ಉರಿ ಸೆಕ್ಟರ್​ನಲ್ಲಿರುವ ಗ್ರಾಮಗಳಲ್ಲಿ ಈಗಲೂ ಜೀವಂತ ಮಿಸೈಲ್​ಗಳು, ಜನ ಊರೊಳಗೆ ಬರದಂತೆ ತಡೆ

ಅರುಣ್​ ಕುಮಾರ್​ ಬೆಳ್ಳಿ

Updated on: May 14, 2025 | 7:05 PM

ಹಿಂದೆ, ಪಾಕಿಸ್ತಾನ ಉರಿ ಸೆಕ್ಟರ್ ನಲ್ಲಿ ಫೈರ್ ಮಾಡಿದ ಕ್ಷಿಪಣಿಯೊಂದು 5 ವರ್ಷಗಳ ಬಳಿಕ ಸ್ಫೋಟಗೊಂಡು ಐದಾರು ಮಕ್ಕಳ ಸಾವಿಗೆ ಕಾರಣವಾಗಿತ್ತು ಎಂದು ನಮ್ಮ ವರದಿಗಾರ ಹೇಳುತ್ತಾರೆ. ಹಾಗಾಗಿ ಪೊಲೀಸರು ಯಾವುದೇ ಚಾನ್ಸ್ ತೆಗೆದುಕೊಳ್ಳಲು ತಯಾರಿಲ್ಲ. ಗ್ರಾಮಸ್ಥರಿಗೆ ತಮ್ಮ ಮನೆ ಮಠಗಳನ್ನು ಬಿಟ್ಟು ಬೇರೆಲ್ಲೋ ವಾಸ ಮಾಡೋದು ಇಷ್ಟವಿಲ್ಲವಾದರೂ ಪರಿಸ್ಥಿತಿಯ ಕರೆ ಹಾಗಿದೆ.

ಉರಿ ಸೆಕ್ಟರ್ (ಜಮ್ಮು ಮತ್ತು ಕಾಶ್ಮೀರ), ಮೇ 14: ಈ ಸ್ಥಳದ ಸೌಂದರ್ಯ, ನಿಶ್ಶಬ್ದತೆ ಮತ್ತು ರಮಣೀಯತೆ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಇವು ಉರಿ ಸೆಕ್ಟರ್​ನ ಚುಂಡಾ ಮತ್ತು ತಿಲ್ವಾಡಿ ಗ್ರಾಮಗಳು ಅದರೆ ಸದ್ಯಕ್ಕೆ ಎರಡೂ ನಿರ್ಜನ ಪ್ರದೇಶಗಳು. ಮೇ 9 ಮತ್ತು 10 ರಂದು ಪಾಕಿಸ್ತಾನ ಒಂದೇ ಸಮನೆ ಶೆಲ್ಲಿಂಗ್, ಗುಂಡಿನ ದಾಳಿ ಮತ್ತು ಮಿಸೈಲ್​ಗಳನ್ನು ಹಾರಿಬಿಟ್ಟಿದ್ದರಿಂದ ಜನ ಹೆದರಿ ಬೇರೆ ಊರುಗಳಿಗೆ ಹೋಗಿದ್ದಾರೆ. ಕದನ ವಿರಾಮ ಘೋಷಣೆಯದ ನಂತರವೂ ಜನ ಊರುಗಳಿಗೆ ವಾಪಸ್ಸು ಬಂದಿಲ್ಲ. ಅಸಲಿಗೆ, ಪಾಕಿಸ್ತಾನ ದಾಳಿ ಮಾಡಿದ ಕೆಲ ಕ್ಷಿಪಣಿಗಳು ಈಗಲೂ ಜೀವಂತವಾಗಿರುವುದರಿಂದ ಅವರು ಊರಿಗೆ ಹಿಂತಿರುಗದಂತೆ ತಡೆಯಲಾಗುತ್ತಿದೆ. ಎಲ್ಲವನ್ನೂ ಕ್ಲೀಯರ್ ಮಾಡಿದ ಬಳಿಕ ಜನರ ಪ್ರವೇಶಕ್ಕೆ ಪೊಲೀಸರು ಅನುಮತಿ ನೀಡುತ್ತಾರಂತೆ.

ಇದನ್ನೂ ಓದಿ:   ಸಹಜ ಸ್ಥಿತಿಗೆ ಮರಳುತ್ತಿರುವ ಜಮ್ಮು ಮತ್ತು ಕಾಶ್ಮೀರ, ಶ್ರೀನಗರದ ಶಾಲೆಗಳಲ್ಲಿ ಮಕ್ಕಳ ಕಲರವ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.