18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.
ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ 10 ಟನ್ ರಾಸಾಯನಿಕ ಮಿಶ್ರಿತ ಅಡಿಕೆ ಕೋಲಾರದಲ್ಲಿ ಜಪ್ತಿ
ಆಹಾರ ಕಲಬೆರಕೆ ಕುರಿತು ಬೆಂಗಳೂರು ಹಾಗೂ ಕರ್ನಾಟಕದಾದ್ಯಂತ ಆತಂಕ ಹೆಚ್ಚಾಗಿದೆ. ಕೋಲಾರದಲ್ಲಿ 10 ಟನ್ ರಾಸಾಯನಿಕ ಮಿಶ್ರಿತ ಅಡಿಕೆ ಜಪ್ತಿ ಮಾಡಲಾಗಿದ್ದು, ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದಲ್ಲದೆ, ಬ್ರಾಂಡೆಡ್ ಕುರುಕಲು ತಿಂಡಿಗಳ ಗುಣಮಟ್ಟದ ಬಗ್ಗೆಯೂ ಅನುಮಾನ ವ್ಯಕ್ತವಾಗಿದ್ದು, ಆರೋಗ್ಯ ಇಲಾಖೆ ಮರುಪರಿಶೀಲನೆಗೆ ಮುಂದಾಗಿದೆ.
- Rajendra Simha BL
- Updated on: Sep 16, 2026
- 7:21 am
ಗಣೇಶ ಹಬ್ಬದಂದೇ ಗ್ರ್ಯಾಂಡ್ ಎಂಟ್ರಿ ಕೊಟ್ಟ ವರುಣ: ಕೋಲಾರದಲ್ಲಿ ಧಾರಾಕಾರ ಮಳೆ
ಕೋಲಾರ ಜಿಲ್ಲೆಗೆ ವರುಣನ ಆಗಮನದಿಂದ ಬಿಸಿಲಿಗೆ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಜಿಲ್ಲೆಯ ಹಲವೆಡೆ ಜೋರು ಮಳೆ ಸುರಿದಿದೆ. ಧಾರಾಕಾರ ಮಳೆಗೆ ಇತ್ತ ಮುಳಬಾಗಿಲು ನಗರದಲ್ಲಿ ಅವಾಂತರಗಳು ಸಂಭವಿಸಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.
- Rajendra Simha BL
- Updated on: Sep 14, 2026
- 9:31 pm
ರಾಜಕಾರಣಿಗಳ ಅಚ್ಚುಮೆಚ್ಚಿನ ದೈವ, ಕೋಲಾರದ ಕುರುಡುಮಲೆ ಗಣಪತಿಯ ಶಕ್ತಿ ಸಾಮಾನ್ಯದ್ದಲ್ಲ
ಕುರುಡುಮಲೆ ಗಣೇಶ ದೇವಾಲಯವು ಕರ್ನಾಟಕದ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ, ಇದು ಭವ್ಯವಾದ ಏಕಶಿಲೆಯ ವಿಗ್ರಹ, ಐತಿಹಾಸಿಕ ಕಲ್ಲಿನ ವಾಸ್ತುಶಿಲ್ಪ ಮತ್ತು ಹಿಂದೂ ಪುರಾಣಗಳೊಂದಿಗೆ ಆಳವಾದ ಸಂಬಂಧಕ್ಕೆ ಹೆಸರುವಾಸಿಯಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ಬಳಿಯ ಕುರುಡುಮಲೆಯಲ್ಲಿರುವ ಈ ದೇವಾಲಯವು ಜೀವನದ ಪ್ರಮುಖ ಹಂತಗಳನ್ನು ಪ್ರಾರಂಭಿಸುವ ಮೊದಲು ಗಣೇಶನ ಆಶೀರ್ವಾದವನ್ನು ಬಯಸುವ ಭಕ್ತರನ್ನು ಆಕರ್ಷಿಸುತ್ತದೆ. ಹಾಗಾದ್ರೆ, ಕುರುಡುಮಲೆ ಗಣೇಶ ದೇವಸ್ಥಾನದ ಇತಿಹಾಸ, ಮಹತ್ವವೇನು? ರಾಜಕಾರಣಿಗಳ ಅಚ್ಚುಮಿಚ್ಚಿನ ವಿನಾಯಕ ಅನ್ನಿಸಿಕೊಂಡಿದ್ಯಾಕೆ ಎನ್ನುವ ಡಿಟೇಲ್ಸ್ ಇಲ್ಲಿದೆ.
