ಮಂಡ್ಯ ಜಿಲ್ಲೆಗೆ ತನ್ನ ಕೊಡುಗೆ ಏನು ಎಂದು ಕೇಳಿದ ಕಾಂಗ್ರೆಸ್ ನಾಯಕರಿಗೆ ಉತ್ತರ ನೀಡಿದ ಹೆಚ್ ಡಿ ಕುಮಾರಸ್ವಾಮಿ

|

Updated on: Apr 25, 2024 | 10:59 AM

2018 ರಲ್ಲಿ ತನಗೆ ಮನಸ್ಸಿಲ್ಲದಿದ್ದರೂ ದೇವೇಗೌಡರ ಅಣತಿ ಮೇರೆಗೆ ಸಮ್ಮಿಶ್ರ ಸರ್ಕಾರ ರಚನೆಯಾಗಿ ಅದರ ನೇತೃತ್ವ ವಹಿಸಿದಾಗ ಮಂಡ್ಯ ರೈತರ 750 ಕೋಟಿ ರೂ. ಸಾಲ ಮನ್ನಾ ಮಾಡಿದ್ದೆ, ಕಾಂಗ್ರೆಸ್ ನಾಯಕರು ನೀಡಿದ ಕಿರುಕುಳ, ಅವಮಾನಗಳನ್ನು ಅವಡುಗಚ್ಚಿ ಸಹಿಸಿಕೊಂಡೆ, ರೈತರಿಗಾಗಿ ತಾನು ಇಷ್ಟೆಲ್ಲ ಮಾಡಿದರೂ ಕಾಂಗ್ರೆಸ್ ನಾಯಕರು, ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ ಕೊಡುಗೆ ಏನು ಅಂತ ಕೇಳುತ್ತಾರೆ ಎಂದು ಅವರು ಹೇಳಿದರು,

ಮಂಡ್ಯ: ನಿನ್ನೆ ಮಂಡ್ಯದಲ್ಲಿ ತಮ್ಮ ಪರ ಚುನಾವಣಾ ಪ್ರಚಾರ ಮಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಮಂಡ್ಯ (Mandya) ಮತ್ತು ರಾಮನಗರ ಜಿಲ್ಲೆಗಳಿಗೆ ಅವರ ಕೊಡುಗೆ ಏನು ಅಂತ ಕೇಳಿರುವ ಕಾಂಗ್ರೆಸ್ ನಾಯಕರಿಗೆ (Congress leaders) ಉತ್ತರ ನೀಡಿದರು. 2016-17 ರ ಸಾಲಿನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮಂಡ್ಯದಲ್ಲಿ ರೈತರ ಸಾಲುಸಾಲು ಅತ್ಮಹತ್ಯೆ ಪ್ರಕರಣಗಳು ನಡೆದವು. ಮೃತ ರೈತರ ಕುಟುಂಬಗಳಿಗೆ ಯಾವೊಬ್ಬ ಕಾಂಗ್ರೆಸ್ ನಾಯಕನೂ ಸಾಂತ್ವನ ಹೇಳಲಿಲ್ಲ. ತಾನು ಆಧಿಕಾರದಲ್ಲಿರದಿದ್ದರೂ ರೈತರ ಮನೆಗಳಿಗೆ ಹೋಗಿ ಕೈಲಾದಷ್ಟು ಧನ ಸಹಾಯ ಮಾಡಿದ್ದೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವಂಥ ಹತಾಷೆಯನ್ನು ಮನಸಲ್ಲಿ ತಂದುಕೊಳ್ಳಬೇಡಿ, ನಿಮ್ಮ ಕಷ್ಟಗಳಿಗೆ ನಾವಿದ್ದೇವೆ ಅಂತ ಮನವಿ ರೈತರಿಗೆ ಮಾಡಿದ್ದೆ ಎಂದು ಕುಮಾರಸ್ವಾಮಿ ಹೇಳಿದರು. 2018 ರಲ್ಲಿ ತನಗೆ ಮನಸ್ಸಿಲ್ಲದಿದ್ದರೂ ದೇವೇಗೌಡರ ಅಣತಿ ಮೇರೆಗೆ ಸಮ್ಮಿಶ್ರ ಸರ್ಕಾರ ರಚನೆಯಾಗಿ ಅದರ ನೇತೃತ್ವ ವಹಿಸಿದಾಗ ಮಂಡ್ಯ ರೈತರ 750 ಕೋಟಿ ರೂ. ಸಾಲ ಮನ್ನಾ ಮಾಡಿದ್ದೆ, ಕಾಂಗ್ರೆಸ್ ನಾಯಕರು ನೀಡಿದ ಕಿರುಕುಳ, ಅವಮಾನಗಳನ್ನು ಅವಡುಗಚ್ಚಿ ಸಹಿಸಿಕೊಂಡೆ, ರೈತರಿಗಾಗಿ ತಾನು ಇಷ್ಟೆಲ್ಲ ಮಾಡಿದರೂ ಕಾಂಗ್ರೆಸ್ ನಾಯಕರು, ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ ಕೊಡುಗೆ ಏನು ಅಂತ ಕೇಳಿ ಜನರ ದಿಕ್ಕು ತಪ್ಪಿಸುವ ಕೆಲ ಮಾಡುತ್ತಿದ್ದಾರೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:

Follow us on