18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.
ಅನ್ನ, ನೀರು ಸಿಗದೇ ವಾನರ ಸೇನೆ ಪರದಾಟ: ಕಂಡಕಂಡವರ ಮೇಲೆ ದಾಳಿ; 15ಕ್ಕೂ ಹೆಚ್ಚು ಜನ್ರರಿಗೆ ಗಾಯ
ಕೋಲಾರದ ದಕ್ಷಿಣಕಾಶಿ ಅಂತರಗಂಗೆಯಲ್ಲಿ ತೀವ್ರ ಬರ ಮತ್ತು ನೀರಿನ ಕೊರತೆಯಿಂದ ಸಾವಿರಾರು ಮಂಗಗಳು ಹಸಿವು-ಬಾಯಾರಿಕೆಯಿಂದ ಬಳಲುತ್ತಿವೆ. ಆಹಾರ ಅರಸಿ ಪ್ರವಾಸಿಗರ ಮೇಲೆ ದಾಳಿ ಮಾಡುತ್ತಿದ್ದು, 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಈ ವಾನರಸೇನೆಗೆ ಶಾಶ್ವತ ಪರಿಹಾರಕ್ಕೆ ಜನರು ಆಗ್ರಹಿಸಿದ್ದಾರೆ.
- Rajendra Simha BL
- Updated on: Apr 4, 2026
- 9:22 pm
ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ
ಕೋರ್ಟ್ ಹಾಲ್ನಲ್ಲಿದ್ದ ದಾಖಲೆಗಳ ಕಬೋರ್ಡ್ನಲ್ಲಿ ಹಾವು ಕಂಡು ಸಿಬ್ಬಂದಿ ಬೆಚ್ಚಿಬಿದ್ದ ಘಟನೆ ಕೋಲಾರದ ಸೆಷನ್ಸ್ ಕೋರ್ಟ್ ಒಳಗೆ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ನಾಗರಾಜ್, ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಹಾವು ಸೆರೆ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ ನೋಡಿ.
- Rajendra Simha BL
- Updated on: Apr 3, 2026
- 10:59 am
ಕೋಲಾರ: ಗಂಡನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ಮೇಲೆ ಆ್ಯಸಿಡ್ ದಾಳಿ ಮಾಡಿದ ಪತ್ನಿ
ಕೋಲಾರದ ಆಜಾದ್ ನಗರದಲ್ಲಿ ಅಕ್ರಮ ಸಂಬಂಧದ ಹಿನ್ನೆಲೆ ರಾಜಿ ಪಂಚಾಯ್ತಿ ವೇಳೆ ಆಯೇಷಾ ಎಂಬಾಕೆ ತನ್ನ ಪತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆನ್ನಲಾದ ಮಹಿಳೆ ಮುಸ್ಕಾನ್ ಮೇಲೆ ಆಸಿಡ್ ದಾಳಿ ನಡೆಸಿದ್ದಾಳೆ. ಮೂರು ತಿಂಗಳ ಹಿಂದೆ ಓಡಿಹೋಗಿದ್ದ ಜೋಡಿಯನ್ನು ಮಾತುಕತೆಗೆ ಕರೆಸಿದ್ದಾಗ ಈ ಘಟನೆ ನಡೆದಿದೆ. ಸದ್ಯ ಪೊಲೀಸರು ಆ್ಯಸಿಡ್ ದಾಳಿ ಮಾಡಿದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
- Rajendra Simha BL
- Updated on: Apr 2, 2026