- Rajendra Simha BL
- Updated on: Sep 13, 2026
- 8:09 pm
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ; ಡ್ರೈವರ್, ಕ್ಲೀನರ್ ಬಚಾವ್!
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ವಡ್ಡರಹಳ್ಳಿ ಗ್ರಾಮದ ಬಳಿ ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಈರುಳ್ಳಿ ತುಂಬಿದ್ದ ಕ್ಯಾಂಟರ್ ಪಲ್ಟಿಯಾಗಿದೆ. ಬೆಂಗಳೂರಿನಿಂದ ಚಿತ್ತೂರಿಗೆ ಸಾಗಿಸುತ್ತಿದ್ದ ಈರುಳ್ಳಿ ಮತ್ತು ಬೆಳ್ಳುಳ್ಳಿ ರಸ್ತೆಯಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅದೃಷ್ಟವಶಾತ್ ಚಾಲಕ ಮತ್ತು ಕ್ಲೀನರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
- Rajendra Simha BL
- Updated on: Sep 13, 2026
- 11:29 am
ಶ್ರಾವಣ ಮಾಸದ ಕೊನೆಯ ಶುಕ್ರವಾರದ ಹಿನ್ನೆಲೆ ಕೋಲಾರಮ್ಮನಿಗೆ 10,108 ತಾವರೆ ಹೂವಿನ ಅಲಂಕಾರ
ಶ್ರಾವಣ ಮಾಸದ ಕೊನೆಯ ಶುಕ್ರವಾರ ಹಾಗೂ ಅಮಾವಾಸ್ಯೆ ಹಿನ್ನೆಲೆ ಕೋಲಾರದ ನಗರದೇವತೆ ಕೋಲಾರಮ್ಮ ದೇವಿಗೆ ತಿರುವನಂತಪುರಂನಿಂದ ತರಿಸಲಾದ 10,108 ತಾವರೆ ಹೂವುಗಳಿಂದ ವಿಶೇಷ ಅಲಂಕಾರ ನೆರವೇರಿಸಲಾಗಿದ್ದು, ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ದೇವಾಲಯವೂ ಕೂಡ ಹೂಗಳ ಅಲಂಕಾರದಿಂದ ಕಂಗೊಳಿಸಿದೆ.
- Rajendra Simha BL
- Updated on: Sep 11, 2026
- 11:59 am
ಓದಲು ಹೋದ ಮಕ್ಕಳಿಗೆ ಅಡುಗೆ, ಕ್ಲೀನಿಂಗ್ ಕೆಲಸ: ಕೋಲಾರದ ಖಾಸಗಿ ಶಾಲೆಯ ಕರಾಳ ಮುಖ ಬಯಲು!
ಕೋಲಾರದ ಶ್ರೀ ವೇಣು ವಿದ್ಯಾ ಸಂಸ್ಥೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಅಡುಗೆ ಮಾಡುವ, ಸ್ವಚ್ಛತಾ ಕಾರ್ಯಗಳಂತಹ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಇದರಿಂದ ಮಕ್ಕಳ ಆರೋಗ್ಯ ಹದಗೆಡುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಪ್ರಶ್ನಿಸಿದಾಗ ಟಿಸಿ ನೀಡುವ ಬೆದರಿಕೆ ಹಾಕಲಾಗುತ್ತಿದೆ. ಪೋಷಕರು ಕ್ರಮಕ್ಕೆ ಆಗ್ರಹಿಸಿದ್ದಾರೆ.
