Indian Army
2023ರಲ್ಲಿ ಸೇನೆಯಲ್ಲಿ ಮಹಿಳಾ ಸೇನಾನಿಗಳು ಮಾಡಿದ ಸಾಧನೆಗಳೇನು? ಅವರು ಕೈಗೊಂಡ ಪ್ರಮುಖ ನಿರ್ಧಾರಗಳೇನು? ಮೂರು ಸೇನೆಗಳಲ್ಲಿ ಒಟ್ಟು 11,414 ಮಹಿಳಾ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳು, ಇತರ ಶ್ರೇಣಿಗಳು, ಜೊತೆಗೆ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಶುಶ್ರೂಷಾ ಸೇವೆಗಳನ್ನು ಒಳಗೊಂಡಿದೆ.
ಜಮ್ಮು ಕಾಶ್ಮೀರದ ಬದ್ಗಾಮ್ ಅರಣ್ಯದಲ್ಲಿ ಸೇನಾ ಕಾರ್ಯಾಚರಣೆ; ಓರ್ವ ಉಗ್ರನ ಎನ್ಕೌಂಟರ್
ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಶ್ರೀನಗರ ಸೆಕ್ಟರ್ನ ಸಿಆರ್ಪಿಎಫ್ ಜಂಟಿ ಪಡೆಗಳು ಓರ್ವ ಭಯೋತ್ಪಾದಕನ ಹತ್ಯೆ ಮಾಡಿವೆ. ಪುಲ್ವಾಮಾ ಜಿಲ್ಲೆಯ ಪಖರ್ಪೋರಾದಿಂದ ಬದ್ಗಾಮ್ನ ಯೂಸ್ಮಾರ್ಗ್ ಕಡೆಗೆ ಶಂಕಿತ ಉಗ್ರರ ಗುಂಪೊಂದು ಚಲಿಸುತ್ತಿರುವ ಮಾಹಿತಿಯ ಆಧಾರದ ಮೇಲೆ ಈ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು.
- Sushma Chakre
- Updated on: Sep 4, 2026
- 5:52 pm
ಆಪರೇಷನ್ ಸಿಂಧೂರ್ ವೇಳೆ S-400 ಕ್ಷಿಪಣಿ ಪತ್ತೆಗೆ ಪಾಕಿಸ್ತಾನದಿಂದ ಗೂಢಚಾರರ ನಿಯೋಜನೆ; ಭಾರತದ ಏರ್ ಮಾರ್ಷಲ್
'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಸಮಯದಲ್ಲಿ ಭಾರತದ ಅತ್ಯಾಧುನಿಕ S-400 ವಾಯು ರಕ್ಷಣಾ ವ್ಯವಸ್ಥೆಗಳನ್ನು ಪತ್ತೆಹಚ್ಚಲು ಪಾಕಿಸ್ತಾನವು ಭಾರತದಲ್ಲಿ ತನ್ನ ಗೂಢಚಾರರನ್ನು ನಿಯೋಜಿಸಿತ್ತು ಹಾಗೂ ಸ್ಲೀಪರ್ ಸೆಲ್ಗಳನ್ನು ಸಕ್ರಿಯಗೊಳಿಸಿತ್ತು ಎಂದು ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಭಾರತದಲ್ಲಿ "ಸುದರ್ಶನ ಚಕ್ರ" ಎಂದು ಕರೆಯಲ್ಪಡುವ S-400 ವಾಯು ರಕ್ಷಣಾ ವ್ಯವಸ್ಥೆಯು ದೇಶದ ವಾಯು ರಕ್ಷಣಾ ಜಾಲದ ಅತ್ಯಂತ ಪ್ರಮುಖ ಅಂಗವಾಗಿದೆ. 2025ರಲ್ಲಿ ನಡೆದ ಭಾರತ-ಪಾಕಿಸ್ತಾನ ಮಿಲಿಟರಿ ಸಂಘರ್ಷದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸಿತ್ತು.
