಪರಮ ವೈರಿಗಳಂತೆ ಆಡುತ್ತಿದ್ದರು. ಹಲವು ಟಾಸ್ಕ್​ಗಳಲ್ಲಿ ಅವರಿಬ್ಬರು ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಸದಾ ಕಾಲ ಸಂಗೀತಾ ಶೃಂಗೇರಿ ಜೊತೆ ಇರುತ್ತಿದ್ದ ಕಾರ್ತಿಕ್​ ಮಹೇಶ್​ (Karthik Mahesh) ಅವರು ವಿನಯ್​ ಗೌಡ ಜೊತೆ ದ್ವೇಷ ಕಟ್ಟಿಕೊಂಡಿದ್ದರು. ಆದರೆ ಈಗ ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ವಾತಾವರಣ ಬದಲಾಗಿದೆ. ಕಾರ್ತಿಕ್​ ಮಹೇಶ್​ ಮತ್ತು ವಿನಯ್​ ಗೌಡ ಪರಸ್ಪರ ಕೈ ಜೋಡಿಸಿದ್ದಾರೆ. ಇದರಿಂದ ದೊಡ್ಮನೆಯ ಆಟ ಬದಲಾಗುವ ಸಾಧ್ಯತೆ ದಟ್ಟವಾಗಿದೆ.

ಸಂಗೀತಾ ಶೃಂಗೇರಿ ಅವರನ್ನು ಕಂಡರೆ ವಿನಯ್​ ಗೌಡ ಅವರಿಗೆ ಆಗುವುದಿಲ್ಲ ಎಂಬುದು ಬಹಿರಂಗ ಸತ್ಯ. ಬಿಗ್​ ಬಾಸ್​ಗೆ ಬರುವುದಕ್ಕೂ ಮುನ್ನವೇ ಕಾರ್ತಿಕ್ ಮಹೇಶ್​ ಮತ್ತು ವಿನಯ್​ ಗೌಡ ಸ್ನೇಹಿತರಾಗಿದ್ದರು. ಆದರೆ ದೊಡ್ಮನೆಯೊಳಗೆ ಅವರಿಬ್ಬರು ಕಿತ್ತಾಡುವಂತೆ ಆಯಿತು. ಇದಕ್ಕೆಲ್ಲ ಸಂಗೀತಾ ಶೃಂಗೇರಿ ಕಾರಣ ಎಂಬ ಅನಿಸಿಕೆ ಹಲವರದ್ದು. ಈಗ ಕಾರ್ತಿಕ್ ಮಹೇಶ್​ ಮತ್ತು ವಿನಯ್​ ಗೌಡ ಅವರು ಸ್ನೇಹದಿಂದ ಆಟ ಮುಂದುವರಿಸಲು ನಿರ್ಧರಿಸಿದ್ದಾರೆ.

‘ನಿನ್ನತನ ನೀವು ಬಿಟ್ಟುಕೊಡಬೇಡ, ನನ್ನತನ ನಾನು ಬಿಟ್ಟುಕೊಡಲ್ಲ. ನೀನು ಚೆನ್ನಾಗಿ ಆಡುತ್ತಿದ್ದೀಯ. ನಮ್ಮ ಮಧ್ಯೆ ಯಾರೇ ಬಂದರೂ ಕೂಡ ಯಾವತ್ತಿದ್ದರೂ ನೀನು ನನ್ನ ಫ್ರೆಂಡ್​’ ಎಂದು ವಿನಯ್​ ಗೌಡ ಹೇಳಿದ್ದಾರೆ. ಅದಕ್ಕೆ ಕಾರ್ತಿಕ್​ ಮಹೇಶ್​ ಕೂಡ ಹೌದು ಎಂದಿದ್ದಾರೆ. ಇಬ್ಬರೂ ಕೂಡ ಕೈ ಜೋಡಿಸಿದ್ದು, ಇನ್ಮುಂದೆ ಅವರ ಆಟದ ವೈಖರಿ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ: ‘ಕಣ್ಣು ತೆಗೆದುಬಿಡಿ..’: ವೈದ್ಯರಿಗೆ ಸಂಗೀತಾ ಶೃಂಗೇರಿ ಹೀಗೆ ಹೇಳಿದ್ದು ಯಾಕೆ?

ಸಂಗೀತಾ ಶೃಂಗೇರಿ ಅವರ ಕಣ್ಣಿಗೆ ನೋವಾಗಿದೆ. ಅದು ಇನ್ನೂ ಸರಿ ಆಗಿಲ್ಲ. ಅವರ ಓಲೈಸಲು ಕಾರ್ತಿಕ್​ ಮಹೇಶ್​ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಅವರ ನಡುವಿನ ಸಂಬಂಧ ಈಗ ಮೊದಲಿನಂತೆ ಇಲ್ಲ. ಅಪಾರ್ಥ ಮಾಡಿಕೊಳ್ಳುವುದು, ಪದೇ ಪದೇ ಜಗಳ ಆಡುವುದು ಮುಂದುವರಿದಿದೆ. ಇದು ಇಬ್ಬರ ಆಟದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ದಿನ ಕಳೆದಂತೆಲ್ಲ ಪೈಪೋಟಿ ಜೋರಾಗುವುದರಿಂದ ಸ್ನೇಹ, ಮುಲಾಜು ಬಿಟ್ಟು ಆಟ ಆಡುವುದು ಅನಿವಾರ್ಯ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?