- Rajendra Simha BL
- Updated on: Sep 6, 2026
- 12:02 pm
6 ವರ್ಷದ ಬಾಲಕಿ ಜತೆ ಅಸಭ್ಯ ವರ್ತನೆ ಆರೋಪದ ಬಳಿಕ ಕೋಲಾರದಲ್ಲಿ ಉದ್ವಿಗ್ನ ಪರಿಸ್ಥಿತಿ: ರಸ್ತೆ ತಡೆ, ಪ್ರತಿಭಟನೆ
ಕೋಲಾರದಲ್ಲಿ 6 ವರ್ಷದ ಬಾಲಕಿ ಜೊತೆ ಅಸಭ್ಯ ವರ್ತನೆ ಆರೋಪ ಕೇಳಿಬಂದಿದ್ದು, ಆ ನಂತರ ಒಂದಷ್ಟು ಜನರು ಆಸ್ಪತ್ರೆ ಮತ್ತು ಠಾಣೆ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆದು ಪ್ರತಿಭಟನೆ ನಡೆಸಿದ ಜನರನ್ನು ಮನವೊಲಿಸಲು ಪೊಲೀಸರು ಮತ್ತು ಶಾಸಕ ನಾರಾಯಣಸ್ವಾಮಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸದ್ಯ ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
- Rajendra Simha BL
- Updated on: Sep 3, 2026
- 7:59 am
ಕೋಲಾರ: ಶೌಚಾಲಯದಲ್ಲೇ ಅಡುಗೆ, ಊಟ ಮಾಡುತ್ತಿದ್ದ ಉತ್ತರ ಭಾರತದ ವ್ಯಕ್ತಿ!
ಕೋಲಾರ ಜಿಲ್ಲೆಯ ಕೆಜಿಎಫ್ ಮುನಿಸಿಪಲ್ ಬಸ್ ನಿಲ್ದಾಣದ ಶೌಚಾಲಯದಲ್ಲೇ ವ್ಯಕ್ತಿಯೊಬ್ಬ ವಾಸವಿದ್ದು ಅಡುಗೆ ಮಾಡಿಕೊಳ್ಳುತ್ತಿದ್ದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಶೌಚಾಲಯ ನಿರ್ವಹಣೆಗೆ ಅನಧಿಕೃತವಾಗಿ ನೇಮಕಗೊಂಡಿದ್ದ ಈ ವ್ಯಕ್ತಿಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ನಗರಸಭೆ ಅಧಿಕಾರಿಗಳು ಆತನನ್ನು ಹೊರಹಾಕಿ ಶೌಚಾಲಯಕ್ಕೆ ಬೀಗ ಹಾಕಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
- Rajendra Simha BL
- Updated on: Aug 31, 2026
- 12:11 pm
ಕೋಲಾರದಲ್ಲಿ ವೈರಲ್ ಫೀವರ್: ಹೆಚ್1ಎನ್1 ಸೋಂಕು ಹೆಚ್ಚಳ; ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಶನ್ ವಾರ್ಡ್
Kolar H1N1 Outbreak: ಕೋಲಾರದಲ್ಲಿ ವೈರಲ್ ಜ್ವರ ಮತ್ತು H1N1 ಸೋಂಕುಗಳು ಹೆಚ್ಚಾಗುತ್ತಿವೆ. ಕಳೆದ ಆರು ತಿಂಗಳಲ್ಲಿ 16 H1N1 ಪ್ರಕರಣಗಳು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಶನ್ ವಾರ್ಡ್ಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಕೈಗಳನ್ನು ಆಗಾಗ ತೊಳೆಯುವುದು, ವೈಯಕ್ತಿಕ ನೈರ್ಮಲ್ಯ ಕಾಪಾಡುವುದು, ಮತ್ತು ಜ್ವರ ಬಂದ ತಕ್ಷಣ ವೈದ್ಯರ ಸಲಹೆ ಪಡೆಯುವ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಸೂಚಿಸಲಾಗಿದೆ.
