![Pakistan](https://images.tv9kannada.com/wp-content/uploads/2024/02/pakistan.jpg)
Pakistan
ಪಾಕಿಸ್ತಾನ, ಅಧಿಕೃತವಾಗಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ ಶ್ರೀಮಂತ ಇತಿಹಾಸ, ವೈವಿಧ್ಯಮಯ ಸಂಸ್ಕೃತಿ ಹೊಂದಿದೆ. ಪಾಕಿಸ್ತಾನವು ಭಾರತ, ಅಫ್ಘಾನಿಸ್ತಾನ, ಇರಾನ್ ಮತ್ತು ಚೀನಾದೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ. ಇಸ್ಲಾಮಾಬಾದ್ ರಾಜಧಾನಿ. ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್ ಪ್ರಮುಖ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಾಗಿವೆ. 1947 ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯವನ್ನು ಗಳಿಸಿದಾಗ ಭಾರತದಿಂದ ವಿಭಜನೆಗೊಂಡು ಪಾಕಿಸ್ತಾನ ದೇಶವಾಯಿತು. ರಾಜಕೀಯ ಅಸ್ಥಿರತೆ, ಸಾಮಾಜಿಕ-ಆರ್ಥಿಕ ಸಮಸ್ಯೆಗಳು ಮತ್ತು ಭಾರತದೊಂದಿಗಿನ ಸಂಘರ್ಷಗಳು ಸೇರಿದಂತೆ ದೇಶವು ಸವಾಲುಗಳನ್ನು ಎದುರಿಸಿದೆ. ಪಾಕಿಸ್ತಾನವು ಪರ್ವತಗಳು, ಮರುಭೂಮಿಗಳು ಮತ್ತು ಅರೇಬಿಯನ್ ಸಮುದ್ರದ ಉದ್ದಕ್ಕೂ ಕರಾವಳಿ ಸೇರಿದಂತೆ ವೈವಿಧ್ಯಮಯ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಕೈಗಾರಿಕೆಗಳು ಮತ್ತು ಸೇವೆಗಳ ಜೊತೆಗೆ ಆರ್ಥಿಕತೆಯಲ್ಲಿ ಕೃಷಿ ಕ್ಷೇತ್ರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸವಾಲುಗಳ ಹೊರತಾಗಿಯೂ, ಪಾಕಿಸ್ತಾನವು ಭದ್ರತೆ, ಆರ್ಥಿಕತೆ ಮತ್ತು ರಾಜತಾಂತ್ರಿಕತೆಯ ಜಾಗತಿಕ ಚರ್ಚೆಗಳಿಗೆ ಕೊಡುಗೆ ನೀಡುತ್ತದೆ. ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ವೈವಿಧ್ಯಮಯ ಸಂಪ್ರದಾಯಗಳು ವಿಶ್ವ ವೇದಿಕೆಯಲ್ಲಿ ಅದರ ವಿಶಿಷ್ಟ ಗುರುತಿಗೆ ಕಾರಣವಾಗಿದೆ.
ಭಯೋತ್ಪಾದನೆ ನಂಟು ಇರುವ ಪಾಕ್ ವ್ಯಕ್ತಿ ಜತೆ ಮಾಧುರಿ ದೀಕ್ಷಿತ್ ಕಾರ್ಯಕ್ರಮ? ಜನರ ಆಕ್ರೋಶ
ಪಾಕಿಸ್ತಾನ ಮೂಲದ ಇವೆಂಟ್ ಮ್ಯಾನೇಜರ್ ಆಗಿರುವ ರಿಹಾನ್ ಸಿದ್ಧಿಖಿ ಮೇಲೆ ಭಾರತದ ಗುಪ್ತಚರ ಇಲಾಖೆ ಕಣ್ಣಿಟ್ಟಿದೆ. ಅಂಥ ವ್ಯಕ್ತಿಯ ಜೊತೆ ಮಾಧುರಿ ದೀಕ್ಷಿತ್ ಕೈಜೋಡಿಸುತ್ತಾರೆ ಎಂಬ ಸುದ್ದಿ ತಿಳಿದು ಎಲ್ಲರಿಗೂ ಶಾಕ್ ಆಗಿದೆ. ಆಗಸ್ಟ್ 16ರಂದು ರಿಹಾನ್ ಸಿದ್ಧಿಖಿ ಆಯೋಜನೆ ಮಾಡಲಿರುವ ಕಾರ್ಯಕ್ರಮದಲ್ಲಿ ಮಾಧುರಿ ದೀಕ್ಷಿತ್ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.
