
Pakistan
ಪಾಕಿಸ್ತಾನ, ಅಧಿಕೃತವಾಗಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ ಶ್ರೀಮಂತ ಇತಿಹಾಸ, ವೈವಿಧ್ಯಮಯ ಸಂಸ್ಕೃತಿ ಹೊಂದಿದೆ. ಪಾಕಿಸ್ತಾನವು ಭಾರತ, ಅಫ್ಘಾನಿಸ್ತಾನ, ಇರಾನ್ ಮತ್ತು ಚೀನಾದೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ. ಇಸ್ಲಾಮಾಬಾದ್ ರಾಜಧಾನಿ. ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್ ಪ್ರಮುಖ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಾಗಿವೆ. 1947 ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯವನ್ನು ಗಳಿಸಿದಾಗ ಭಾರತದಿಂದ ವಿಭಜನೆಗೊಂಡು ಪಾಕಿಸ್ತಾನ ದೇಶವಾಯಿತು. ರಾಜಕೀಯ ಅಸ್ಥಿರತೆ, ಸಾಮಾಜಿಕ-ಆರ್ಥಿಕ ಸಮಸ್ಯೆಗಳು ಮತ್ತು ಭಾರತದೊಂದಿಗಿನ ಸಂಘರ್ಷಗಳು ಸೇರಿದಂತೆ ದೇಶವು ಸವಾಲುಗಳನ್ನು ಎದುರಿಸಿದೆ. ಪಾಕಿಸ್ತಾನವು ಪರ್ವತಗಳು, ಮರುಭೂಮಿಗಳು ಮತ್ತು ಅರೇಬಿಯನ್ ಸಮುದ್ರದ ಉದ್ದಕ್ಕೂ ಕರಾವಳಿ ಸೇರಿದಂತೆ ವೈವಿಧ್ಯಮಯ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಕೈಗಾರಿಕೆಗಳು ಮತ್ತು ಸೇವೆಗಳ ಜೊತೆಗೆ ಆರ್ಥಿಕತೆಯಲ್ಲಿ ಕೃಷಿ ಕ್ಷೇತ್ರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸವಾಲುಗಳ ಹೊರತಾಗಿಯೂ, ಪಾಕಿಸ್ತಾನವು ಭದ್ರತೆ, ಆರ್ಥಿಕತೆ ಮತ್ತು ರಾಜತಾಂತ್ರಿಕತೆಯ ಜಾಗತಿಕ ಚರ್ಚೆಗಳಿಗೆ ಕೊಡುಗೆ ನೀಡುತ್ತದೆ. ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ವೈವಿಧ್ಯಮಯ ಸಂಪ್ರದಾಯಗಳು ವಿಶ್ವ ವೇದಿಕೆಯಲ್ಲಿ ಅದರ ವಿಶಿಷ್ಟ ಗುರುತಿಗೆ ಕಾರಣವಾಗಿದೆ.
ಊಟ ಚೆನ್ನಾಗಿತ್ತು ಅನ್ಸುತ್ತೆ; ಅಸಿಮ್ ಮುನೀರ್ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಅಮೆರಿಕದ ಶ್ವೇತಭವನದಲ್ಲಿ ಊಟಕ್ಕೆ ಆಹ್ವಾನಿಸಿದ್ದಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರತಿಕ್ರಿಯಿಸಿದ್ದು, ಅಮೆರಿಕ "ಒಸಾಮಾ ಬಿನ್ ಲಾಡೆನ್ ಘಟನೆಯನ್ನು ಇಷ್ಟು ಬೇಗ ಮರೆಯಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. 2011ರಲ್ಲಿ ಪಾಕಿಸ್ತಾನದ ಅಬೋಟಾಬಾದ್ನಲ್ಲಿ ಅಲ್ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ನನ್ನು ಅಮೆರಿಕ ಪಾಕಿಸ್ತಾನದೊಳಗೆ ನುಗ್ಗಿ ಹತ್ಯೆ ಮಾಡಿದ್ದನ್ನು ಶಶಿ ತರೂರ್ ಉಲ್ಲೇಖಿಸಿದ್ದಾರೆ.
- Sushma Chakre
- Updated on: Jun 19, 2025
- 5:52 pm
ಕೊನೆಗೂ ಎಚ್ಚೆತ್ತುಕೊಂಡಿತೇ ಕೆನಡಾ? ಖಲಿಸ್ತಾನಿಗಳು ಹಾಗೂ ಪಾಕಿಗಳ ಬಗ್ಗೆ ಕೆನಡಾ ಗುಪ್ತಚರ ಸಂಸ್ಥೆಗಳು ಹೇಳಿದ್ದೇನು?
