18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.
ಕೋಲಾರದಲ್ಲಿ ಆರಂಭವಾಗಲಿದೆ ಮಿನಿ ಹೆಲಿಕಾಪ್ಟರ್ ನಿರ್ಮಾಣ ಮಾಡುವ ಟಾಟಾ ಕಂಪನಿ ಘಟಕ
ಟಾಟಾ ಕಂಪನಿಯು ಕೋಲಾರದಲ್ಲಿ ಮಿನಿ ಹೆಲಿಕಾಪ್ಟರ್ಗಳ ಉತ್ಪಾದನಾ ಘಟಕವನ್ನು ಆರಂಭಿಸಲಿದೆ. 2026ರ ವೇಳೆಗೆ ಕಾರ್ಯಾರಂಭಿಸುವ ಈ ಘಟಕವು ವಾರ್ಷಿಕವಾಗಿ 10 ಹೆಚ್ 125 ಮಾದರಿಯ ಹೆಲಿಕಾಪ್ಟರ್ಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ಈ ಘಟಕವು ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಕೋಲಾರದ ಆರ್ಥಿಕ ಪ್ರಗತಿಗೆ ಪ್ರಮುಖ ಕೊಡುಗೆ ನೀಡಲಿದೆ. ಈಗಾಗಲೇ ಐಫೋನ್ ಜೋಡಣೆ ಮತ್ತು ರಕ್ಷಣಾ ಉಪಕರಣಗಳ ಘಟಕಗಳು ಕೋಲಾರದಲ್ಲಿ ಕಾರ್ಯನಿರ್ವಹಿಸುತ್ತಿವೆ.
- Rajendra Simha BL
- Updated on: Jul 30, 2025
- 10:43 pm
ಕೆಂಪು ಸುಂದರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು: 100ರ ಗಡಿಯತ್ತ ಟೊಮ್ಯಾಟೊ ಬೆಲೆ
ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಂಪು ಸುಂದರಿ ಟೊಮ್ಯಾಟೊ ಆಟ ಆರಂಭವಾಗಿದೆ. ಕಳೆದ ಒಂದು ವಾರದಿಂದ ಟೊಮ್ಯಾಟೊ ದರ 700 ರಿಂದ 800 ಗಡಿ ದಾಟಿದ್ದು, ಕಳೆದ ವರ್ಷದಂತೆ ಈ ವರ್ಷವೂ ಸಹ ಟೊಮ್ಯಾಟೊ ಸಾವಿರ ರೂಪಾಯಿ ಗಡಿ ದಾಟುವ ಸೂಚನೆ ಕೊಟ್ಟಿದೆ.
- Rajendra Simha BL
- Updated on: Jul 27, 2025
- 6:52 pm
ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಆರೋಪ: ಕೋಲಾರದ ಬಾಲಕ ಅರೆಸ್ಟ್
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ದ್ಯಾವರಹಳ್ಳಿ ಗ್ರಾಮದ ಬಾಲಕನನ್ನು ಆಂತರಿಕ ಭದ್ರತಾ ಮತ್ತು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಬಾಲಕನು ಉಗ್ರವಾದಿ ಸಂಘಟನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಹುಡುಕಾಟ ನಡೆಸುತ್ತಿದ್ದನೆಂದು ತಿಳಿದುಬಂದಿದೆ. ಅವನನ್ನು ವಿಚಾರಣೆ ನಡೆಸಿದ ನಂತರ ಬೇತಮಂಗಲ ಪೊಲೀಸರಿಗೆ ಒಪ್ಪಿಸಲಾಗಿದೆ ಮತ್ತು ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
- Rajendra Simha BL
- Updated on: Jul 26, 2025
- 7:10 pm
ಭಯೋತ್ಪಾದ ಮನಸ್ಥಿತಿ ಬದಲಿಸಬೇಕಿದ್ದ ಕರ್ನಾಟಕದ ಮನೋವೈದ್ಯನೇ ಉಗ್ರನಿಗೆ ಮನಸೋತ..!
