ಮಜ್ಜಿಗೆ ಹಾಗೂ ಕುಡಿಯುವ ನೀರಿನ ಪ್ಯಾಕೇಟ್​​ಗಾಗಿ ಮುಗಿಬಿದ್ದ ಜನರು: ಕಸದಂತೆ ಬಿಸಾಡಿದ ಸಿಬ್ಬಂದಿ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 11, 2023 | 7:18 PM

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಡ್ಯಾಂನ್ನು ಸಿಎಂ ಸಿದ್ದರಾಮಯ್ಯ ಇಂದು ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಮಜ್ಜಿಗೆ ಹಾಗೂ ಕುಡಿಯುವ ನೀರಿನ ಪ್ಯಾಕೇಟ್​​ಗಾಗಿ ಜನರು ಮುಗಿಬಿದ್ದಿರುವಂತಹ ಘಟನೆ ಕಂಡುಬಂದಿದೆ. ಒಂದೆಡೆ ಸೇರಿದ್ದ ಜನರಿಗೆ ವಿತರಿಸದೇ ದೂರದಿಂದ ಸಿಬ್ಬಂದಿಗಳು ಬಿಸಾಡಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಲಾರ, ನವೆಂಬರ್​​​​ 11: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಡ್ಯಾಂ (yaragol dam) ನ್ನು ಸಿಎಂ ಸಿದ್ದರಾಮಯ್ಯ ಇಂದು ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಮಜ್ಜಿಗೆ ಹಾಗೂ ಕುಡಿಯುವ ನೀರಿನ ಪ್ಯಾಕೇಟ್​​ಗಾಗಿ ಜನರು ಮುಗಿಬಿದ್ದಿರುವಂತಹ ಘಟನೆ ಕಂಡುಬಂದಿದೆ. ಅಷ್ಟೇ ಅಲ್ಲದೆ ಕಸದಂತೆ ಮಜ್ಜಿಗೆ, ನೀರಿನ ಪ್ಯಾಕ್​​ ಬಿಸಾಡಿದ ಸಿಬ್ಬಂದಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೆಡೆ ಸೇರಿದ್ದ ಜನರಿಗೆ ವಿತರಿಸದೇ ದೂರದಿಂದ ಸಿಬ್ಬಂದಿಗಳು ಬಿಸಾಡಿದ್ದಾರೆ ಎನ್ನಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Follow us on