- Madan Kumar
- Updated on: Jun 28, 2024
- 5:37 pm
ಶಾಶ್ವತ ಹಗೆತನದಲ್ಲಿ ನಂಬಿಕೆ ಇಲ್ಲ: ಭಾರತಕ್ಕೆ ಸಕಾರಾತ್ಮಕ ಸಂದೇಶ ಕಳುಹಿಸಿದ ಪಾಕ್
ಭಾರತಕ್ಕೆ ಪಾಕಿಸ್ತಾನವು ಸಕಾರಾತ್ಮಕ ಸಂದೇಶ ರವಾನೆ ಮಾಡಿದೆ. ನಾವು ಶಾಶ್ವತ ಹಗೆತನದಲ್ಲಿ ನಂಬಿಕೆ ಹೊಂದಿಲ್ಲ ಎಂದು ಪಾಕ್ ಉಪ ಪ್ರಧಾನಿ ಇಶಾಕ್ ದಾರ್ ಹೇಳಿದ್ದಾರೆ. ಎಲ್ಲಾ ದೇಶಗಳೊಂದಿಗೆ ಶಾಂತಿಯುತ, ಸಹಕಾರಿ ಮತ್ತು ಉತ್ತಮ-ನೆರೆಹೊರೆಯ ಸಂಬಂಧಗಳನ್ನು ಕಾಪಾಡಿಕೊಳ್ಳಲು ಪಾಕಿಸ್ತಾನ ಸತತವಾಗಿ ಶ್ರಮಿಸುತ್ತಿದೆ ಎಂದು ದಾರ್ ಹೇಳಿದ್ದಾರೆ.
- Nayana Rajeev
- Updated on: Jun 26, 2024
- 9:16 am
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾರು ಭಾರತದ ಜೊತೆ ಇದ್ದರು, ಯಾರು ಪಾಕಿಸ್ತಾನದ ಜೊತೆ ಅಂತ ಇತಿಹಾಸದಲ್ಲಿ ದಾಖಲಾಗಿದೆ: ಜಮೀರ್ ಅಹ್ಮದ್
ನೀವು ಪಾಕಿಸ್ತಾನಕ್ಕೆ ಹೋಗಬೇಕು ಎಂದಿದ್ದಾರೆ ಅಂತ ಮಾಧ್ಯಮದವರು ಹೇಳಿದಾಗ ಈ ದೇಶ ನಂದು, ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದ್ದಾಗ ಕಾಂಗ್ರೆಸ್ ದೇಶದ ಜೊತೆ ನಿಂತಿದ್ದರೆ ಬಿಜೆಪಿ ಮತ್ತು ಆರೆಸ್ಸಸ್ ಯಾರ ಜೊತೆ ಇದ್ದರು ಅಂತ ಇತಿಹಾಸದಲ್ಲಿ ಸವಿಸ್ತಾರವಾಗಿ ನಮೂದಾಗಿದೆ, ಈ ದೇಶ ಯಾವತ್ತಿಗೂ ನಮ್ಮದು, ಅದರ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.
- Arun Belly
- Updated on: Jun 24, 2024
- 6:34 pm
ಭಾರತದಲ್ಲಿ ಚುನಾವಣೆ ನಡೆಸಿದ ರೀತಿಯನ್ನು ಶ್ಲಾಘಿಸಿದ ಪಾಕಿಸ್ತಾನದ ನಾಯಕ ಶಿಬ್ಲಿ ಫರಾಝ್
"ಎಷ್ಟು ಸರಾಗವಾಗಿ ಅಧಿಕಾರವನ್ನು ವರ್ಗಾಯಿಸಲಾಯಿತು. ನಾವು ಕೂಡ ಅದೇ ಪರಿಸ್ಥಿತಿಯಲ್ಲಿರಲು ಬಯಸುತ್ತೇವೆ. ಈ ದೇಶವು ನ್ಯಾಯಸಮ್ಮತತೆಗಾಗಿ ಹೋರಾಡುತ್ತಿದೆ. ಇಲ್ಲಿ, ಚುನಾವಣೆಯಲ್ಲಿ ಸೋತವರು ಒಪ್ಪಿಕೊಳ್ಳುವುದಿಲ್ಲ ಮತ್ತು ವಿಜೇತರು ಅವರ ಸ್ವಂತ ಇಚ್ಛೆಯಂತೆ ಚುನಾಯಿತರಾಗುತ್ತಾರೆ. ಈ ರೀತಿಯ ವಿಧಾನವು ನಮ್ಮ ರಾಜಕೀಯ ವ್ಯವಸ್ಥೆಯನ್ನು ಟೊಳ್ಳು ಮಾಡಿದೆ ಎಂದು ಫರಾಝ್ ಹೇಳಿದ್ದಾರೆ.
- Rashmi Kallakatta
- Updated on: Jun 13, 2024
- 5:29 pm
India vs Pakistan: ಭಾರತ-ಪಾಕಿಸ್ತಾನ್ ಕದನಕ್ಕೆ ಮಳೆ ಭೀತಿ: ರದ್ದಾಗುತ್ತಾ ಪಂದ್ಯ?