2008 ರಲ್ಲಿ ಬೆಂಗಳೂರಿನ ಸರಣಿ ಸ್ಫೋಟದ ಪ್ರಮುಖ ಆರೋಪಿ ಸದ್ಯ ಪರಪ್ಪನ ಅಗ್ರಹಾರ ಜೈಲುಪಾಲಾಗಿರುವ ಉಗ್ರ ನಾಸೀರ್ ಗೆ ನೆರವು ನೀಡಿದ ಆರೋಪದಡಿ NIA ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನ ಮೂವರನ್ನು ಬಂಧಿಸಿದ್ದು, ಕೋಲಾರದ ಓರ್ವನಿಗೆ ನೋಟೀಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಜೈಲಿನಲ್ಲಿ ಉಗ್ರನ ಮನಸ್ಥಿತಿ ಬದಲಿಸಬೇಕಿದ್ದ ಮನೋವೈದ್ಯನೇ ಉಗ್ರನಿಗೆ ಮನಸೋತಿದ್ದಾನೆ. ಯಾರು ಈ ಉಗ್ರ ನಾಸೀರ್? ಉಗ್ರನ ಹಣಕ್ಕೆ ಮನಸೋತನಾ ಮನೋವೈಧ್ಯನ ಕಂಪ್ಲೀಟ್ ಡಿಟೇಲ್ಸ್.
- Rajendra Simha BL
- Updated on: Jul 9, 2025
- 9:03 pm
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆಯೇ ಕೈಕೊಟ್ಟ ಪ್ರಿಯಕರ..!
ಗಂಡನನನ್ನು ಬಿಟ್ಟು ಆತನ ಸ್ನೇಹಿತ ಲವ್ ಬಲೆಗೆ ಬಿದ್ದಿದ್ದ ವಿವಾಹಿತ ಮಹಿಳೆ ಇದೀಗ ಬೀದಿಪಾಲಾಗಿದ್ದಾಳೆ. ಅತ್ತ ಗಂಡನನ್ನು ಬಿಟ್ಟು ಬಂದಿದ್ದ ಮಹಿಳೆಗೆ ಪ್ರಿಯಕರ ಸಹ ಕೈಕೊಟ್ಟಿದ್ದಾನೆ. ಇದರಿಂದ ಮಹಿಳೆ ಕಂಗಾಲಾಗಿದ್ದು, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಗಂಡನ ಸ್ನೇಹಿತ ಪ್ರಿಯಕ ಮನೆ ಮುಂದೆ ಪ್ರತಿಭಟನೆ ಕುಳಿತ್ತಿದ್ದಾಳೆ.
- Rajendra Simha BL
- Updated on: Jul 7, 2025
- 10:19 pm
ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಹೃದಯಾಘಾತದಿಂದ ನಿಧನರಾಗಿ ಒಂದು ತಿಂಗಳ ನಂತರ, ಅವರ ಕೊಠಡಿಯಲ್ಲಿ ಮಾಟಮಂತ್ರದ ವಸ್ತುಗಳು ಪತ್ತೆಯಾಗಿವೆ. ಇದು ಸದ್ಯ ಅವರ ಕುಟುಂಬಸ್ಥರಿಗೆ ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಆಘಾತ ಉಂಟುಮಾಡಿದೆ. ಈ ಬಗ್ಗೆ ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- Rajendra Simha BL
- Updated on: Jul 7, 2025
- 9:56 pm
ಕೋಲಾರದಲ್ಲಿ ರಾಜ್ಯದ ಎಣ್ಣೆ ಕಿಕ್ ಇಳಿಸಿದ ಆಂಧ್ರದ ಹೊಸ ಅಬಕಾರಿ ನೀತಿ, ಏನದು?
