Pakistan
ಪಾಕಿಸ್ತಾನ, ಅಧಿಕೃತವಾಗಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ ಶ್ರೀಮಂತ ಇತಿಹಾಸ, ವೈವಿಧ್ಯಮಯ ಸಂಸ್ಕೃತಿ ಹೊಂದಿದೆ. ಪಾಕಿಸ್ತಾನವು ಭಾರತ, ಅಫ್ಘಾನಿಸ್ತಾನ, ಇರಾನ್ ಮತ್ತು ಚೀನಾದೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ. ಇಸ್ಲಾಮಾಬಾದ್ ರಾಜಧಾನಿ. ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್ ಪ್ರಮುಖ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಾಗಿವೆ. 1947 ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯವನ್ನು ಗಳಿಸಿದಾಗ ಭಾರತದಿಂದ ವಿಭಜನೆಗೊಂಡು ಪಾಕಿಸ್ತಾನ ದೇಶವಾಯಿತು. ರಾಜಕೀಯ ಅಸ್ಥಿರತೆ, ಸಾಮಾಜಿಕ-ಆರ್ಥಿಕ ಸಮಸ್ಯೆಗಳು ಮತ್ತು ಭಾರತದೊಂದಿಗಿನ ಸಂಘರ್ಷಗಳು ಸೇರಿದಂತೆ ದೇಶವು ಸವಾಲುಗಳನ್ನು ಎದುರಿಸಿದೆ. ಪಾಕಿಸ್ತಾನವು ಪರ್ವತಗಳು, ಮರುಭೂಮಿಗಳು ಮತ್ತು ಅರೇಬಿಯನ್ ಸಮುದ್ರದ ಉದ್ದಕ್ಕೂ ಕರಾವಳಿ ಸೇರಿದಂತೆ ವೈವಿಧ್ಯಮಯ ಭೂದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಕೈಗಾರಿಕೆಗಳು ಮತ್ತು ಸೇವೆಗಳ ಜೊತೆಗೆ ಆರ್ಥಿಕತೆಯಲ್ಲಿ ಕೃಷಿ ಕ್ಷೇತ್ರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸವಾಲುಗಳ ಹೊರತಾಗಿಯೂ, ಪಾಕಿಸ್ತಾನವು ಭದ್ರತೆ, ಆರ್ಥಿಕತೆ ಮತ್ತು ರಾಜತಾಂತ್ರಿಕತೆಯ ಜಾಗತಿಕ ಚರ್ಚೆಗಳಿಗೆ ಕೊಡುಗೆ ನೀಡುತ್ತದೆ. ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ವೈವಿಧ್ಯಮಯ ಸಂಪ್ರದಾಯಗಳು ವಿಶ್ವ ವೇದಿಕೆಯಲ್ಲಿ ಅದರ ವಿಶಿಷ್ಟ ಗುರುತಿಗೆ ಕಾರಣವಾಗಿದೆ.
