ಮಳೆಗೆ ದಿಂಬಂ ಘಾಟ್ನಲ್ಲಿ ಕುಸಿದ ರಸ್ತೆ: ಸಂಚಾರದಲ್ಲಿ ವ್ಯತ್ಯಯ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಧಾರಾಕಾರ ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣ ಅಬ್ಬರಿಸುತ್ತಿದ್ದು, ಇತಿಹಾಸ ಪ್ರಸಿದ್ಧ ಅಂತರಗಟ್ಟೆ ದುರ್ಗಾಂಬದೇವಿ ದೇವಸ್ಥಾನದ ಗರ್ಭಗುಡಿ ಸೋರುತ್ತಿರುವುದಕ್ಕೆ ಭಕ್ತರು ಕಿಡಿ ಕಾರಿದ್ದಾರೆ. ಡರಾತ್ರಿ ಸುರಿದ ಮಳೆಗೆ ಮೈಸೂರು- ಸತ್ಯಮಂಗಲ ಸಂಪರ್ಕಿಸುವ ದಿಂಬಂ ಘಾಟ್ ನ 7, 8, 20 ಮತ್ತು 27ನೇ ಹೇರ್ ಪಿನ್ ಕರುವಿನಲ್ಲಿ ಮಣ್ಣು ಕುಸಿತವಾಗಿದೆ.
ಚಾಮರಾಜನಗರ/ಚಿಕ್ಕಮಗಳೂರು: ರಾಜ್ಯದ ಹಲವೆಡೆ ವರುಣ (Rain) ಅಬ್ಬರಿಸುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಅಜ್ಜಂಪುರ ಸಮೀಪದ ಇತಿಹಾಸ ಪ್ರಸಿದ್ಧ ಅಂತರಗಟ್ಟೆ ದುರ್ಗಾಂಬದೇವಿ ದೇವಸ್ಥಾನದ ಗರ್ಭಗುಡಿ ಸೋರುತ್ತಿದ್ದು, ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಇತ್ತ ತಡರಾತ್ರಿ ಸುರಿದ ಮಳೆಗೆ ಮೈಸೂರು- ಸತ್ಯಮಂಗಲ ಸಂಪರ್ಕಿಸುವ ದಿಂಬಂ ಘಾಟ್ ನ 7, 8, 20 ಮತ್ತು 27ನೇ ಹೇರ್ ಪಿನ್ ಕರುವಿನಲ್ಲಿ ಮಣ್ಣು ಕುಸಿತವಾಗಿದೆ. ಪರಿಣಾಮ ಸಂಚಾರದಲ್ಲಿ ವ್ಯತ್ಯವಾಗಿದ್ದು, ಜೆಸಿಬಿ ಮೂಲಕ ರಸ್ತೆಯಲ್ಲಿ ಬಿದ್ದಿರುವ ಮಣ್ಣಿನ ತೆರವು ಕಾರ್ಯ ನಡೆಸಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