ಆಂಧ್ರ ಪ್ರದೇಶದಲ್ಲಿನ ಹೊಸ ಆಬಕಾರಿ ನೀತಿಯಿಂದ ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ಮದ್ಯ ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಆಂಧ್ರದಲ್ಲಿ ಮದ್ಯದ ಬೆಲೆ ಕಡಿಮೆಯಾದ ಕಾರಣ, ಆಂಧ್ರದ ಜನರು ಕರ್ನಾಟಕಕ್ಕೆ ಬಂದು ಮದ್ಯ ಖರೀದಿಸುವುದನ್ನು ಕಡಿಮೆ ಮಾಡಿದ್ದಾರೆ. ಇದರಿಂದ ಕೋಲಾರದ ಬಾರ್ಗಳು ಮತ್ತು ಮದ್ಯ ಮಾರಾಟಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರದ ಆದಾಯದ ಮೇಲೂ ಇದರಿಂದ ದುಷ್ಪರಿಣಾಮ ಬೀರಿದೆ.
- Rajendra Simha BL
- Updated on: Jul 6, 2025
- 10:49 pm
ಕೋಲಾರ ಹಾಲು ಒಕ್ಕೂಟ ಚುನಾವಣೆ: ಮೂರನೇ ಬಾರಿಗೆ ಅಧ್ಯಕ್ಷರಾದ ಕೆವೈ ನಂಜೇಗೌಡ
ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಶಾಸಕ ಕೆವೈ ನಂಜೇಗೌಡ ಮೂರನೆ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಬ್ಬರು ಕಾಂಗ್ರೆಸ್ ಶಾಸಕರಿಗೆ ಪ್ರತಿಷ್ಠೆಯಾಗಿದ್ದ ಅಧ್ಯಕ್ಷ ಸ್ಥಾನ ಕೊನೆಗೂ ವರಿಷ್ಠರ ನಿರ್ದೇಶನದಂತೆ ಕೆವೈ ನಂಜೇಗೌಡ ಪಾಲಾಗಿದೆ. ಈ ಮಧ್ಯೆ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಸೆಯನ್ನೂ ಶಾಸಕ ನಂಜೇಗೌಡ ವ್ಯಕ್ತಪಡಿಸಿದ್ದಾರೆ.
- Rajendra Simha BL
- Updated on: Jul 5, 2025
- 6:53 pm
2ನೇ ಆಷಾಡ ಶುಕ್ರವಾರ: ಚಾಮುಂಡೇಶ್ವರಿ ಜತೆಗೆ ಕೋಲಾರಮ್ಮನ ಅಲಂಕಾರ ನೋಡಿ
ಎರಡನೇ ಆಷಾಢ ಶುಕ್ರವಾರದಂದು ಕೋಲಾರದ ಕೋಲಾರಮ್ಮ ಮತ್ತು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ಕೋಲಾರಮ್ಮ ದೇವಸ್ಥಾನಕ್ಕೆ ಮಾವಿನ ಹಣ್ಣಿನಿಂದ ಅಲಂಕಾರ ಮಾಡಲಾಯಿತು. ಸಾವಿರಾರು ಭಕ್ತರು ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿ ಮತ್ತು ಕೋಲಾರದಲ್ಲಿ ಕೋಲಾರಮ್ಮನ ದೇವರ ದರ್ಶನ ಪಡೆದು ಪುನೀತರಾದರು.