ಇನ್ನೂ ಹೆಚ್ಚು ಓದಿ‘ನಮ್ಮನ್ನು ಮನೆಗೆ ಕಳುಹಿಸಿ’; ಪಾಕಿಸ್ತಾನದಲ್ಲಿ ಅಪಹರಣ, ಮತಾಂತರಕ್ಕೆ ಸಿಲುಕಿದ ಹಿಂದೂ ಸಹೋದರಿಯರ ಗೋಳಾಟ
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇಬ್ಬರು ಅಪ್ರಾಪ್ತ ಹಿಂದೂ ಸಹೋದರಿಯರನ್ನು ಅಪಹರಿಸಿ, ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ವಿವಾಹ ಮಾಡಲಾಗಿರುವ ಭೀಕರ ಪ್ರಕರಣ ಬೆಳಕಿಗೆ ಬಂದಿದೆ. ನ್ಯಾಯಾಲಯವು ಬಾಲಕಿಯರನ್ನು ಹೆತ್ತವರೊಂದಿಗೆ ಕಳುಹಿಸಲು ನಿರಾಕರಿಸಿದ ನಂತರ, ಇಬ್ಬರೂ ಬಾಲಕಿಯರು ಕೋರ್ಟ್ ಹೊರಗೆ "ನಮಗೆ ಮನೆಗೆ ಹೋಗಬೇಕು" ಎಂದು ಕಣ್ಣೀರಿಟ್ಟು ಗೋಳಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. 13 ಮತ್ತು 14 ವರ್ಷದ ಸೀತಾ ಮತ್ತು ರೂಪೀ ಎಂಬ ಬಾಲಕಿಯರನ್ನು ಅಪಹರಿಸಿ, ಬಲವಂತದ ಮತಾಂತರದ ನಂತರ ಅಮ್ಜದ್ ಸೊಲಂಗಿ ಮತ್ತು ಮನ್ಸೂರ್ ಸೊಲಂಗಿ ಎಂಬುವರೊಂದಿಗೆ ಮದುವೆ ಮಾಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
- Sushma Chakre
- Updated on: Sep 11, 2026
- 4:29 pm
‘ನಮ್ಮದು ಹಗ್ಗದ ಮೇಲಿನ ನಡಿಗೆ’; ಅಮೆರಿಕ-ಇರಾನ್ ಸಂಘರ್ಷದ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಪಾಕಿಸ್ತಾನ
ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಪಾಕಿಸ್ತಾನವು ಅತ್ಯಂತ ಸೂಕ್ಷ್ಮ ರಾಜತಾಂತ್ರಿಕ ಸವಾಲನ್ನು ಎದುರಿಸುತ್ತಿದೆ. ಪಾಕಿಸ್ತಾನ ದೇಶದ ಸ್ಥಿತಿಯು "ಹಗ್ಗದ ಮೇಲಿನ ನಡಿಗೆಯಂತಾಗಿದೆ" ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ. ಇರಾನ್ ಹಾಗೂ ಈ ಸಂಘರ್ಷದಲ್ಲಿ ಭಾಗಿಯಾಗಿರುವ ಗಲ್ಫ್ ರಾಷ್ಟ್ರಗಳೆರಡರೊಂದಿಗೂ ನಿಕಟ ಬಾಂಧವ್ಯ ಹೊಂದಿರುವುದು ಈ ಇಕ್ಕಟ್ಟಿಗೆ ಕಾರಣ ಎಂದು ಅವರು ಹೇಳಿದ್ದಾರೆ. ಈ ಮೂಲಕ ಇದುವರೆಗೂ ಇರಾನ್ ಮತ್ತು ಅಮೆರಿಕದ ನಡುವಿನ ಯುದ್ಧದ ಕದನವಿರಾಮಕ್ಕೆ ನಾನು ಮಧ್ಯವರ್ತಿ ಎಂದು ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನ ಇದೀಗ ಪಶ್ಚಾತ್ತಾಪದ ನುಡಿಗಳನ್ನಾಡುತ್ತಿದೆ.
