‘ಉತ್ತಮ ಸಮಾಜಕ್ಕಾಗಿ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಟಿವಿ9 ಕನ್ನಡ ಆರಂಭಯಿತು. ಕರ್ನಾಟಕ ಜನತೆಯ ಪ್ರೀತಿ ಹಾಗೂ ಬೆಂಬಲದೊಂದಿಗೆ ವಾಹಿನಿಯು 15 ವರ್ಷ ಪೂರೈಸಿದೆ. ಅಷ್ಟೇ ಅಲ್ಲ, ನಂಬರ್ ಒನ್ ಸ್ಥಾನವನ್ನು ಕಾಯ್ದುಕೊಂಡಿದೆ. ಟಿವಿ9 ಕನ್ನಡ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಶುಭಕೋರುತ್ತಿದ್ದಾರೆ. ಈ ವಿಶೇಷ ದಿನದಂದು ನಟ ಕಿಚ್ಚ ಸುದೀಪ್ ಕೂಡ ಟಿವಿ9 ಕನ್ನಡಕ್ಕೆ ಸಂದೇಶವೊಂದನ್ನು ನೀಡಿದ್ದಾರೆ. ‘15 ವರ್ಷ, ಒಂದೂವರೆ ದಶಕ. ಈ ಅವಧಿಯಲ್ಲಿ ಒಳ್ಳೆಯ ಗುಣಮಟ್ಟ ಹಾಗೂ ಸ್ಥಾನವನ್ನು ನಿರ್ವಹಣೆ ಮಾಡುತ್ತಾ ಸಾಗುತ್ತಿರುವ ಟಿವಿ9 ಕನ್ನಡಕ್ಕೆ ನಾನು ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದೇನೆ. ಆಲ್ ದಿ ಬೆಸ್ಟ್. ಇದು ದೊಡ್ಡ ಸಾಧನೆ. ಇದರಲ್ಲಿ ಎಲ್ಲರೂ ಪಾಲ್ಗೊಂಡಿದ್ದೀರಿ. ಟಿವಿ9 ಕನ್ನಡದ ಇಡೀ ತಂಡಕ್ಕೆ, ಸಂಸ್ಥೆಗೆ ಅಭಿನಂದನೆಗಳು’ ಎಂದಿದ್ದಾರೆ ಕಿಚ್ಚ. ಸಿನಿಮಾ ವಿಚಾರಕ್ಕೆ ಬರೋದಾದರೆ, ಸುದೀಪ್ ‘ವಿಕ್ರಾಂತ್ ರೋಣ’ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಫೆಬ್ರವರಿ 24ರಂದು ತೆರೆಗೆ ಬರುತ್ತಿದೆ.
ಇದನ್ನೂ ಓದಿ: Vikrant Rona: ಫೆ.24ಕ್ಕೆ ‘ವಿಕ್ರಾಂತ್ ರೋಣ’ ರಿಲೀಸ್; ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರದಿಂದ ಬಿಗ್ ನ್ಯೂಸ್
Published On - 10:41 am, Thu, 9 December 21