18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.
ತಲೆಮಾರಿಗೊಮ್ಮೆ ನಡೆಯುವ ಹುಟ್ಟೂರಿನ ಹಬ್ಬದಲ್ಲಿ ಕೃಷ್ಣಬೈರೇಗೌಡ: 29 ವರ್ಷಕ್ಕೊಮ್ಮೆ ನಡೆಯುವ ಜಾತ್ರೆ
ಅದು ತಲೆಮಾರಿಗೊಮ್ಮೆ ನಡೆಯುವ ಊರ ಹಬ್ಬ ದೇವರ ಉತ್ಸವ, ಸ್ವತಂತ್ರ್ಯ ಬಂದ ಹೊಸದರಲ್ಲಿ ಅಂದರೆ 1952 ರಲ್ಲಿ ನಡೆದಿದ್ದ ಊರ ಹಬ್ಬ ನಂತರದಲ್ಲಿ 1996 ರಲ್ಲಿ ನಡೆದಿತ್ತು ಸದ್ಯ ಈಗ 29 ವರ್ಷಗಳ ನಂತರ ಊರ ಅಬ್ಬ ಅದ್ದೂರಿಯಾಗಿ ಆಯೋಜನೆಗೊಂಡಿದೆ. ಅಷ್ಟಕ್ಕು, ಅದು ಯಾವ ಊರ ಹಬ್ಬ? ಫೋಟೋಸ್ ನೋಡಿ.
- Rajendra Simha BL
- Updated on: Apr 18, 2025
- 8:45 pm
ಬರೋಬ್ಬರಿ 57 ವರ್ಷಗಳ ನಂತರ ಸಿಕ್ತು ನೂರಾರು ಕೋಟಿ ರೂ. ಬೆಲೆ ಬಾಳುವ PWD ಆಸ್ತಿ
ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ರಸ್ತೆ ಮತ್ತು ರೈಲ್ವೆ ಲೈನ್ ನಿರ್ಮಾಣಕ್ಕಾಗಿ 57 ವರ್ಷಗಳ ಹಿಂದೆ ಸರ್ಕಾರ ರೈತರಿಂದ ಭೂ ಸ್ವಾಧೀನಪಡಿಸಿಕೊಂಡಿತ್ತು. ರಸ್ತೆ ಮತ್ತು ರೈಲ್ವೆ ಲೈನ್ ನಿರ್ಮಾಣ ಕಾರ್ಯವಾದ ಬಳಿಕ, ಉಳಿದ ಭೂಮಿಯನ್ನು ಹಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಿಳಿಯದೆ ಲೋಕೋಪಯೋಗಿ ಇಲಾಖೆ ಇತ್ತ ತಲೆ ಸಹಿತ ಹಾಕಿರಲಿಲ್ಲ. ಆದರೆ, ಇದೀಗ ಏಕಾಏಕಿ ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ ಜೊತೆಗೂಡಿ ಈ ಭೂಮಿಯ ಗಡಿ ಗುರುತು ಮಾಡಲು ಮುಂದಾಗಿದೆ. ಮುಂದೇನಾಯ್ತು? ಇಲ್ಲಿದೆ ವಿವರ
- Rajendra Simha BL
- Updated on: Apr 9, 2025
- 9:35 pm
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿಗಳು: ರೋಗಿಗಳು ಬೇರೆಡೆ ಶಿಫ್ಟ್
ಕೋಲಾರ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿನ ಏರ್ ಕಂಡಿಷನರ್ ಒಂದು ವಾರದಿಂದ ಕೆಟ್ಟಿದ್ದು, ರೋಗಿಗಳು ತೀವ್ರ ಬಿಸಿಲಿನಿಂದ ಪರದಾಡುತ್ತಿದ್ದಾರೆ. ಕೆಲ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಟಿವಿ9 ವರದಿ ಬಳಿಕ ರೋಗಿಗಳನ್ನು ಇನ್ನೊಂದು ಐಸಿಯುಗೆ ಸ್ಥಳಾಂತರಿಸಲಾಗಿದೆ. ಈ ಘಟನೆಯಿಂದ ಆಸ್ಪತ್ರೆಯ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ.
