ಕೊಪ್ಪಳ: ಅಕ್ಕಿ ಕಾಳಿನ ಅಳತೆಯ ಕಲ್ಲಿನಲ್ಲಿ ಶಿವಲಿಂಗ ಕೆತ್ತಿದ ಶಿಲ್ಪಿ

Edited By: ವಿವೇಕ ಬಿರಾದಾರ

Updated on: Feb 26, 2025 | 10:20 AM

ಕೊಪ್ಪಳದ ಖ್ಯಾತ ಶಿಲ್ಪಿ ಪ್ರಕಾಶ್ ಅವರು ಮಹಾಶಿವರಾತ್ರಿಯ ಪ್ರಯುಕ್ತ ಅಕ್ಕಿ ಕಾಳಿನ ಅಳತೆಯ ಕಲ್ಲಿನಲ್ಲಿ ಶಿವಲಿಂಗವನ್ನು ಕೆತ್ತಿದ್ದಾರೆ. ಇದನ್ನು ಕೇವಲ ಒಂದು ಗಂಟೆಯಲ್ಲಿ ಪೂರ್ಣಗೊಳಿಸಿದ್ದಾರೆ. ಪ್ರಕಾಶ್ ಅವರು ಈ ಹಿಂದೆ ಅಕ್ಕಿ ಕಾಳಿನಲ್ಲಿ ಗಾಂಧೀಜಿಯ ಮೂರ್ತಿಯನ್ನೂ ಕೆತ್ತಿದ್ದಾರೆ. ಅವರ ಅದ್ಭುತ ಕೌಶಲ್ಯಕ್ಕೆ ಇದು ಸಾಕ್ಷಿಯಾಗಿದೆ.

ಕೊಪ್ಪಳ, ಫೆಬ್ರವರಿ 26: ಮಹಾ ಶಿವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಅಕ್ಕಿ ಕಾಳಿನ ಅಳತೆಯ ಕಲ್ಲಿನಲ್ಲಿ ಶಿವಲಿಂಗ ಕೆತ್ತಲಾಗಿದೆ. ಉತ್ತರ ಕರ್ನಾಟಕದ ಖ್ಯಾತ ಶಿಲ್ಪಿಯಾಗಿರುವ ಪ್ರಕಾಶ ಅವರು ಅಕ್ಕಿ ಕಾಳಿನ‌ ಅಳತೆಯ ಕಲ್ಲಿನಲ್ಲಿ ಶಿವಲಿಂಗವನ್ನು ಕೇವಲ ಒಂದೇ ತಾಸಿನಲ್ಲಿ ಕೆತ್ತಿದ್ದಾರೆ. ಶಿಲ್ಪಿ ಪ್ರಕಾಶ್​ ಈ ಹಿಂದೆ ಅಕ್ಕಿ ಕಾಳಿನಲ್ಲಿ ಗಾಂಧಿ, ಕಲ್ಲಿನ ಕೊರಳು ಕೆತ್ತನೆ ಮಾಡಿದ್ದರು. ಶಿಲ್ಪಿ ಪ್ರಕಾಶ್ ವಿವಿಧ ಮೂರ್ತಿಗಳನ್ನು ಶಿಲೆ, ಲೋಹಗಳಿಂದ ಕೆತ್ತನೆ ಮಾಡಿದ್ದಾರೆ.

Follow Us
Sanjayya Chikkamath

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ನಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಕೊಪ್ಪಳಕ್ಕೆ ಬಂದು ನಿಂತಿದೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More