ವಿಜಯ್ ರಾಘವೇಂದ್ರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿದ ಕಿಚ್ಚ ಸುದೀಪ್
Sudeep-Vijay: ಇತ್ತೀಚೆಗಷ್ಟೆ ಪತ್ನಿ ಸ್ಪಂದನಾರನ್ನು ಕಳೆದುಕೊಂಡಿರುವ ನಟ ವಿಜಯ್ ರಾಘವೇಂದ್ರ ನಿವಾಸಕ್ಕೆ ಕಿಚ್ಚ ಸುದೀಪ್ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ವಿಜಯ್ ರಾಘವೇಂದ್ರ ಸಹೋದರ, ನಟ ಶ್ರೀಮುರಳಿ ಹಾಜರಿದ್ದರು.
ಇತ್ತೀಚೆಗಷ್ಟೆ ಪತ್ನಿ ಸ್ಪಂದನಾರನ್ನು (Spandana) ಕಳೆದುಕೊಂಡು ದುಖಃದಲ್ಲಿರುವ ನಟ ವಿಜಯ್ ರಾಘವೇಂದ್ರ (Vijay Raghavendra) ಅವರನ್ನು ಇಂದು (ಸೆಪ್ಟೆಂಬರ್ 1) ರಂದು ಕಿಚ್ಚ ಸುದೀಪ್ ಭೇಟಿಯಾಗಿ ಸಾಂತ್ವನ ಹೇಳಿದರು. ವಿಜಯ್ ರಾಘವೇಂದ್ರ ಅವರ ಜಕ್ಕೂರಿನ ಮನೆಗೆ ಸುದೀಪ್ ಭೇಟಿ ನೀಡಿದ್ದರು. ವಿಜಯ್ ರಾಘವೇಂದ್ರ ಅವರೊಟ್ಟಿಗೆ ಕೆಲ ಕಾಲ ಮಾತನಾಡಿ ಅವರಿಗೆ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಸಹನಟನನ್ನು ಗಟ್ಟಿಯಾಗಿ ಅಪ್ಪಿಕೊಂಡು ಧೈರ್ಯ ತುಂಬುವ ಪ್ರಯತ್ನವನ್ನು ಸುದೀಪ್ ಮಾಡಿದರು. ಈ ಸಂದರ್ಭದಲ್ಲಿ ವಿಜಯ್ ರಾಘವೇಂದ್ರ ಸಹೋದರ ಶ್ರೀಮುರಳಿ ಸಹ ಜೊತೆಗಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us