- Rajendra Simha BL
- Updated on: Apr 7, 2025
- 3:34 pm
ಕಾರು ಅಡ್ಡಗಟ್ಟಿ 3.5 ಕೆಜಿ ಚಿನ್ನ ರಾಬರಿ: ಕೋಲಾರ ನಗರಸಭೆ ಕಾಂಗ್ರೆಸ್ ಸದಸ್ಯ ಅರೆಸ್ಟ್!
ಕೋಲಾರ ಜಿಲ್ಲೆಯ ಕೆಜಿಎಫ್ನ ಕಾಂಗ್ರೆಸ್ ಮುಖಂಡ ಹಾಗೂ ಹಾಲಿ ನಗರಸಭೆ ಸದಸ್ಯನನ್ನು ಆಂಧ್ರ ಪೊಲೀಸರು ಚಿನ್ನ ದರೋಡೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ದರೋಡೆಕೋರರು ತಮಿಳುನಾಡಿನಿಂದ ಬರುತ್ತಿದ್ದ ಚಿನ್ನದ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ 3.5 ಕೆಜಿ ಚಿನ್ನ ದೋಚಿದ್ದರು. ಸದ್ಯ ಪೊಲೀಸರು ದರೋಡೆ ಮಾಡಿದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
- Rajendra Simha BL
- Updated on: Apr 6, 2025
- 11:33 am
ಕೋಲಾರ: ಕೊರಿಯರ್ ಪಾರ್ಸಲ್ ಕೊಡುವ ವಿಚಾರಕ್ಕೆ ಗಲಾಟೆ, ಚಾಕು ಇರಿತ
ಕೋಲಾರ ತಾಲ್ಲೂಕಿನ ಮುದುವಾಡಿ ಹೊಸಹಳ್ಳಿಯಲ್ಲಿ ಕೊರಿಯರ್ ಪಾರ್ಸೆಲ್ ವಿತರಣೆಯ ವಿಚಾರದಲ್ಲಿ ಪವನ್ ಮತ್ತು ಮೋಹನ್ ಎಂಬ ಕೊರಿಯರ್ ಬಾಯ್ಗಳು ಚೇತನ್ ಮತ್ತು ಯುವರಾಜ್ ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಫೋನ್ನಲ್ಲಿ ನಡೆದ ವಾಗ್ವಾದದ ನಂತರ ಈ ಘಟನೆ ನಡೆದಿದೆ. ಗ್ರಾಮಸ್ಥರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
- Rajendra Simha BL
- Updated on: Mar 31, 2025
- 6:17 pm
30 ಕಿಮೀ ಸಮುದ್ರ ಈಜಿ ದಾಖಲೆ ಬರೆದ ಚಿನ್ನದ ನಾಡಿನ ಬಾಲಕಿ
14 ವರ್ಷದ ಬಾಲಕಿ 30 ಕಿ.ಮೀ ಸಮುದ್ರ ಈಜುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಕೋಲಾರ ಜಿಲ್ಲೆಯ ಈ ಯುವ ಪ್ರತಿಭೆ, ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಕಠಿಣ ಪರಿಶ್ರಮ ಮತ್ತು ನಿರಂತರ ಅಭ್ಯಾಸ ಇವರ ಯಶಸ್ಸಿನ ಹಿಂದಿನ ರಹಸ್ಯವೆಂದು ಹೇಳಿದ್ದಾರೆ.
- Rajendra Simha BL
- Updated on: Mar 30, 2025
- 3:00 pm
ನಂದಿನಿ ಹಾಲಿನ ಬೆಲೆ ಏರಿಕೆ: ರೈತರಿಗೆ ಸಿಗೋದೆಷ್ಟು, ಲಾಭದಲ್ಲಿ ಸರ್ಕಾರದ ಪಾಲೆಷ್ಟು? ಇಲ್ಲಿದೆ ಮಾಹಿತಿ
ಕರ್ನಾಟಕದಲ್ಲಿ ನಂದಿನಿ ಹಾಲಿನ ಬೆಲೆ ಲೀಟರ್ಗೆ ನಾಲ್ಕು ರೂಪಾಯಿ ಏರಿಕೆಯಾಗಿದೆ. ಸರ್ಕಾರ ರೈತರಿಗೆ ನೇರವಾಗಿ ಹಣ ನೀಡುವುದಾಗಿ ಹೇಳಿದೆ. ಆದರೆ ರೈತರಿಗೆ ಕಡಿಮೆ ಹಣ ಸಿಗುತ್ತಿದೆ ಎಂಬ ಆರೋಪವಿದೆ. ಹಾಲಿನ ಖರೀದಿ ದರ ಎರಡು ಬಾರಿ ಇಳಿಕೆಯಾಗಿದೆ. ಗ್ರಾಹಕರಿಗೆ ಹೆಚ್ಚು ಬೆಲೆ, ರೈತರಿಗೆ ಕಡಿಮೆ ಲಾಭ, ಮತ್ತು ಸರ್ಕಾರಕ್ಕೆ ಭಾರಿ ಲಾಭ ಎಂಬ ಆರೋಪಗಳಿವೆ. ಹಾಲಿನ ದರ ಸಂಬಂಧಿತ ಅಂಕಿಅಂಶಗಳು ಇಲ್ಲಿವೆ.
