Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Army

Indian Army

2023ರಲ್ಲಿ ಸೇನೆಯಲ್ಲಿ ಮಹಿಳಾ ಸೇನಾನಿಗಳು ಮಾಡಿದ ಸಾಧನೆಗಳೇನು? ಅವರು ಕೈಗೊಂಡ ಪ್ರಮುಖ ನಿರ್ಧಾರಗಳೇನು? ಮೂರು ಸೇನೆಗಳಲ್ಲಿ ಒಟ್ಟು 11,414 ಮಹಿಳಾ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳು, ಇತರ ಶ್ರೇಣಿಗಳು, ಜೊತೆಗೆ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಶುಶ್ರೂಷಾ ಸೇವೆಗಳನ್ನು ಒಳಗೊಂಡಿದೆ.

ಭಾರತದಲ್ಲಿ ಫಿರಂಗಿ ಶಕ್ತಿಯ ಯುಗಾರಂಭ; 7,000 ಕೋಟಿ ಮೌಲ್ಯದ ATAGS ಒಪ್ಪಂದಕ್ಕೆ ಮೋದಿ ಸಂಪುಟ ಅನುಮೋದನೆ

ಸ್ಥಳೀಯವಾಗಿ ತಯಾರಿಸಿದ 7,000 ಕೋಟಿ ರೂ. ಮೌಲ್ಯದ ಆರ್ಟಿ ಬಂದೂಕುಗಳನ್ನು ಮುಂದಿನ ವಾರ ಭಾರತೀಯ ಸೇನೆಗೆ ನೀಡಲಾಗುವುದು. ಗಡಿ ರಕ್ಷಣೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಮೋದಿ ಸಂಪುಟ ಸ್ಥಳೀಯ ಎಟಿಎಜಿಎಸ್ ಒಪ್ಪಂದಕ್ಕೆ ಅನುಮೋದನೆ ನೀಡಿದೆ. 327 ಟೋವಿಂಗ್ ಟ್ರಕ್‌ಗಳನ್ನು ಒಳಗೊಂಡಿರುವ ATAGS (ಸುಧಾರಿತ ಟೋಡ್ ಆರ್ಟಿಲರಿ ಗನ್ ಸಿಸ್ಟಮ್) ಒಪ್ಪಂದವನ್ನು ಅಂಗೀಕರಿಸಲಾಗಿದ್ದು, ಮುಂದಿನ ವಾರದ ವೇಳೆಗೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು.

ಮದ್ದುಗುಂಡುಗಳ ತಯಾರಿಕೆಯಲ್ಲಿ ಭಾರತ ಶೇ. 88ರಷ್ಟು ಸ್ವಾವಲಂಬನೆ: ರಕ್ಷಣಾ ಸಚಿವರ ಮಾಹಿತಿ

India achieves 88pc self sufficiency in ammunition manufacturing: ಭಾರತಕ್ಕೆ ಅಗತ್ಯವಾಗಿರುವ ಮದ್ದುಗುಂಡುಗಳಲ್ಲಿ ಶೇ. 88ರಷ್ಟನ್ನು ದೇಶೀಯವಾಗಿಯೇ ತಯಾರಿಸಲಾಗುತ್ತಿದೆ. ಈ ಮಾಹಿತಿಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಂಚಿಕೊಂಡಿದ್ದಾರೆ. ರಕ್ಷಣಾ ಕ್ಷೇತ್ರದಿಂದ ಒಟ್ಟು 23,000 ಕೋಟಿ ರೂ ಮೊತ್ತದ ರಫ್ತಾಗುತ್ತಿದೆ. 2029ರೊಳಗೆ ಅದು 50,000 ಕೋಟಿ ರೂ ದಾಟಿಸುವ ಗುರಿ ಇದೆ ಎಂದಿದ್ದಾರೆ ಸಚಿವರು.

ಮಧ್ಯಪ್ರದೇಶದ ಶಿವಪುರಿ ಬಳಿ ಐಎಎಫ್ ಮಿರಾಜ್ 2000 ಯುದ್ಧ ವಿಮಾನ ಪತನ; ಪೈಲಟ್‌ಗಳು ಸೇಫ್

ಭಾರತೀಯ ವಾಯುಪಡೆಯು ಎಕ್ಸ್​ನಲ್ಲಿನ ಪೋಸ್ಟ್‌ನಲ್ಲಿ IAFನ ಮಿರಾಜ್ 2000 ವಿಮಾನವು ಇಂದು ನಿಯಮಿತ ತರಬೇತಿ ಹಾರಾಟದ ಸಮಯದಲ್ಲಿ ಶಿವಪುರಿ (ಗ್ವಾಲಿಯರ್) ಬಳಿ ಪತನಗೊಂಡಿತು. ಈ ವ್ಯವಸ್ಥೆಯ ದೋಷವನ್ನು ಎದುರಿಸಿದ ನಂತರ ಅಪಘಾತಕ್ಕೀಡಾಯಿತು. ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿ ಹೊರನಡೆದರು. ಅಪಘಾತದ ಕಾರಣವನ್ನು ಕಂಡುಹಿಡಿಯಲು IAF ತನಿಖೆಗೆ ಆದೇಶಿಸಿದೆ."