ಕೆನಡಾ(Canada)ದಲ್ಲಿ ಖಲಿಸ್ತಾನಿ(Khalistani)ಗಳು ಭಾರತದ ವಿರುದ್ಧ ಹಿಂಸಾಚಾರವನ್ನು ಉತ್ತೇಜಿಸುತ್ತಿರುವುದು ಹೌದು ಎಂದು ಕೆನಡಾ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಕೆನಡಾ ಗುಪ್ತಚರ ಸಂಸ್ಥೆಗಳು ನೀಡಿರುವ ಮಾಹಿತಿ ಪ್ರಕಾರ, ಖಲಿಸ್ತಾನಿಗಳು ಹಾಗೂ ಪಾಕಿಗಳು ಭಾರತದಲ್ಲಿ ಹಿಂಸಾಚಾರ ಸೃಷ್ಟಿಸಲು ಕೆನಡಾ ನೆಲವನ್ನು ಬಳಸಿವೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಜಿ7 ಶೃಂಗಸಭೆಯಲ್ಲಿ ಕೆನಡಾದ ನೂತನ ಪ್ರಧಾನಿ ಮಾರ್ಕ್ ಕಾರ್ನಿ ಅವರನ್ನು ಭೇಟಿಯಾದಾಗ ಈ ವಿಚಾರದ ಕುರಿತು ಚರ್ಚೆ ನಡೆಸಿದ್ದಾರೆ .
- Nayana Rajeev
- Updated on: Jun 19, 2025
- 12:17 pm
ಭಾರತದ ಕಡೆಯಿಂದ ಮೋದಿ ಯುದ್ಧ ನಿಲ್ಲಿಸಿದರು; ವರಸೆ ಬದಲಿಸಿದ ಟ್ರಂಪ್
ಭಾರತ-ಪಾಕಿಸ್ತಾನದ ಸಂಘರ್ಷವನ್ನು ನಿಲ್ಲಿಸುವ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಛರಿಸಿದ್ದಾರೆ. ಪ್ರಧಾನಿ ಮೋದಿ ನಮಗೆ ಯಾರ ಮಧ್ಯಸ್ಥಿಕೆಯೂ ಬೇಕಾಗಿಲ್ಲ ಎಂಬ ಸ್ಪಷ್ಟನೆ ನೀಡಿದ್ದರೂ ಡೊನಾಲ್ಡ್ ಟ್ರಂಪ್ 'ನಾನು ಪಾಕಿಸ್ತಾನವನ್ನು ಪ್ರೀತಿಸುತ್ತೇನೆ, ಮೋದಿ ಅದ್ಭುತ ವ್ಯಕ್ತಿ. ನಾನೇ ಎರಡು ಪ್ರಮುಖ ರಾಷ್ಟ್ರಗಳ ನಡುವಿನ ಪರಮಾಣು ಯುದ್ಧವನ್ನು ನಿಲ್ಲಿಸಿದ್ದು' ಎಂಬ ಹೇಳಿಕೆ ನೀಡಿದ್ದಾರೆ. ಆದರೆ, ಈ ಬಾರಿ, ಭಾರತದೊಳಗೆ ಪ್ರಧಾನಿ ಮೋದಿ ಯುದ್ಧ ನಿಲ್ಲಿಸಲು ಕ್ರಮ ವಹಿಸಿದರು ಎಂದು ಟ್ರಂಪ್ ವರಸೆ ಬದಲಿಸಿದ್ದಾರೆ.
- Sushma Chakre
- Updated on: Jun 18, 2025
- 10:48 pm
Video: ಥೂ ನಾಚಿಕೆಯಾಗ್ಬೇಕು ನಿಮ್ಗೆ, ಭಾರತದ ವಿರುದ್ಧ ಸದಾ ಕತ್ತಿ ಮಸೆಯುವ ಮುನೀರ್ಗೆ ಅಮೆರಿಕದಲ್ಲಿ ಅವಮರ್ಯಾದೆ
ವಾಷಿಂಗ್ಟನ್ನ ಹೋಟೆಲ್ಗೆ ಆಗಮಿಸಿದಾಗ ಪ್ರತಿಭಟನಾಕಾರರು ಮುನೀರ್ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ಪಾಕಿಸ್ತಾನವನ್ನು ನಿಂದಿಸಿದ್ದಾರೆ. ಕೆಲವು ಪಾಕಿಸ್ತಾನಿ ಜನರು ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಮುನೀರ್ ಅವರ ಬೆಂಗಾವಲು ಪಡೆಯು ವಾಷಿಂಗ್ಟನ್ನ ಫೋರ್ ಸೀಸನ್ಸ್ ಹೋಟೆಲ್ಗೆ ಆಗಮಿಸುತ್ತಿರುವುದನ್ನು ತೋರಿಸುತ್ತದೆ.ಪ್ರತಿಭಟನಾಕಾರರ ಗುಂಪು ಅಸಿಮ್ ಮುನೀರ್ ಅವರನ್ನು ಸುತ್ತುವರಿಯಲು ಪ್ರಯತ್ನಿಸುತ್ತಿದ್ದರು. ಮುನೀರ್ ಹೋಟೆಲ್ ಹೊರಗೆ ತಲುಪಿದ ತಕ್ಷಣ ಪ್ರತಿಭಟನಾಕಾರರು ಅವರನ್ನು ನೋಡಿ ನರಿ, ನರಿ ಎಂದು ಕೂಗಲು ಪ್ರಾರಂಭಿಸಿದರು.