- Rajendra Simha BL
- Updated on: Mar 28, 2025
- 1:10 pm
ಮದ್ದೇರಿ ಕೆನರಾ ಬ್ಯಾಂಕಿನಲ್ಲಿ ಕೋಟ್ಯಾಂತರ ರೂ. ವಂಚನೆ: ಕನ್ನಡ ಬಾರದಕ್ಕೆ ಮೋಸ ಹೋದ್ರಾ ಅಧಿಕಾರಿಗಳು?
ಅದೊಂದು ಗ್ರಾಮೀಣ ಪ್ರದೇಶದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್. ಹತ್ತಾರು ವರ್ಷಗಳಿಂದ ಜನರ ನಂಬಿಕೆ ಗಳಿಸಿದ್ದ ಬ್ಯಾಂಕ್ ಆಗಿದ್ದು, ಹಣ ಒಡವೆ ತಮ್ಮ ಮನೆಯಲ್ಲಿದ್ದರೆ ಕಳ್ಳತನವಾಗಬಹುದು ಎಂದು ಎಲ್ಲವನ್ನು ತಂದು ಬ್ಯಾಂಕ್ನಲ್ಲಿಟ್ಟಿದ್ದರು. ಆದರೆ ಕೋಟ್ಯಾಂತರ ರೂಪಾಯಿ ಹಣ ಹಾಗೂ ಒಡವೆಗಳನ್ನು ಕನ್ನಡ ಭಾಷೆ ಬಾರದ ಅಧಿಕಾರಿಗಳಿಗೆ ಯಾಮಾರಿಸಿ ಅಲ್ಲಿನ ಸಿಬ್ಬಂದಿಗಳೇ ನುಂಗಿಹಾಕಿದ್ದಾರೆ.
- Rajendra Simha BL
- Updated on: Mar 25, 2025
- 7:50 pm
ಕೋಲಾರ: ಹೆಲ್ಮೆಟ್ ತೆಗೀತಿದ್ದಂತೆ ಬುಸ್ ಎಂದ ನಾಗಪ್ಪ! ಆಮೇಲೇನಾಯ್ತು ನೋಡಿ
ಕೋಲಾರ ನಗರದ ಕೀಲುಕೋಟೆ ಬಡಾವಣೆಯಲ್ಲಿ, ಸ್ಪಂದನ ರಂಗನಾಥ್ ಅವರ ಮನೆಯ ಹೆಲ್ಮೆಟ್ನಲ್ಲಿ ಹಾವು ಸಿಲುಕಿತ್ತು. ಮನೆಯವರು ಉರಗ ರಕ್ಷಕ ಆನಂದ್ ಅವರಿಗೆ ಸಹಾಯಕ್ಕಾಗಿ ಕರೆ ಮಾಡಿದರು. ಆನಂದ್ ತಕ್ಷಣ ಆಗಮಿಸಿ ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಬಿಟ್ಟರು. ಈ ಘಟನೆಯು ಉರಗ ರಕ್ಷಣೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಹಾವುಗಳನ್ನು ಕೊಲ್ಲದೆ ರಕ್ಷಿಸುವುದು ಮುಖ್ಯ ಎಂದು ಈ ಘಟನೆ ಸಾರಿ ಹೇಳುತ್ತದೆ.