- Sushma Chakre
- Updated on: Sep 9, 2026
- 7:27 pm
ಪಾಕಿಸ್ತಾನಕ್ಕೆ ಮತ್ತೊಂದು ಶಾಕ್; ಲಡಾಖ್ನಲ್ಲಿ ಭಾರತದ ಮೊದಲ ರಾಕ್ ಚೆಕ್ ಡ್ಯಾಂ ನಿರ್ಮಾಣ
ಲಡಾಖ್ನಲ್ಲಿ ಜಲಸಂರಕ್ಷಣೆ ಮತ್ತು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಭಾರತೀಯ ಸೇನೆ ಹಾಗೂ ಸ್ಥಳೀಯ ಆಡಳಿತದ ಸಹಯೋಗದಲ್ಲಿ ಸಿಂಧೂ ನದಿಗೆ ಅಡ್ಡಲಾಗಿ ದೇಶದ ಮೊದಲ 'ರಾಕ್ ಚೆಕ್ ಡ್ಯಾಮ್' ನಿರ್ಮಿಸಲಾಗಿದೆ. ಶೀತ ಮರುಭೂಮಿ ಪ್ರದೇಶವಾದ ಲಡಾಖ್ನಲ್ಲಿ ನೀರು ಲಭ್ಯವಿಲ್ಲದ ಒಣ ಹವಾಮಾನದ ಅವಧಿಯಲ್ಲಿ ತೀವ್ರ ನೀರಿನ ಅಭಾವ ಉಂಟಾಗುತ್ತದೆ. ನದಿಯ ನೀರನ್ನು ಮಂದಗತಿಯಲ್ಲಿ ಹರಿಯುವಂತೆ ಮಾಡಿ, ನೀರು ಭೂಮಿಯಲ್ಲಿ ಇಂಗಲು ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಈ ಚೆಕ್ ಡ್ಯಾಮ್ ನೆರವಾಗಲಿದೆ. ಈಗಾಗಲೇ ಸಿಂಧೂ ಜಲ ಒಪ್ಪಂದ ರದ್ದಾಗಿರುವುದರಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಭಾರತದ ಈ ನಡೆಯಿಂದ ಮತ್ತಷ್ಟು ಆತಂಕವಾಗಿದೆ.
- Sushma Chakre
- Updated on: Sep 4, 2026
- 11:21 pm
ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಫೋನ್ ನಂಬರ್ ಇದ್ದ ಪಾರಿವಾಳದ ಉಂಗುರ ಪತ್ತೆ; ಗಡಿಯಲ್ಲಿ ಹೈ ಅಲರ್ಟ್
ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್ನ ಮೋಲು ಚಕ್ ಪ್ರದೇಶದಲ್ಲಿ ಪಾಕಿಸ್ತಾನಿ ಮೊಬೈಲ್ ಸಂಖ್ಯೆಗಳನ್ನು ಹೊಂದಿರುವ ಉಂಗುರಗಳನ್ನು ಧರಿಸಿದ 2 ಅನುಮಾನಾಸ್ಪದ ಪಾರಿವಾಳಗಳು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಮೋಲು ಚಕ್ನ ಸ್ಥಳೀಯರೊಬ್ಬರು ತಮ್ಮ ಟೆರೇಸ್ನಲ್ಲಿ 2 ಅಪರಿಚಿತ ಪಾರಿವಾಳಗಳನ್ನು ನೋಡಿ ತಕ್ಷಣವೇ ಸಂಬಂಧಪಟ್ಟ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಿದರು. ತನಿಖೆಯ ಸಮಯದಲ್ಲಿ, ಪಾರಿವಾಳದ ಕಾಲಿನಲ್ಲಿ ಉಂಗುರ ಕಂಡುಬಂದಿದೆ. ಅವುಗಳಲ್ಲಿ 2 ಪಾಕಿಸ್ತಾನಿ ಮೊಬೈಲ್ ಸಂಖ್ಯೆಗಳಿದ್ದವು.
- Sushma Chakre
- Updated on: Sep 3, 2026
- 7:51 pm
ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ನಿವೃತ್ತಿ; ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರ್ಪಡೆ
2019ರಲ್ಲಿ ಪಾಕಿಸ್ತಾನದ ಯುದ್ಧವಿಮಾನದೊಂದಿಗಿನ ವೈಮಾನಿಕ ಕಾದಾಟದ ವೇಳೆ ಶೌರ್ಯ ಮೆರೆದಿದ್ದ ಭಾರತೀಯ ವಾಯುಪಡೆಯ ಫೈಟರ್ ಪೈಲಟ್ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಅವರು ಸೇವಾ ಅವಧಿ ಮುಗಿಯುವ ಮುನ್ನವೇ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ಅವರು ಕಮರ್ಷಿಯಲ್ ಪೈಲಟ್ ಆಗಿ ಖಾಸಗಿ ವಿಮಾನಯಾನ ಸಂಸ್ಥೆಯೊಂದನ್ನು ಸೇರಲಿದ್ದಾರೆ. 2021ರ ಡಿಸೆಂಬರ್ನಲ್ಲಿ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ಪಡೆದಿದ್ದ ಅಭಿನಂದನ್ ಸುಮಾರು 22 ವರ್ಷಗಳ ಕಾಲ ವಾಯುಪಡೆ ಪೈಲಟ್ ಆಗಿ ಸೇವೆ ಸಲ್ಲಿಸಿದ್ದರು.