- 7:44 am
ಭಾರಿ ಗಾತ್ರದ ಹಾವನ್ನು ನುಂಗುತ್ತಿದ್ದ ಮತ್ತೊಂದು ಹಾವು! ಉರಗ ರಕ್ಷಕರಿಂದ ರಕ್ಷಣೆ, ಮೈಜುಮ್ಮೆನ್ನಿಸುವ ವಿಡಿಯೋ ಇಲ್ಲಿದೆ ನೋಡಿ
ಕೋಲಾರ ತಾಲ್ಲೂಕಿನ ದೊಡ್ಡಹಸಾಳದಲ್ಲಿ ಹಾವೊಂದು ಮತ್ತೊಂದು ಬೃಹತ್ ಹಾವನ್ನೇ ಭಕ್ಷಿಸುತ್ತಿದ್ದ ಮೈಜುಮ್ಮೆನ್ನಿಸುವ ದೃಶ್ಯ ಕಂಡುಬಂದಿದೆ. ಉರಗ ರಕ್ಷಕ ನಾಗರಾಜ್ ಅವರ ಸಮಯಪ್ರಜ್ಞೆಯಿಂದಾಗಿ ಸಾವಿನ ದವಡೆಯಲ್ಲಿದ್ದ ಹಾವು ಬಚಾವಾಗಿದ್ದು, ಈ ಅಪರೂಪದ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
- Rajendra Simha BL
- Updated on: Mar 30, 2026
- 9:36 am
ವಿಜಯಪುರ ಶಾಸಕ ಯತ್ನಾಳ್ ನೋಡಲು ಕೋಲಾರದಲ್ಲಿ ಜನವೋ ಜನ
ಕೋಲಾರದಲ್ಲಿ ನಡೆದ ಶ್ರೀರಾಮನವಮಿ ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಭಾಗವಹಿಸಿ ಬೃಹತ್ ಶೋಭಾಯಾತ್ರೆಗೆ ಚಾಲನೆ ನೀಡಿದರು. ಎಂ.ಜಿ.ರಸ್ತೆಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರಿಂದ ಆಯೋಜಿಸಲಾದ 10ನೇ ವರ್ಷದ ರಾಮೋತ್ಸವದಲ್ಲಿ ಸಂಸದ ಮಲ್ಲೇಶ್ ಬಾಬು, ಮಾಜಿ ಸಂಸದ ಮುನಿಸ್ವಾಮಿ, ನಾಗಲಾಪುರ ಮಠದ ತೇಜೇಶಲಿಂಗ ಶಿವಚಾರ್ಯ ಸ್ವಾಮಿಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಯತ್ನಾಳ್ ಅವರನ್ನು ಹಿಂದುತ್ವದ ನಾಯಕ ಎಂದು ಸ್ವಾಗತಿಸಲಾಯಿತು.
- Rajendra Simha BL
- Updated on: Mar 27, 2026
- 10:02 pm
ಪ್ರತ್ಯೇಕ ಅಪಘಾತ: ಮೂರು ವಷರ್ದ ಬಾಲಕಿ ಸೇರಿ ಇಬ್ಬರು ಸಾವು, 12 ಮಕ್ಕಳಿಗೆ ಗಾಯ
ಕೋಲಾರ, ಮಂಡ್ಯ ಮತ್ತು ರಾಮನಗರದಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 3 ವರ್ಷದ ಬಾಲಕಿ ಸೇರಿದಂತೆ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಕೋಲಾರದಲ್ಲಿ ಅತಿವೇಗದ ಟೆಂಪೋ ಡಿಕ್ಕಿಯಾಗಿ ಬಾಲಕಿ ಸಾವು ಸಂಭವಿಸಿದರೆ, ಮಂಡ್ಯದಲ್ಲಿ ಶಾಲಾ ಬಸ್ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿ 12 ಮಕ್ಕಳಿಗೆ ಗಾಯಗಳಾಗಿವೆ.