ಆಕ್ಯುವೆದರ್ ಪ್ರಕಾರ ಅಮೆರಿಕ ಕಾಲಮಾನದಂತೆ ಪಂದ್ಯದ ಪ್ರಾರಂಭದ ಸಮಯದಲ್ಲಿ ಗುಡುಗು ಸಿಡಿಲಿನೊಂದಿಗೆ ಮಳೆ ಆಗುವ ಸಾಧ್ಯತೆ ಇದೆ. ಭಾನುವಾರ ಬೆಳಿಗ್ಗೆ 10 ಗಂಟೆಗೆ ನ್ಯೂಯಾರ್ಕ್ನಲ್ಲಿ ಶೇ 40 ರಷ್ಟು ಮಳೆ ಸಾಧ್ಯತೆ ಇದೆ. ಆದಾಗ್ಯೂ, ಮುಂದಿನ ಮೂರು ಗಂಟೆಗಳಲ್ಲಿ ಮಳೆ ಪ್ರಮಾಣ ಕಡೆಮೆ ಆಗಲಿದೆ. ಹೀಗಾಗಿ ಒಟ್ಟಿನಲ್ಲಿ ಸುಮಾರು 1 ಗಂಟೆ ಮಳೆ ಆಗುವ ನಿರೀಕ್ಷೆಯಿದೆ.
- Gangadhar Saboji
- Updated on: Jun 9, 2024
- 4:50 pm
ಭಾರತದಿಂದ ಸ್ಮಗಲ್ ಆದ ಪ್ರಾಚೀನ ವಸ್ತುಗಳು ನ್ಯೂಯಾರ್ಕ್ ಮೂಲಕ ಭಾರತಕ್ಕೆ ವಾಪಸ್
Stolen antiquities returned to India: ಕಳೆದ ಹತ್ತು ವರ್ಷದಲ್ಲಿ ಅಮೆರಿಕದ ನ್ಯೂಯಾರ್ಕ್ ರಾಜ್ಯದ ಮನ್ಹಟನ್ ಡಿಸ್ಟ್ರಿಕ್ಟ್ ಅಟಾರ್ನಿ ಕಚೇರಿಯಿಂದ ಕಳೆದ 10 ವರ್ಷಗಳಿಂದ ಅತಿಹೆಚ್ಚು ಪ್ರಾಚೀನಾ ವಸ್ತುಗಳು ಭಾರತಕ್ಕೆ ಮರಳಿಸಲಾಗಿದೆ. ಸ್ಮಗಲರ್ಗಳು ಭಾರತದಿಂದ ಸಾಗಿಸಲಾಗಿದ್ದ ಈ ವಸ್ತುಗಳನ್ನು ಅಮೆರಿಕದ ಪೊಲೀಸರು ವಶಪಡಿಸಿಕೊಂಡು ಇಟ್ಟಿದ್ದ ವಸ್ತುಗಳಿವು. ಭಾರತ ಮಾತ್ರವಲ್ಲದೇ ವಿಶ್ವದ ವಿವಿಧ ದೇಶಗಳಿಂದ ಕಳ್ಳಸಾಗಣೆಯಾಗಿ ಸಿಕ್ಕಿಬಿದ್ದ ವಸ್ತುಗಳನ್ನು ಆಯಾ ದೇಶಗಳಿಗೆ ಮರಳಿಸಲಾಗಿದೆ. 2014ರಿಂದ 2024ರವರೆಗೆ ಎರಡು ಸಾವಿರಕ್ಕೂ ಹೆಚ್ಚು ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಲಾಗಿದೆ.
- Vijaya Sarathy SN
- Updated on: May 27, 2024
- 10:58 am
ಭಾರತದ ವಶವಾಗುತ್ತಿರುವ ಇರಾನ್ನ ಚಾಬಹಾರ್ ಪೋರ್ಟ್; ಪಾಕಿಸ್ತಾನ್, ಚೀನಾ ಅಸ್ತ್ರಕ್ಕೆ ಭಾರತದ ಪ್ರತ್ಯಸ್ತ್ರ
Iran's Chabahar port to be managed by India: ಇರಾನ್ನ ಚಾಬಹಾರ್ ಪೋರ್ಟ್ ಅನ್ನು 10 ವರ್ಷ ನಿರ್ವಹಿಸುವ ಗುತ್ತಿಗೆಯನ್ನು ಭಾರತ ಪಡೆಯಲಿದೆ. ಈ ಸಂಬಂಧ ಎರಡೂ ದೇಶಗಳ ಮಧ್ಯೆ ಇಂದು ಒಪ್ಪಂದವಾಗಲಿದೆ. ಕೇಂದ್ರ ಹಡಗು ಸಚಿವ ಸರ್ಬಾನಂದ ಸೋನೋವಾಲ್ ಅವರು ಇರಾನ್ ದೇಶಕ್ಕೆ ಭೇಟಿ ನೀಡಲಿದ್ದು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಚೀನಾದ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ಯೋಜನೆಯು ಪಾಕಿಸ್ತಾನದ ಗ್ವಾದರ್ ಪೋರ್ಟ್ ಅನ್ನು ಬಳಸಲಿದೆ. ಅದರ ಸಮೀಪದಲ್ಲೇ ಇರುವ ಚಾಬಹಾರ್ ಪೋರ್ಟ್ ಭಾರತಕ್ಕೆ ಬಹಳ ಮುಖ್ಯವಾಗಿದೆ.