- Rajendra Simha BL
- Updated on: Jul 4, 2025
- 6:43 pm
ಪ್ರೀತಿಸುತ್ತಿದ್ದ ಯುವತಿಯೊಂದಿಗೆ ವಿವಾಹ: ಮದ್ವೆಯಾದ ರಾತ್ರಿಯೇ ನವವಿವಾಹಿತ ದುರಂತ ಸಾವು
ಸದ್ಯಕ್ಕೆ ಮದುವೆ ಬೇಡ ಎನ್ನುತ್ತಿದ್ದ ಆ ಹುಡುಗನಿಗೆ ನಿನ್ನೆಯಷ್ಟೇ (ಜುಲೈ 02) ಪ್ರೀತಿಸಿದ್ದ ಹುಡುಗಿಯ ಸಂಬಂಧಿಕರ ಮುಂದಾಳತ್ವದಲ್ಲಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆ ಮಾಡಲಾಗಿದೆ. ಮನೆ ಕಟ್ಟಿ ಮದುವೆಯಾಗುತ್ತೇನೆ ಎನ್ನುತ್ತಿದ್ದವನಿಗೆ ಏಕಾಏಕಿ ಮದುವೆ ಮಾಡಿದ್ದಾರೆ. ಆದ್ರೆ, ಮದುವೆಯಾದ ರಾತ್ರಿಯೇ ಯುವಕ ದುರಂತ ಸಾವು ಕಂಡಿದ್ದಾನೆ. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
- Rajendra Simha BL
- Updated on: Jul 3, 2025
- 4:36 pm
ಕೋಲಾರ ಜಿಲ್ಲಾ ಕಾಂಗ್ರೆಸ್ ಗುಂಪುಗಾರಿಕೆ ಮಧ್ಯೆ ಕೋಮುಲ್ ಅಧ್ಯಕ್ಷ ಗಾದಿಗೆ ದಲಿತ ಕಾರ್ಡ್ ಗೇಮ್!
ಕೋಲಾರ ಹಾಲು ಒಕ್ಕೂಟದ ಚುನಾವಣೆಯಲ್ಲಿ ಇತಿಹಾಸ ನಿರ್ಮಾಣವಾಗಿದೆ. ಮೊದಲ ಬಾರಿಗೆ ಪರಿಶಿಷ್ಟ ಜಾತಿಯವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಕಾಂಗ್ರೆಸ್ನ ಎರಡು ಬಣಗಳ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಪರಿಶಿಷ್ಟ ಜಾತಿಯ ನಿರ್ದೇಶಕರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಒತ್ತಾಯ ಜೋರಾಗಿದೆ.
- Rajendra Simha BL
- Updated on: Jun 30, 2025
- 10:06 am
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ…?
ಕೆಂಪೇಗೌಡರನ್ನ ಬೆಂಗಳೂರು ನಗರ ನಿರ್ಮಾತೃ ಎಂದೇ ಕರೆಯಲಾಗುತ್ತೆ. ಇಂತಹ ಮಹಾತ್ಮ ದಿನಾಚರಣೆಯನ್ನು ಇಂದು (ಜೂನ್ 27) ರಾಜ್ಯದೆಲ್ಲೆಡೆ ಆಚರಿಸಲಾಗಿದೆ. ಆದ್ರೆ, ಕೋಲಾರದಲ್ಲಿ ಕೆಂಪೇಗೌಡ ಜಯಂತಿ ಮೆರವಣಿಯಲ್ಲಿ ಮಂಗಳಮುಖಿಯರು ಅಶ್ಲೀಲವಾಗಿ ನೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ. ಹೌದು...ಕೋಲಾರದಲ್ಲಿಂದು ಕೆಂಪೇಗೌಡ ಜಯಂತಿಯಲ್ಲಿ ಮಂಗಳಮುಖಿಯರು ಅರೆ ಬೆರೆ ಬಟ್ಟೆ ತೊಟ್ಟು ಯುವಕರೊಂದಿಗೆ ಅಶ್ಲೀಲ ಪ್ರಚೋದನಾ ನೃತ್ಯ ಮಾಡಿದ್ದಾರೆ. ಈ ವಿಡಿಯೋಗೆ ಭಾರೀ ಟೀಕೆಗಳು ವ್ಯಕ್ತವಾಗಿದ್ದು, ಮಹಾತ್ಮನ ಜಯಂತಿ ವೇಳೆ ಇದೆಲ್ಲಾ ಬೇಕಿತ್ತಾ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
- Rajendra Simha BL
- Updated on: Jun 27, 2025
- 5:54 pm