- Sushma Chakre
- Updated on: Sep 2, 2026
- 11:12 pm
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಹಿಂದೂ ದೇವಾಲಯದ ಧ್ವಂಸಕ್ಕೆ ಭಾರತ ಆಕ್ರೋಶ
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಮದರಸಾ ನಿರ್ಮಾಣಕ್ಕಾಗಿ 125 ವರ್ಷ ಹಳೆಯ ಹಿಂದೂ ದೇವಾಲಯವೊಂದನ್ನು ಕಳೆದ ವಾರ ಧ್ವಂಸಗೊಳಿಸಲಾಗಿದೆ. ಈ ಕೃತ್ಯವು ಅಲ್ಪಸಂಖ್ಯಾತರ ಹಕ್ಕುಗಳ ಸಂಘಟನೆ ಮತ್ತು ಧಾರ್ಮಿಕ ಆಸ್ತಿಗಳ ಉಸ್ತುವಾರಿ ವಹಿಸಿರುವ ಮಂಡಳಿಯ ನಡುವೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಅಲ್ಪಸಂಖ್ಯಾತ ಸಮುದಾಯದ ಪ್ರತಿಭಟನೆಗಳ ನಡುವೆ, ಭಾರಿ ಮಳೆಯಿಂದಾಗಿ ದೇವಾಲಯದ ಒಂದು ಭಾಗ ಮಾತ್ರ ಕುಸಿದುಬಿದ್ದಿದೆ ಎಂದು ಪಾಕಿಸ್ತಾನ ಸರ್ಕಾರ ಸ್ಪಷ್ಟನೆ ನೀಡಿದೆ. ಆದರೆ, ಪಾಕಿಸ್ತಾನ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದೆ ಎಂದು ಭಾರತ ಆಕ್ರೋಶ ವ್ಯಕ್ತಪಡಿಸಿದೆ.
- Sushma Chakre
- Updated on: Sep 2, 2026
- 10:47 pm
ಹೇಗ್ ಕೋರ್ಟ್ ಆದೇಶಕ್ಕೆ ಕ್ಯಾರೆ ಅನ್ನದ ಭಾರತ: ಪಾಕ್ ಪ್ರಧಾನಿ ಎದುರೇ ಸಿಂಧೂ ನದಿ ನೀರು ನಿರ್ಬಂಧ ಸಮರ್ಥನೆ
ಭಾರತ ಸಿಂಧೂ ನದಿ ನೀರು ನಿರ್ಬಂಧ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಪಾಕಿಸ್ತಾನದ ಜಲತಂತ್ರವನ್ನು ಎದುರಿಸಿ, ಭಾರತ ಹೇಗ್ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿದೆ. ಶಾಂಘೈ ಶೃಂಗಸಭೆಯಲ್ಲಿ ಪಾಕ್ ಪ್ರಧಾನಿ ಮನವಿ ಮಾಡಿದರೂ, ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸುವವರೆಗೂ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಭಾರತ ಅಚಲ ನಿಲುವು ಪ್ರದರ್ಶಿಸಿದೆ. ಸಿಂಧೂ ಜಲ ಒಪ್ಪಂದದ ಪರಿಷ್ಕರಣೆಗೆ ಭಾರತ ಒತ್ತಾಯಿಸುತ್ತಿದೆ.