- Sushma Chakre
- Updated on: Aug 27, 2026
- 10:37 pm
ಆಪರೇಷನ್ ಸಿಂಧೂರ್ ವೇಳೆ ಭಾರತ ಪಾಕಿಸ್ತಾನದ ಕಿರಾನಾ ಹಿಲ್ಸ್ ಪರಮಾಣು ಕೇಂದ್ರದ ಮೇಲೆ ದಾಳಿ ಮಾಡಿತ್ತಾ?
ಕಳೆದ ವರ್ಷ ನಡೆದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಸಮಯದಲ್ಲಿ ಭಾರತದ ಡ್ರೋನ್ ಪಾಕಿಸ್ತಾನದ ಕಿರಾನಾ ಹಿಲ್ಸ್ ಮೇಲೆ ಬಿದ್ದಿತ್ತು. 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ವೇಳೆ ಭಾರತದ ಡ್ರೋನ್ (ಲೊಯಿಟರಿಂಗ್ ಮ್ಯೂನಿಷನ್) ಪಾಕಿಸ್ತಾನದ ಅತ್ಯಂತ ಆಯಕಟ್ಟಿನ ಮಿಲಿಟರಿ ಪ್ರದೇಶವಾದ ಕಿರಾನಾ ಹಿಲ್ಸ್ ಮೇಲೆ ಅಪ್ಪಳಿಸಿದ ಘಟನೆಗೆ ಸಂಬಂಧಿಸಿದಂತೆ ಮಾಜಿ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಅವರು ನೀಡಿರುವ ವಿವರಣೆ ಕೆಳಗಿನಂತಿದೆ.
- Sushma Chakre
- Updated on: Aug 25, 2026
- 11:20 pm
ಡಿಆರ್ಡಿಒ ಮಿಸೈಲ್ ಸಿಸ್ಟಂಗಳ ತಂತ್ರಜ್ಞಾನ ರಕ್ಷಣಾ ಉದ್ಯಮಕ್ಕೆ ಹಸ್ತಾಂತರ; ದೇಶೀಯವಾಗಿ ಕ್ಷಿಪಣಿ ತಯಾರಿಕೆಗೆ ಭರ್ಜರಿ ಪುಷ್ಟಿ
Govt approves transfer of technology of DRDO developed missile systems to defence industry: ರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿರುವ ಸರ್ಕಾರಿ ಸ್ವಾಮ್ಯದ ಡಿಆರ್ಡಿಒ ಸಂಸ್ಥೆಯ ಮಿಸೈಲ್ ಟೆಕ್ನಾಲಜಿಯನ್ನು ಡಿಫೆನ್ಸ್ ಇಂಡಸ್ಟ್ರಿಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಡಿಆರ್ಡಿಒ ಅಭಿವೃದ್ಧಿಪಡಿಸಿದ ಮಿಸೈಲ್ ಸಿಸ್ಟಂಗಳ ತಂತ್ರಜ್ಞಾನವನ್ನು ಬಳಸಿ ರಕ್ಷಣಾ ಕ್ಷೇತ್ರದ ಕಂಪನಿಗಳು ಕ್ಷಿಪಣಿಗಳನ್ನು ತಯಾರಿಸಲಿವೆ.