- Rajendra Simha BL
- Updated on: Mar 27, 2026
- 9:33 pm
ಕೋಲಾರದಲ್ಲಿ ಕಲಬೆರಕೆ ಹಾಲು: ವರದಿಯಲ್ಲಿ ಆಘಾತಕಾರಿ ಅಂಶ; ಬೆಚ್ಚಿಬಿದ್ದ ಜನ
ಕೋಲಾರದಲ್ಲಿ ಕಲಬೆರಕೆ ಹಾಲಿನ ಕುರಿತು ಜಿಲ್ಲಾಡಳಿತ ನಡೆಸಿದ ದಾಳಿಯಲ್ಲಿ ಆಘಾತಕಾರಿ ಸತ್ಯಾಂಶ ಬಯಲಾಗಿದೆ. ಪ್ರಯೋಗಾಲಯ ವರದಿಯಂತೆ, 48 ಮಾದರಿಗಳಲ್ಲಿ 18 ಹಾಲು ಕಲಬೆರಕೆ ಹಾಗೂ ಕಳಪೆ ಗುಣಮಟ್ಟದ್ದಾಗಿವೆ. ಹಾಲಿನಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿದೆ. FSSAI ಕಾಯ್ದೆ ಅಡಿಯಲ್ಲಿ ಖಾಸಗಿ ಡೈರಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.
- Rajendra Simha BL
- Updated on: Mar 27, 2026
- 5:02 pm
ಮೆಡಿಕಲ್ ಸ್ಟೋರ್ ಪರವಾನಗಿ ನವೀಕರಣಕ್ಕಾಗಿ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಕೋಲಾರ ಡ್ರಗ್ ಕಂಟ್ರೋಲರ್
ಮೆಡಿಕಲ್ ಸ್ಟೋರ್ ಪರವಾನಗಿ ನವೀಕರಣಕ್ಕಾಗಿ 38,000 ರೂ. ಲಂಚ ಪ್ರಕರಣ ಸಂಬಂಧ ಕೋಲಾರ ಡ್ರಗ್ ಕಂಟ್ರೋಲರ್ ಶ್ಯಾಮಲಾ ಸೇರಿ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಾಲೂರು ಬಳಿ ದಾಳಿ ವೇಳೆ ಲಂಚದ ಹಣ ಎಸೆದು ಪರಾರಿಯಾಗಲು ಯತ್ನಿಸಿದರೂ, ಲೋಕಾಯುಕ್ತ ಪೊಲೀಸರು ಅವರನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಹಣ ಸಿಗದಿದ್ದರೂ, ಲಂಚ ಕೇಳಿದ ಆಡಿಯೋ ಮತ್ತು ಹಣ ಸ್ವೀಕರಿಸಿದ ವಿಡಿಯೋ ಸಾಕ್ಷ್ಯಗಳ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
- Rajendra Simha BL
- Updated on: Mar 18, 2026
- 12:37 pm
ಆಂಬ್ಯುಲೆನ್ಸ್ನಲ್ಲೇ ಬಂದು ಸ್ಟ್ರೆಚರ್ ಮೇಲೆ ಮಲಗಿಕೊಂಡೇ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ: ವಿಡಿಯೋ ನೋಡಿ
ವಿಧಿಯಾಟಕ್ಕೆ ಸೋಲದ ಅಸಾಮಾನ್ಯ ಪ್ರತಿಭೆ ಕೋಲಾರದ ಧೀಮಂತ ವಿದ್ಯಾರ್ಥಿನಿ ಕುಸುಮಾ. ಈಕೆ ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಎದೆಗುಂದದೆ, ಆಂಬ್ಯುಲೆನ್ಸ್ನಲ್ಲೇ ಬಂದು ಸ್ಟ್ರೆಚರ್ ಮೇಲೆ ಮಲಗಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ಸಾವು-ಬದುಕಿನ ಹೋರಾಟದ ನಡುವೆಯೂ ಈಕೆ ತೋರಿದ ಶಿಕ್ಷಣ ಪ್ರೇಮದ ವಿಡಿಯೋ ಇಲ್ಲಿದೆ ನೋಡಿ.