- Nayana Rajeev
- Updated on: Sep 2, 2026
- 11:16 am
ಎಸ್ಸಿಒ ಶೃಂಗಸಭೆಯ ಗ್ರೂಪ್ ಫೋಟೋದಿಂದ ಪ್ರಧಾನಿ ಮೋದಿಯ ಫೋಟೋ ಕಟ್ ಮಾಡಿದ ಪಾಕಿಸ್ತಾನ!
ಕಿರ್ಗಿಸ್ತಾನದಲ್ಲಿ ನಡೆದ ವಾರ್ಷಿಕ ಶೃಂಗಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನಿ ಪ್ರಧಾನಿ ಶಹಬಾಜ್ ಷರೀಫ್ ಸೇರಿದಂತೆ ಎಲ್ಲಾ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಫೋಟೋ ಸೆಷನ್ ನಡೆಸಲಾಯಿತು. ಆದರೆ, ಪಾಕಿಸ್ತಾನಿ ಪ್ರಧಾನಿ ಕಚೇರಿ ಆ ಫೋಟೋವನ್ನು ಎಡಿಟ್ ಮಾಡಿ, ಪ್ರಧಾನಿ ಮೋದಿಯವರ ಫೋಟೋವನ್ನು ಕಟ್ ಮಾಡಿದೆ. ಪಾಕಿಸ್ತಾನದ ಪ್ರಧಾನ ಮಂತ್ರಿಗಳ ಕಚೇರಿ (PMO) ಶೃಂಗಸಭೆಯ ಸಮಯದಲ್ಲಿ ತೆಗೆದ ಗ್ರೂಪ್ ಫೋಟೋದ ಎಡಿಟೆಡ್ ಫೋಟೋವನ್ನು ಪೋಸ್ಟ್ ಮಾಡಿದೆ. ಪಾಕಿಸ್ತಾನವು ಪ್ರಧಾನಿ ಮೋದಿಯವರ ಫೋಟೋವನ್ನು ಆ ಫೋಟೋದಿಂದ ತೆಗೆದುಹಾಕಿದೆ.
- Sushma Chakre
- Updated on: Sep 1, 2026
- 9:39 pm
ನೀರಿಗಾಗಿ ಹಾತೊರೆಯುತ್ತಿದ್ದ ಪಾಕಿಸ್ತಾನವೀಗ ಕಂಗಾಲು; ಸಲಾಲ್ ಡ್ಯಾಂನ ಗೇಟ್ ಓಪನ್ ಮಾಡಿದ ಭಾರತ
ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಜಲಾಶಯದ ನೀರಿನ ಮಟ್ಟವನ್ನು ನಿಯಂತ್ರಿಸಲು ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿರುವ ಸಲಾಲ್ ಅಣೆಕಟ್ಟಿನ ಹಲವು ಗೇಟ್ಗಳನ್ನು ತೆರೆಯಲಾಗಿದೆ. ಜಲಾನಯನ ಪ್ರದೇಶಗಳಲ್ಲಿ ಸತತ ಮಳೆಯಾಗುತ್ತಿರುವುದರಿಂದ ಅಣೆಕಟ್ಟಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಸುರಕ್ಷತಾ ದೃಷ್ಟಿಯಿಂದ ಅಣೆಕಟ್ಟಿನ ಗೇಟ್ಗಳನ್ನು ತೆರೆಯಲಾಗಿದ್ದು, ನದಿಯ ಕೆಳಭಾಗಕ್ಕೆ ನಿಯಂತ್ರಿತ ಪ್ರಮಾಣದಲ್ಲಿ ನೀರನ್ನು ಹರಿಸಲಾಗುತ್ತಿದೆ.
