AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಿತ್ಯ ಎಲ್1 ಮಿಷನ್ ಲಾಂಚ್; ಧಾರವಾಡದ ನರ್ಸರಿ ಶಾಲೆಯೊಂದರ ಪುಟಾಣಿಗಳಿಂದ ನಾಟಕ ಪ್ರದರ್ಶನ

ಆದಿತ್ಯ ಎಲ್1 ಮಿಷನ್ ಲಾಂಚ್; ಧಾರವಾಡದ ನರ್ಸರಿ ಶಾಲೆಯೊಂದರ ಪುಟಾಣಿಗಳಿಂದ ನಾಟಕ ಪ್ರದರ್ಶನ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Sep 02, 2023 | 11:10 AM

Share

ಶಾಲೆಯ ಪುಟಾಣಿಗಳು ಭೂಮಿ, ಚಂದ್ರ, ಸೂರ್ಯ, ಪ್ರಗ್ಯಾನ್ ಮೊದಲಾದವುಗಳನ್ನು ಪ್ರತಿಬಿಂಬಿಸುವ ವೇಷಗಳನ್ನು ತೊಟ್ಟು ತಮಗೆ ಶಿಕ್ಷಕಿಯರು ಹೇಳಿಕೊಟ್ಟ ಮಾತುಗಳನ್ನಾಡಿದರು. ಮಕ್ಕಳ ಅಭಿನಯ, ತೊದಲು ನುಡಿಗಳ ಡೈಲಾಗ್ ಡೆಲಿವರಿ ಪೋಷಕರಿಗೆ ಮತ್ತು ಶಾಲಾ ಆವರಣದಲ್ಲಿ ನೆರೆದಿದ್ದ ಜನರ ಮನಸ್ಸಿಗೆ ಮುದನೀಡಿತು.

ಧಾರವಾಡ: ಭಾರತದಲ್ಲಿ ಇಂದು ಹಬ್ಬದ ವಾತಾವರಣ ಮನೆ ಮಾಡಿದೆ. ಆದಿತ್ಯ ಎಲ್1 ಮಿಷನ್ ಲಾಂಚ್ (Aditya L1 Mission launch) ಇವತ್ತಿನ ಸಂಭ್ರಮಕ್ಕೆ ಕಾರಣ ಅಂತ ನಿಮಗೂ ಗೊತ್ತು. ಹಲವಾರು ಕಡೆಗಳಲ್ಲಿ ಜನ ದೇವಸ್ಥಾನಗಳಿಗೆ ತೆರಳಿ ಈ ಮಿಷನ್ ಕೂಡ ಚಂದ್ರಯಾನ-3 (Chandrayaan-3) ಆಭಿಯಾನದಂತೆ ಸಫಲವಾಗಲಿ ಅಂತ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಧಾರವಾಡದ ಜೆಎಸ್​ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ನರ್ಸರಿ (nursery school kids) ವಿಭಾಗದ ಮಕ್ಕಳು, ಆದಿತ್ಯ ಎಲ್1 ಮಿಷನ್ ಲಾಂಚ್ ಶುಭ ಸಂದರ್ಭದಲ್ಲಿ ಚಂದ್ರಯಾನ-3 ಮತ್ತು ಇವತ್ತಿನ ಲಾಂಚ್ ಗೆ ಸಂಬಂಧಿಸಿದಂತೆ ನಾಟಕ ಪ್ರದರ್ಶಿಸಿದರು. ಶಾಲೆಯ ಪುಟಾಣಿಗಳು ಭೂಮಿ, ಚಂದ್ರ, ಸೂರ್ಯ, ಪ್ರಗ್ಯಾನ್ ಮೊದಲಾದವುಗಳನ್ನು ಪ್ರತಿಬಿಂಬಿಸುವ ವೇಷಗಳನ್ನು ತೊಟ್ಟು ತಮಗೆ ಶಿಕ್ಷಕಿಯರು ಹೇಳಿಕೊಟ್ಟ ಮಾತುಗಳನ್ನಾಡಿದರು. ಮಕ್ಕಳ ಅಭಿನಯ, ತೊದಲು ನುಡಿಗಳ ಡೈಲಾಗ್ ಡೆಲಿವರಿ ಪೋಷಕರಿಗೆ ಮತ್ತು ಶಾಲಾ ಆವರಣದಲ್ಲಿ ನೆರೆದಿದ್ದ ಜನರ ಮನಸ್ಸಿಗೆ ಮುದನೀಡಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.