ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?

| Updated By: ಮದನ್​ ಕುಮಾರ್​

Updated on: Sep 11, 2024 | 8:25 PM

ಸಿನಿಮಾದ ಪ್ರಚಾರಕ್ಕಾಗಿ ಹಲವು ತಂತ್ರಗಳನ್ನು ಮಾಡಲಾಗುತ್ತದೆ. ಕಿರಣ್​ ರಾಜ್​ ಕೂಡ ಅದೇ ಹಾದಿ ತುಳಿದಿದ್ದಾರಾ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಿದೆ. ಈ ಕುರಿತು ಅವರ ಆಪ್ತರು ಪ್ರತಿಕ್ರಿಯೆ ನೀಡಿದ್ದಾರೆ. ರಸ್ತೆ ಅಪಘಾತ ಆಗಿದ್ದು ಎಲ್ಲಿ ಮತ್ತು ಯಾವಾಗ ಎಂಬ ಬಗ್ಗೆ ಗಿರೀಶ್​ ಅವರು ಮಾಹಿತಿ ನೀಡಿದ್ದಾರೆ. ಗಿಮಿಕ್​ ಬಗ್ಗೆ ಎದುರಾದ ಪ್ರಶ್ನೆಗೂ ಅವರು ಉತ್ತರಿಸಿದ್ದಾರೆ.

‘ನಮ್ಮ ಸಿನಿಮಾದ ಪ್ರೀಮಿಯರ್​ ಶೋ ಇತ್ತು. ಅದನ್ನು ಮುಗಿಸಿ ಆಶ್ರಮಕ್ಕೆ ಹೋಗಿ ಬರುವಾಗ ರಾತ್ರಿ 9.45ರ ಸುಮಾರಿಗೆ ಅಪಘಾತ ಆಯಿತು. ನಾನು ಕಾರು ಓಡಿಸುತ್ತಿದ್ದೆ. ಕಿರಣ್​ ರಾಜ್​ ಹಿಂದೆ ಕುಳಿತಿದ್ದರು. ಇದು ಪ್ರಚಾರದ ಗಿಮಿಕ್ ಅಲ್ಲ. ನಮಗೆ ಮಾಡಲು ಸಾಕಷ್ಟು ಕೆಲಸ ಇದೆ. ತಕ್ಷಣ ನಿರ್ಮಾಪಕರು ಬಂದು ಕಿರಣ್ ರಾಜ್​ ಅವರನ್ನು ಆಸ್ಪತ್ರೆಗೆ ದಾಖಲಿಸಿದರು’ ಎಂದು ಕಿರಣ್​ ರಾಜ್​ ಜೊತೆಗಿದ್ದ ಗಿರೀಶ್​ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on