- Sushma Chakre
- Updated on: Aug 31, 2026
- 9:55 pm
ಸಿಂಧೂ ಜಲ ಒಪ್ಪಂದದ ಕುರಿತು ಪಾಕಿಸ್ತಾನದ ಪರ ತೀರ್ಪು ನೀಡಿದ ಮಧ್ಯಸ್ಥಿಕೆ ನ್ಯಾಯಾಲಯ; ಆದೇಶ ತಿರಸ್ಕರಿಸಿದ ಭಾರತ
ಸಿಂಧೂ ನದಿ ನೀರು ಒಪ್ಪಂದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪರವಾಗಿ ಕಾನೂನುಬಾಹಿರವಾಗಿ ರಚಿತಗೊಂಡ ಮಧ್ಯಸ್ಥಿಕೆ ನ್ಯಾಯಾಲಯ ನೀಡಿರುವ ತೀರ್ಪನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿದೆ. 1960ರ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸುವ ಭಾರತದ ನಿರ್ಧಾರವು ಮುಂದೆ ಕೂಡ ಜಾರಿಯಲ್ಲಿರುತ್ತದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.
- Sushma Chakre
- Updated on: Aug 31, 2026
- 7:30 pm
‘ಸನ್ನಿ ಡಿಯೋಲ್ ಮುಸ್ಲಿಂ ಎಂಬುದನ್ನು ಒಪ್ಪಿಕೊಳ್ಳಲು ಆಗಲಿಲ್ಲ’: ಶಬಾನಾ ಆಜ್ಮಿ
ಸನ್ನಿ ಡಿಯೋಲ್, ಪ್ರೀತಿ ಝಿಂಟಾ, ಶಬಾನಾ ಆಜ್ಮಿ ನಟಿಸಿದ ‘ಬಟ್ವಾರಾ 1947’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಆಮಿರ್ ಖಾನ್ ಅವರು ನಿರ್ಮಾಣ ಮಾಡಿದ್ದ ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲಿಲ್ಲ. ಸಿನಿಮಾದ ಸೋಲಿಗೆ ಪ್ರಮುಖ ಕಾರಣ ಏನಿರಬಹುದು ಎಂದು ಶಬಾನಾ ಆಜ್ಮಿ ಅವರು ಅವಲೋಕನ ಮಾಡಿದ್ದಾರೆ.
- Madan Kumar
- Updated on: Aug 30, 2026
- 7:50 am
ಆಪರೇಷನ್ ಸಿಂಧೂರ್ ವೇಳೆ S-400 ಕ್ಷಿಪಣಿ ಪತ್ತೆಗೆ ಪಾಕಿಸ್ತಾನದಿಂದ ಗೂಢಚಾರರ ನಿಯೋಜನೆ; ಭಾರತದ ಏರ್ ಮಾರ್ಷಲ್
'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಸಮಯದಲ್ಲಿ ಭಾರತದ ಅತ್ಯಾಧುನಿಕ S-400 ವಾಯು ರಕ್ಷಣಾ ವ್ಯವಸ್ಥೆಗಳನ್ನು ಪತ್ತೆಹಚ್ಚಲು ಪಾಕಿಸ್ತಾನವು ಭಾರತದಲ್ಲಿ ತನ್ನ ಗೂಢಚಾರರನ್ನು ನಿಯೋಜಿಸಿತ್ತು ಹಾಗೂ ಸ್ಲೀಪರ್ ಸೆಲ್ಗಳನ್ನು ಸಕ್ರಿಯಗೊಳಿಸಿತ್ತು ಎಂದು ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಭಾರತದಲ್ಲಿ "ಸುದರ್ಶನ ಚಕ್ರ" ಎಂದು ಕರೆಯಲ್ಪಡುವ S-400 ವಾಯು ರಕ್ಷಣಾ ವ್ಯವಸ್ಥೆಯು ದೇಶದ ವಾಯು ರಕ್ಷಣಾ ಜಾಲದ ಅತ್ಯಂತ ಪ್ರಮುಖ ಅಂಗವಾಗಿದೆ. 2025ರಲ್ಲಿ ನಡೆದ ಭಾರತ-ಪಾಕಿಸ್ತಾನ ಮಿಲಿಟರಿ ಸಂಘರ್ಷದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸಿತ್ತು.
- Sushma Chakre
- Updated on: Aug 27, 2026
- 10:37 pm