ಹೆಸರಿಗೆ ಮೇಡ್ ಇನ್ ಇಂಡಿಯಾ; ಒಳಗಿರೋವೆಲ್ಲವೂ ಚೀನೀ ಬಿಡಿಭಾಗಗಳೇ… ಪಕ್ಕಾ ದೇಶೀ ಡ್ರೋನ್​ಗಳಿಗೆ ಪರದಾಡುತ್ತಿರುವ ಭಾರತೀಯ ಸೇನೆ

Pure Made-in-India drones for Indian army: ಐಜಿ ಡ್ರೋನ್ಸ್ ಎನ್ನುವ ಭಾರತೀಯ ಡ್ರೋನ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಗೆ ಭಾರತೀಯ ಸೇನೆಯಿಂದ ಗುತ್ತಿಗೆ ಸಿಕ್ಕಿದೆ. ಚೀನೀ ಬಿಡಿಭಾಗಗಳು ಇಲ್ಲದೇ ಇರುವ ಡ್ರೋನ್​ಗಳನ್ನು ತಯಾರಿಸಿ ಸರಬರಾಜು ಮಾಡುವಂತೆ ತಿಳಿಸಿದೆ. ಹೆಚ್ಚಿನ ಭಾರತೀಯ ಕಂಪನಿಗಳು ಭಾರತದಲ್ಲಿ ಡ್ರೋನ್ ತಯಾರಿಸಿದರೂ ಅದಕ್ಕೆ ಬೇಕಾದ ಪ್ರಮುಖ ಬಿಡಿಭಾಗಗಳನ್ನು ಚೀನಾದಿಂದ ಆಮದು ಮಾಡುತ್ತವೆ. ಇದರಿಂದ ಡ್ರೋನ್​ಗಳನ್ನು ಹ್ಯಾಕ್ ಮಾಡುವುದು ಸುಲಭವಾಗುತ್ತದೆ. ಶತ್ರುಗಳ ಕೈಗೆ ಜುಟ್ಟು ಕೊಟ್ಟಂತಾಗುತ್ತದೆ.

ಸೇನಾ ಪಡೆಗಳ ಆಧುನೀಕರಣಕ್ಕೆ ಕ್ರಮ: ರಕ್ಷಣಾ ಕ್ಷೇತ್ರದ ಅನುದಾನ ಹೆಚ್ಚಿಸಿದ ನಿರ್ಮಲಾ ಬಜೆಟ್

ಭಾರತದ 2024-25ನೇ ಸಾಲಿನ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 6.81 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಹೊಸ ಉಪಕರಣಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಅನುದಾನ ನೀಡಲಾಗಿದೆಯಾದರೂ, ನೆರೆಯ ಚೀನಾಕ್ಕಿಂತ ಭಾರತದ ರಕ್ಷಣಾ ಬಜೆಟ್ ಕಡಿಮೆಯಾಗಿದೆ ಎಂಬುದನ್ನು ಗಮನಿಸಬೇಕು.

ಶಿಕ್ಷಣದ ಗುಣಮಟ್ಟ ಸುಧಾರಣೆಗೆ 100 ಹೊಸ ಸೈನಿಕ ಶಾಲೆಗಳ ಸ್ಥಾಪನೆ; ಕೇಂದ್ರ ಸಚಿವ ರಾಜನಾಥ್ ಸಿಂಗ್ ಘೋಷಣೆ

ಭಾರತದಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು, ದೇಶಾದ್ಯಂತ 100 ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು ಸಜ್ಜಾಗಿದೆ ಎಂದು ಕೇರಳದ ಅಲಪ್ಪುಳದಲ್ಲಿರುವ ವಿದ್ಯಾಧಿರಾಜ ವಿದ್ಯಾಪೀಠಂ ಸೈನಿಕ ಶಾಲೆಯ ವಾರ್ಷಿಕ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಣೆ ಮಾಡಿದ್ದಾರೆ. ಎಲ್ಲ ವರ್ಗದ, ಸಮುದಾಯದವರಿಗೂ ಸೈನಿಕ ಶಾಲೆ ತಲುಪುವಂತಾಗಬೇಕೆಂಬುದು ಸರ್ಕಾರದ ಆಶಯ ಎಂದಿದ್ದಾರೆ.

ಆರ್ಮೇನಿಯಾಗೆ ಮೇಡ್ ಇನ್ ಇಂಡಿಯಾ ಗನ್​ಗಳ ರಫ್ತು; MRSAM ಕ್ಷಿಪಣಿಗಳಿಗೆ ಆರ್ಡರ್ ಕೊಟ್ಟ ಭಾರತೀಯ ನೌಕಾಪಡೆ