- Nayana Rajeev
- Updated on: Jun 18, 2025
- 9:55 am
ಹಣವಿಲ್ಲದೆ ಈ ಕೃತ್ಯ ಅಸಾಧ್ಯ; ಪಹಲ್ಗಾಮ್ ದಾಳಿಯನ್ನು ಖಂಡಿಸಿದ ಎಫ್ಎಟಿಎಫ್
ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ FATF ಪಾಕಿಸ್ತಾನದ ಭಯೋತ್ಪಾದಕ ಹಣಕಾಸು ಮಾರ್ಗಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಹಣದ ಸಹಾಯವಿಲ್ಲದೆ ಅಂತಹ ದಾಳಿಗಳು ನಡೆಯಲು ಸಾಧ್ಯವಿಲ್ಲ, ಯಾರೋ ಇದಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ ಎಂದು ಹೇಳಿದೆ. ಹಣದ ಸಹಾಯ ಭಯೋತ್ಪಾದನೆಯ ಕೇಂದ್ರಬಿಂದುವಾಗಿದೆ ಮತ್ತು ಪಹಲ್ಗಾಮ್ನಲ್ಲಿ ನಡೆದ ದಾಳಿ ಸೇರಿದಂತೆ ಅಂತಹ ದಾಳಿಗಳು ಹಣವಿಲ್ಲದೆ ನಡೆಯಲು ಸಾಧ್ಯವಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.
- Sushma Chakre
- Updated on: Jun 16, 2025
- 10:19 pm
ಪಾಕಿಸ್ತಾನ 3 ರಫೇಲ್ ಹೊಡೆದಿಲ್ಲ; ವಾಸ್ತವ ಗೊತ್ತಾದರೆ ಅಚ್ಚರಿ ಆಗಬಹುದು: ಡಸ್ಸೋ ಏವಿಯೇಶನ್ ಸಿಇಒ
Dassault Aviation CEO Eric Trappier speaks on Rafale Jets: ಆಪರೇಷನ್ ಸಿಂದೂರ್ ವೇಳೆ ಭಾರತದ 3 ರಫೇಲ್ ಸೇರಿದಂತೆ ಐದು ಜೆಟ್ಗಳನ್ನು ಹೊಡೆದಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ, 3 ರಫೇಲ್ಗಳನ್ನು ಹೊಡೆದಿರುವುದೆಲ್ಲಾ ಸುಳ್ಳು ಎಂದು ರಫೇಲ್ ತಯಾರಕ ಡಸ್ಸೋ ಏವಿಯೇಶನ್ ಸಂಸ್ಥೆ ಸಿಇಒ ಹೇಳಿದ್ದಾರೆ.. ವಾಸ್ತವ ಸಂಗತಿ ಹೊರಬಂದರೆ ಹಲವರಿಗೆ ಅಚ್ಚರಿ ಎನಿಸುತ್ತದೆ ಎಂದು ಎರಿಕ್ ಟ್ರ್ಯಾಪಿಯರ್ ತಿಳಿಸಿದ್ದಾರೆ.
- Vijaya Sarathy SN
- Updated on: Jun 15, 2025
- 3:23 pm
ಭಾರತದ ಧ್ವಜ ತೆಗೆಯಬೇಕು: ಆಮಿರ್ ಖಾನ್ಗೆ ಸೂಚನೆ ನೀಡಿದ್ದ ಪಾಕಿಸ್ತಾನ; ನಟ ಮಾಡಿದ್ದೇನು?