- Rajendra Simha BL
- Updated on: Mar 25, 2025
- 10:20 am
ಕೆಜಿಎಫ್ನಲ್ಲಿವೆ ಸಾಕಷ್ಟು ಚಿನ್ನದ ನಿಕ್ಷೇಪಗಳು! ಸಂಶೋಧನೆಗಳಿಂದ ತಿಳಿದುಬಂತು ಅಚ್ಚರಿಯ ಅಂಶ
ಅದು ವಿಶ್ವಪ್ರಸಿದ್ದ ಚಿನ್ನದ ಗಣಿ. ಅದಕ್ಕೆ ಬೀಗ ಹಾಕಿ 24 ವರ್ಷಗಳೇ ಕಳೆದು ಹೋಗಿದೆ. ಅಷ್ಟು ವರ್ಷಗಳಿಂದ ಅದರ ಪುನರಾರಂಭ ಆಗುತ್ತಾ ಎಂದು ಆಸೆಗಣ್ಣುಗಳಿಂದ ನೋಡುತ್ತಿದ್ದ ಸಾವಿರಾರು ಜನರ ಕಣ್ಣಗಳಲ್ಲಿ ಈಗ ಹೊಸದೊಂದು ಆಶಾಭಾವನೆ ಮೂಡುವ ಸಂದರ್ಭ ಬಂದಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಈನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೆ ಕೆಜಿಎಫ್ನಲ್ಲಿ ಚಿನ್ನದ ಗಣಿಗಾರಿಕೆ ಆರಂಭ ಮಾಡುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಕಾರಣವೂ ಇದೆ. ಅದೇನೆಂಬುದು ಇಲ್ಲಿದೆ.
- Rajendra Simha BL
- Updated on: Mar 16, 2025
- 6:19 pm
ಕರ್ನಾಟಕದಲ್ಲೊಂದು ಹೀನ ಕೃತ್ಯ: ಮಗಳನ್ನೇ ಗರ್ಭಿಣಿ ಮಾಡಿದ ನೀಚ ತಂದೆ
ಹೆಣ್ಣುಮಕ್ಕಳಿಗೆ ಅಪ್ಪನೇ ಸೂಪರ್ ಹೀರೋ ಎಂಬ ಮಾತುಗಳು ನಾವು ಹಾಗಾಗ ಕೇಳುತ್ತಿರುತ್ತೇವೆ. ಅದರಂತೆ ಹೆಣ್ಣುಮಕ್ಕಳು ಸಹ ತಾಯಿಗಿಂತ ಅಪ್ಪನ ಮೇಲೆ ವಿಶೇಷ ಪ್ರೀತಿಯನ್ನು ಹೊಂದಿರುತ್ತಾರೆ. ಆದರೆ ಇಲ್ಲೋರ್ವ ವ್ಯಕ್ತಿ ಅಪ್ಪ ಎಂಬ ಪದಕ್ಕೆ ಮಸಿ ಬಳಿದಿದ್ದಾನೆ. ಮಗಳು ಎನ್ನುವುದನ್ನು ನೋಡದೇ ತಂದೆಯೇ ಆಕೆ ಮೇಲೆ ತನ್ನ ವಿಕೃತ ಕಾಮದ ತೀಟೆ ತೀರಿಸಿಕೊಂಡಿದ್ದಾನೆ. ಪರಿಣಾಮ ಇದೀಗ ಮಗಳು ಗರ್ಭಿಣಿಯಾಗಿದ್ದಾಳೆ.
- Rajendra Simha BL
- Updated on: Mar 12, 2025
- 11:00 pm
ಕಮಿಷನ್ ದಂಧೆ ಆರೋಪ: ಬೆಳ್ಳಂಬೆಳಗ್ಗೆ ಉಪ ಲೋಕಾಯುಕ್ತರ ನೇತೃತ್ವದಲ್ಲಿ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ದಾಳಿ
ಕೋಲಾರ ಎಪಿಎಂಸಿಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಉಪಲೋಕಾಯುಕ್ತರು ದಾಳಿ ನಡೆಸಿದ್ದಾರೆ. ರೈತರು ತರುವ ತರಕಾರಿಗಳಿಗೆ ಶೇ 8ರಷ್ಟು ಕಮಿಷನ್ ಪಡೆಯುವ, 3 ರಿಂದ 5 ಕೆಜಿ ತರಕಾರಿ ಕಡಿತಗೊಳಿಸುವ ಬಗ್ಗೆ ರೈತರ ಆರೋಪದ ಕಾರಣ ಈ ದಾಳಿ ನಡೆದಿದೆ.
- Rajendra Simha BL
- Updated on: Mar 10, 2025
- 10:11 am