Indian defence industry: ಸದಾ ಯುದ್ಧದ ನೆರಳಿನಲ್ಲಿರುವ ಆರ್ಮೇನಿಯಾ ದೇಶ ತನ್ನ ರಕ್ಷಣಾ ವ್ಯವಸ್ಥೆ ಬಲಪಡಿಸಲು ಭಾರತೀಯ ಯುದ್ದಾಸ್ತ್ರಗಳನ್ನು ತರಿಸಿಕೊಳ್ಳುತ್ತದೆ. ಭಾರತದ ಎಲ್ ಅಂಡ್ ಟಿ ಸಂಸ್ಥೆ ತಯಾರಿಸಿರುವ ಆರ್ಟಿಲರಿ ಗನ್​ಗಳನ್ನು ಆರ್ಮೇನಿಯಾ ಆಮದು ಮಾಡಿಕೊಂಡಿದೆ. ಇದೇ ವೇಳೆ, ಭಾರತೀಯ ನೌಕಾಪಡೆಯು ಕ್ಷಿಪಣಿಗಳಿಗಾಗಿ ಭಾರತ್ ಡೈನಾಮಿಕ್ಸ್ ಸಂಸ್ಥೆಯೊಂದಿಗೆ 2,960 ಕೋಟಿ ರೂ ಮೊತ್ತದ ಒಪ್ಪಂದ ಮಾಡಿಕೊಂಡಿದೆ.

ರಾಜಸ್ಥಾನದ ಬಿಕಾನೇರ್‌ನಲ್ಲಿ ತರಬೇತಿ ವೇಳೆ ಸ್ಫೋಟ; ಇಬ್ಬರು ಯೋಧರ ಸಾವು

ರಾಜಸ್ಥಾನದಲ್ಲಿ ತರಬೇತಿ ವೇಳೆ ಟ್ಯಾಂಕರ್‌ನಲ್ಲಿ ಮದ್ದುಗುಂಡುಗಳು ಹಾಗೂ ಶಸ್ತ್ರಾಸ್ತ್ರಗಳನ್ನು ತುಂಬಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಮೃತಪಟ್ಟಿರುವ ಅಶುತೋಶ್ ಮಿಶ್ರಾ ಉತ್ತರ ಪ್ರದೇಶದ ಡಿಯೋರಿಯಾದವರು. ಜಿತೇಂದ್ರ ರಾಜಸ್ಥಾನದ ದೌಸಾದ ನಿವಾಸಿಯಾಗಿದ್ದಾರೆ. ಈ ವಾರ ಗುಂಡಿನ ಚಕಮಕಿಯಲ್ಲಿ ನಡೆದ ಎರಡನೇ ಮಾರಣಾಂತಿಕ ಘಟನೆ ಇದಾಗಿದೆ.

ಭಾರತೀಯ ನೌಕಾಪಡೆ ಬತ್ತಳಿಕೆಗೆ ಸೇರಿದ ಶಕ್ತಿಶಾಲಿ ‘ದೃಷ್ಟಿ’ ಡ್ರೋನ್; ಅದಾನಿ ಕಂಪನಿಯಿಂದ ಎರಡನೇ ಯುಎವಿ ಸರಬರಾಜು

Drishti-10 starliner, Indian version of Israeli Hermes-900 UAV: ಇಸ್ರೇಲ್​ನ ಎಲ್​ಬಿಟ್ ಸಿಸ್ಟಮ್ಸ್ ಸಹಯೋಗದಲ್ಲಿ ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್ ಕಂಪನಿ ತಯಾರಿಸುತ್ತಿರುವ ದೃಷ್ಟಿ-10 ಡ್ರೋನ್ ಅನ್ನು ಭಾರತೀಯ ನೌಕಾಪಡೆ ಪಡೆದಿದೆ. ಅದಾನಿ ಕಂಪನಿಯಿಂದ ನೌಕಾಪಡೆಗೆ ನೀಡಲಾಗಿರುವ ಎರಡನೇ ಡ್ರೋನ್ ಇದು. ಎಲ್ಬಿಟ್ ಸಿಸ್ಟಮ್ಸ್ ತಯಾರಿಸಿರುವ ಹರ್ಮಿಸ್-900 ಡ್ರೋನ್​ನ ಪರಿಷ್ಕೃತ ಆವೃತ್ತಿ ದೃಷ್ಟಿ-10 ಸ್ಟಾರ್​ಲೈನರ್ ಡ್ರೋನ್.

ಜಮ್ಮುವಿನ ಅಖ್ನೂರ್​ನಲ್ಲಿ ಭದ್ರತಾ ಪಡೆಗಳ ವಾಹನಗಳ ಮೇಲೆ ಉಗ್ರರ ದಾಳಿ; ಗುಲ್ಮಾರ್ಗ್​ನಲ್ಲಿ ಗುಂಡಿನ ಚಕಮಕಿ

Jammu Kashmir terror attack: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದಕರ ಆಟಾಟೋಪ ಮುಂದುವರಿದಿದೆ. ಜಮ್ಮು ಜಿಲ್ಲೆಯ ಅಖ್ನೂರ್ ಸೆಕ್ಟರ್​ನಲ್ಲಿ ಭದ್ರತಾ ಪಡೆಗಳ ವಾಹನಗಳ ಮೇಲೆ ಉಗ್ರರ ಗುಂಪೊಂದು 15ರಿಂದ 20 ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಬಟ್ಟಲ್ ಎಂಬಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ಗುಂಪೊಂದರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ.

ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್