ಪಾಕಿಸ್ತಾನದಲ್ಲೂ ನಟ ಆಮಿರ್ ಖಾನ್ ಅವರಿಗೆ ಅಭಿಮಾನಿಗಳು ಇದ್ದಾರೆ. ಆದರೆ ‘ದಂಗಲ್’ ಸಿನಿಮಾವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಲು ಆಮಿರ್ ಖಾನ್ ಒಪ್ಪಲಿಲ್ಲ. ಅದಕ್ಕೆ ಕಾರಣ ಕೂಡ ಇದೆ. ‘ಸಿತಾರೆ ಜಮೀನ್ ಪರ್’ ಸಿನಿಮಾದ ಬಿಡುಗಡೆ ಹೊಸ್ತಿಲಲ್ಲಿ ಆಮಿರ್ ಖಾನ್ ಅವರು ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
- Madan Kumar
- Updated on: Jun 15, 2025
- 2:07 pm
ಅಮೆರಿಕ ಸೇನಾ ದಿನ: ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ಗೆ ಆಹ್ವಾನ, ಭಾರತ, ಚೀನಾಗೆ ಆತಂಕ
ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಜೂನ್ 12 ರಂದು ಅಮೆರಿಕದ ವಾಷಿಂಗ್ಟನ್ಗೆ ತಲುಪಲಿದ್ದಾರೆ, ಅಲ್ಲಿ ಜೂನ್ 14 ರಂದು ನಡೆಯಲಿರುವ ಅಮೆರಿಕ ಸೇನಾ ದಿನದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾಕಿಸ್ತಾನ ನಡುವಿನ ಉದ್ವಿಗ್ನತೆ ಉತ್ತುಂಗದಲ್ಲಿರುವ ಸಮಯದಲ್ಲಿ ಈ ಭೇಟಿ ನಡೆಯುತ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತವು ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ತೀವ್ರ ಹೊಡೆತ ನೀಡಿತ್ತು.
- Nayana Rajeev
- Updated on: Jun 12, 2025
- 12:09 pm
ಭಯೋತ್ಪಾದನೆ ನಿಮ್ಮನ್ನೂ ಕಾಡಬಹುದು; ಪಾಶ್ಚಿಮಾತ್ಯ ದೇಶಗಳಿಗೆ ಸಚಿವ ಜೈಶಂಕರ್ ಎಚ್ಚರಿಕೆ
ಪಾಕಿಸ್ತಾನ ಮೂಲದ ಭಯೋತ್ಪಾದನೆಯನ್ನು ನಿರ್ಲಕ್ಷಿಸುವುದನ್ನು ಮುಂದುವರಿಸಿದರೆ ಭಯೋತ್ಪಾದನೆ ಒಂದು ದಿನ ನಿಮ್ಮನ್ನು ಕೂಡ ಕಾಡುತ್ತದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಪಶ್ಚಿಮದ ದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಕೇವಲ ಭಾರತದ ಸಮಸ್ಯೆಯಲ್ಲ, ಅದೊಂದು ಜಾಗತಿಕ ಸಮಸ್ಯೆಯಾಗಿದೆ ಎಂದು ಜೈಶಂಕರ್ ಒತ್ತಿ ಹೇಳಿದರು.
- Sushma Chakre
- Updated on: Jun 11, 2025
- 7:56 pm
ಪಾಕಿಸ್ತಾನ ಅತ್ಯಂತ ಬಡತನದಲ್ಲಿದೆ; ವಿಶ್ವ ಬ್ಯಾಂಕ್ ಬಹಿರಂಗಪಡಿಸಿದ ಆಘಾತಕಾರಿ ಮಾಹಿತಿ ಇಲ್ಲಿದೆ
ವಿಶ್ವ ಬ್ಯಾಂಕ್ ವರದಿಯ ಪ್ರಕಾರ, 2025ರಲ್ಲಿ ಪಾಕಿಸ್ತಾನದಲ್ಲಿ ಕೃಷಿ ಕ್ಷೇತ್ರವು ಗಮನಾರ್ಹ ಸವಾಲುಗಳನ್ನು ಎದುರಿಸಿತು, ಹವಾಮಾನ ಪರಿಸ್ಥಿತಿಗಳು ಹದಗೆಟ್ಟವು. ಪಾಕಿಸ್ತಾನದ ಮಳೆಯಲ್ಲಿ ಶೇ. 40ರಷ್ಟು ಇಳಿಕೆಯಾಯಿತು. 2011-12ರಲ್ಲಿ ಸುಮಾರು 34.44 ಕೋಟಿ ಭಾರತೀಯರು ಅತ್ಯಂತ ಬಡವರಾಗಿದ್ದರು. ಆದರೆ 2022-23ರ ವೇಳೆಗೆ ಆ ಸಂಖ್ಯೆ 7.52 ಕೋಟಿಗೆ ಇಳಿದಿತ್ತು. ಅಂದರೆ ಭಾರತದಲ್ಲಿ ಸುಮಾರು 26.9 ಕೋಟಿ ಜನರು 11 ವರ್ಷಗಳಲ್ಲಿ ಬಡತನದಿಂದ ಹೊರಬಂದರು, ಇದು ಪಾಕಿಸ್ತಾನದ ಇಡೀ ಜನಸಂಖ್ಯೆಗಿಂತ ಹೆಚ್ಚಾಗಿದೆ.
- Sushma Chakre
- Updated on: Jun 11, 2025
- 5:38 pm