- Rajendra Simha BL
- Updated on: Mar 18, 2026
- 11:49 am
ಬಮೂಲ್ ಬೆನ್ನಲ್ಲೇ ಕೋಮುಲ್ನಿಂದ ಹಾಲು ಉತ್ಪಾದಕರಿಗೆ ಯುಗಾದಿ ಗಿಫ್ಟ್
ಕೋಮುಲ್ ಪ್ರತಿ ಲೀಟರ್ ಹಾಲಿಗೆ 2 ರೂ ಹೆಚ್ಚಳ ಮಾಡಿದೆ. ಆ ಮೂಲಕ ಕೋಲಾರ ಜಿಲ್ಲಾ ಹಾಲು ಉತ್ಪಾದಕರಿಗೆ ಕೋಮುಲ್ ಯುಗಾದಿ ಹಬ್ಬಕ್ಕೆ ಭರ್ಜರಿ ಕೊಡುಗೆ ನೀಡಿದೆ. ಈ ಬಗ್ಗೆ ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾಹಿತಿ ನೀಡಿದ್ದಾರೆ.
- Rajendra Simha BL
- Updated on: Mar 17, 2026
- 3:16 pm
ಬೆಂಗಳೂರಿನಲ್ಲಿ ಪಬ್ಗಳಿಗೂ ಸಿಲಿಂಡರ್ ಸಮಸ್ಯೆ: ಕೋಲಾರದಲ್ಲಿ ಹೋಟೆಲ್ ಗ್ರಾಹಕರಿಗೆ ಕಲ್ಯಾಣ ಮಂಟಪದ ಊಟ!
ಕರ್ನಾಟಕದಲ್ಲಿ ವಾಣಿಜ್ಯ LPG ಸಿಲಿಂಡರ್ಗಳ ತೀವ್ರ ಕೊರತೆ ಎದುರಾಗಿದೆ. ಎಂಟು ದಿನಗಳಿಂದ ಬಗೆಹರಿಯದ ಈ ಸಮಸ್ಯೆ ಬೆಂಗಳೂರಿನ ಪಬ್ಗಳಲ್ಲೂ ತಾಂಡವವಾಡಿದ್ದು, ಫೈರ್ಲೆಸ್ ಅಡುಗೆಗೆ ಮುಂದಾಗಿವೆ. ಕೋಲಾರದ ಹೋಟೆಲ್ಗಳೂ ಸೌದೆ ಒಲೆ, ಇದ್ದಿಲು ಒಲೆಗಳನ್ನು ಆಶ್ರಯಿಸಿದ್ದು, ಕೆಲವು ಹೋಟೆಲ್ಗಳು ಕಲ್ಯಾಣ ಮಂಟಪಗಳಲ್ಲಿ ಊಟ ತಯಾರಿಸುತ್ತಿವೆ.
- Rajendra Simha BL
- Updated on: Mar 17, 2026
- 2:11 pm
ಇರಾನ್-ಇಸ್ರೇಲ್ ಯುದ್ಧ ಪರಿಣಾಮ: ತರಕಾರಿ ಬೆಲೆ ದಿಢೀರ್ ಕುಸಿತ! ಯಾವ ತರಕಾರಿಗೆ ಎಷ್ಟಾಗಿದೆ ನೋಡಿ
ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ವಾಣಿಜ್ಯ ಬಳಕೆಯ ಸಿಲಿಂಡರ್ ಲಭ್ಯತೆ ಕುಸಿದಿದ್ದು, ಹೋಟೆಲ್ ಉದ್ಯಮಕ್ಕೆ ಭಾರಿ ನಷ್ಟವಾಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಹೋಟೆಲ್ಗಳು ಮುಚ್ಚಿರುವುದರಿಂದ ತರಕಾರಿ ಬೇಡಿಕೆ ತೀವ್ರವಾಗಿ ಕುಸಿದಿದೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳು ದಿಢೀರ್ ಕುಸಿತ ಕಂಡಿದ್ದು, ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ.
- Rajendra Simha BL
- Updated on: Mar 16, 2026
- 9:29 am