- Rajendra Simha BL
- Updated on: Aug 29, 2026
- 6:22 pm
ಕೋಲಾರ: ಮೈತುಂಬಾ ಗಾಯ, ಇನ್ಫೆಕ್ಷನ್ ಭೀತಿ; ಕೆಜಿಎಫ್ನಲ್ಲಿ ಅದೊಂದು ಹುಳು ಕಾಟಕ್ಕೆ ಜನರು ತತ್ತರ
Kolar News: ಕೋಲಾರದ ಕೆಜಿಎಫ್ ಬೋರಿಲಾಲ್ ಪೇಟೆಯಲ್ಲಿ ಲಕ್ಷಾಂತರ ಕಂಬಳಿ ಹುಳುಗಳ ಕಾಟದಿಂದ ಜನರು ತತ್ತರಿಸಿದ್ದಾರೆ. ಚರ್ಮದ ತುರಿಕೆ, ಗಾಯಗಳಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ವಚ್ಛತೆಯ ಕೊರತೆ ಮತ್ತು ಹರಳು ಗಿಡಗಳ ಹೆಚ್ಚಳ ಇದಕ್ಕೆ ಕಾರಣವೆಂದಿದ್ದಾರೆ.
- Rajendra Simha BL
- Updated on: Aug 27, 2026
- 9:25 pm
ಕೋಲಾರ ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ಜಿಲ್ಲೆಯಲ್ಲಿ ಅರಣ್ಯ ಭೂಮಿ ಒತ್ತುವರಿ ವಿಚಾರ ಕಳೆದ ನಾಲ್ಕು ವರ್ಷಗಳಿಂದ ಅರಣ್ಯ ಇಲಾಖೆ ಮತ್ತು ರೈತರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಈ ನಡುವೆ ಕೋಲಾರ ಉಸ್ತುವಾರಿ ವಹಿಸಿಕೊಂಡಿರುವ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಜಂಟಿ ಸರ್ವೆ ಮಾಡಿ ತೆರವು ಮಾಡಿ ಯಾವುದೇ ಬೆದರಿಕೆಗೆ ಹೆದರಲ್ಲ ಒತ್ತುವರಿಯಾಗಿದ್ರೆ ಬಿಡೋ ಮಾತಿಲ್ಲ ಎಂದಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಅಂದರೆ 23-ಆಗಸ್ಟ್-2023 ರಂದು ಜಿಲ್ಲೆಯಲ್ಲಿ ಆರಂಭವಾದ ಅರಣ್ಯ ಒತ್ತುವರಿ ತೆರವು ಬಹುದೊಡ್ಡ ಕಾರ್ಯಾಚರಣೆ ಇನ್ನೂ ನಿಂತಿಲ್ಲ. ಈವರೆಗೆ ಸರಾಸರಿ 3500 ಎಕರೆಯಷ್ಟು ಅರಣ್ಯ ಒತ್ತುವರಿ ತೆರವು ಮಾಡಲಾಗಿದೆ ಆದರೂ, ಮುಂದಿನ ತೆರವು ಕಾರ್ಯಾಚರಣೆ ಹಲವು ಅಡೆತಡೆಗಳು ಉಂಟಾಗುತ್ತಿವೆ.
- Rajendra Simha BL
- Updated on: Aug 23, 2026
- 7:01 pm
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ: ಆಗಿದ್ದೇನು?
ವಿಮೆ ಹಣಕ್ಕಾಗಿ ತನ್ನದೇ ಕೊಲೆ ನಾಟಕವಾಡಿದ್ದ ಕೋಲಾರದ ಅರುಣ್ ಕುಮಾರ್ ಅನ್ನು 11 ವರ್ಷಗಳ ಬಳಿಕ ಚೆನ್ನೈನಲ್ಲಿ ಬಂಧಿಸಲಾಗಿದೆ. 2015ರಲ್ಲಿ ಈ ವಂಚಕ ಸತ್ತವರ ದೇಹ ಬಳಸಿಕೊಂಡು ತನ್ನ ಹತ್ಯೆಯಾಗಿದೆ ಎಂದು ನಂಬಿಸಿದ್ದ. ಪೊಲೀಸರ ತನಿಖೆಯಿಂದ ಸತ್ಯ ಬಯಲಾಗಿ, ಕೊಲೆ ಪ್ರಕರಣವು ವಂಚನೆಯಾಗಿ ಬದಲಾಗಿತ್ತು. ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕ್ಯಾಸಂಬಳ್ಳಿ ಪೊಲೀಸರು ಸೆರೆ ಹಿಡಿದಿದ್ದಾರೆ.
- Rajendra Simha BL
- Updated on: Aug 23, 2026
- 6:26 pm