- Vijaya Sarathy SN
- Updated on: May 13, 2024
- 2:05 pm
ಅಗತ್ಯ ವಸ್ತುಗಳ ಬೆಲೆ ಏರಿಕೆ, ತುತ್ತು ಅನ್ನಕ್ಕೂ ಪರದಾಟ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದ ಘರ್ಷಣೆ
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ತುತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿ ಇರುವ ಪಾಕ್ನಲ್ಲಿ ವಿದ್ಯುತ್ ಹಾಗೂ ಇತರೆ ಅಗತ್ಯ ವಸ್ತುಗಳ ದರಗಳನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಜನರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಈ ಸಂದರ್ಭದಲ್ಲಿ ಭಾರತದ ಧ್ವಜ ಕೂಡ ಹಾರಿದೆ.
- Nayana Rajeev
- Updated on: May 12, 2024
- 11:32 am
ಪಾಕಿಸ್ತಾನದ ಬಂದರಿನಲ್ಲಿ ಉಗ್ರ ದಾಳಿ, 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಗ್ವಾದರ್ನ ವಸತಿ ಕ್ವಾರ್ಟರ್ಸ್ನಲ್ಲಿ ಮಲಗಿದ್ದಾಗ ಗುರುವಾರ ಮುಂಜಾನೆ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿ ಏಳು ಕಾರ್ಮಿಕರನ್ನು ಹತ್ಯೆ ಮಾಡಿದ್ದಾರೆ. ಸುರಬಂದರ್ನ ಕ್ಷೌರಿಕ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.
- Nayana Rajeev
- Updated on: May 9, 2024
- 2:01 pm
ಪಾಕಿಸ್ತಾನ ಕೈಗೆ ಬಳೆ ತೊಟ್ಟಿಲ್ಲ, ಅಣು ಬಾಂಬ್ ಇಟ್ಕೊಂಡಿದೆ: ರಾಜನಾಥ್ ಸಿಂಗ್ಗೆ ಟಾಂಟ್ ಕೊಟ್ಟ ಫಾರೂಕ್ ಅಬ್ದುಲ್ಲಾ
Farooq Abdulla taunts Rajnath Singh: ಪಾಕ್ ಆಕ್ರಮಿತ ಕಾಶ್ಮೀರ ಭಾಗ ಭಾರತದ ಪಾಲಾಗುತ್ತದೆ ಎಂದು ರಾಜನಾಥ್ ಸಿಂಗ್ ನೀಡಿದ ಹೇಳಿಕೆಗೆ ಫಾರೂಕ್ ಅಬ್ದುಲ್ಲಾ ಟಾಂಟ್ ನೀಡಿದ್ದಾರೆ. ಪಾಕಿಸ್ತಾನ ಕೈಗೆ ಬಳೆ ತೊಟ್ಟು ಕೂತಿಲ್ಲ. ಅಟಂ ಬಾಂಬ್ಗಳು ಆ ದೇಶದಲ್ಲಿವೆ ಎಂದು ರಾಜನಾಥ್ಗೆ ಎಚ್ಚರಿಕೆ ನೀಡಿದ್ದಾರೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್. ಪಿಟಿಐಗೆ ನೀಡಿದ ಸಂದರ್ಶನದಲ್ಲಿ ರಾಜನಾಥ್ ಸಿಂಗ್ ಮಾತನಾಡುತ್ತಾ, ಪಿಒಕೆಯನ್ನು ಭಾರತ ಬಲಪೂರ್ವಕವಾಗಿ ವಶಪಡಿಸಿಕೊಳ್ಳುವ ಅಗತ್ಯ ಇಲ್ಲ. ಅಲ್ಲಿನ ಜನರೇ ಭಾರತದ ಜೊತೆ ವಿಲೀನ ಮಾಡುತ್ತಾರೆ ಎಂದು ಹೇಳಿದ್ದಾರೆ.
- Vijaya Sarathy SN
- Updated on: May 5, 2024
- 6:28 pm