- Vijaya Sarathy SN
- Updated on: Aug 25, 2026
- 5:34 pm
‘ಆಪರೇಷನ್ ಸಿಂಧೂರ್’ ಡಾಕ್ಯುಮೆಂಟರಿಗೆ ಬೆಚ್ಚಿದ ಪಾಕಿಸ್ತಾನ; ತಡರಾತ್ರಿ 2 ಗಂಟೆಗೆ ಪಾಕ್ ಸೇನೆ ಪ್ರತಿಕ್ರಿಯೆ
ಏಪ್ರಿಲ್ 2025ರ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ 'ಆಪರೇಷನ್ ಸಿಂಧೂರ್' ಕುರಿತು ಡಿಸ್ಕವರಿ ವಾಹಿನಿಯಲ್ಲಿ ಪ್ರಸಾರವಾದ ಸಾಕ್ಷ್ಯಚಿತ್ರ ಸೀರೀಸ್ಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಸೇನೆಯು ಮಧ್ಯರಾತ್ರಿಯ ನಂತರ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಆಗಸ್ಟ್ 15ರಂದು ಪ್ರಸಾರವಾದ 'ಡಿಕ್ಲಾಸಿಫೈಡ್: ಆಪರೇಷನ್ ಸಿಂಧೂರ್' ಎಂಬ ಎರಡು ಭಾಗಗಳ ಈ ಸಾಕ್ಷ್ಯಚಿತ್ರ ಸರಣಿ ಮೇ 7, 2025ರಂದು ಪ್ರಾರಂಭವಾದ ಈ ಕಾರ್ಯಾಚರಣೆಯ ಯೋಜನೆ ಮತ್ತು ಅದ್ನು ನಿರ್ವಹಿಸಿದ ಭಾರತದ ಹಿರಿಯ ಮಿಲಿಟರಿ ಹಾಗೂ ಭದ್ರತಾ ಅಧಿಕಾರಿಗಳ ಸಂದರ್ಶನಗಳನ್ನು ಒಳಗೊಂಡಿದೆ.
- Sushma Chakre
- Updated on: Aug 19, 2026
- 4:43 pm
676 ಸ್ಟಾರ್ಟ್ಅಪ್ಗಳು, 548 ಒಪ್ಪಂದಗಳು: ಭಾರತದ ರಕ್ಷಣಾ ತಂತ್ರಜ್ಞಾನದ ಕನಸಿಗೆ ‘iDEX’ ಬಲ
How iDEX is scaling India’s defence-tech ambitions: ಯಾವುದೇ ಕ್ಷೇತ್ರವು ಬೆಳವಣಿಗೆ ಸಾಧಿಸಲು ಇನ್ನೋವೇಶನ್ ಬಹಳ ಅಗತ್ಯ. ಈ ನಾವೀನ್ಯತೆಯನ್ನು ಪ್ರೋತ್ಸಾಹಿಸುವ ವ್ಯವಸ್ಥೆಯ ನಿರ್ಮಾಣದ ಅಗತ್ಯತೆ ಇರುತ್ತದೆ. ಡಿಫೆನ್ಸ್ ಸೆಕ್ಟರ್ನಲ್ಲಿ ಸರ್ಕಾರ iDEX ಯೋಜನೆಯನ್ನು ತಂದಿದ್ದು ಇದು ವರ್ಷಗಳಿಂದ ನವೋದ್ಯಮಗಳು, ಸಣ್ಣ ಉದ್ದಿಮೆಗಳಿಗೆ ಪ್ರೋತ್ಸಾಹ ಕೊಡುತ್ತಿದೆ. ಇದರಿಂದ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧನೆಯ ಕನಸು ನನಸಾಗುವ ಅವಕಾಶ ಹೆಚ್ಚಿದೆ.
- Vijaya Sarathy SN
- Updated on: Aug 10, 2026
- 7:10 pm
ಪಾಕ್ ಮುಖವಾಡ ಮತ್ತೊಮ್ಮೆ ಬಯಲು; ಪಾಕಿಸ್ತಾನದಲ್ಲಿ 30ಕ್ಕೂ ಹೆಚ್ಚು ಲಷ್ಕರ್ ಉಗ್ರರ ಹತ್ಯೆಯನ್ನು ಒಪ್ಪಿಕೊಂಡ ಭಯೋತ್ಪಾದಕ
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಭಾರತ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಆ ಸಂದರ್ಭದಲ್ಲಿ ಪಾಕಿಸ್ತಾನ ತಾನು ಯಾವುದೇ ಉಗ್ರ ಸಂಘಟನೆಗಳಿಗೆ ಆಶ್ರಯ ನೀಡಿಲ್ಲ ಎಂದು ಘೋಷಿಸಿಕೊಂಡಿತ್ತು. ಆದರೆ, ಇದೀಗ ಪಾಕಿಸ್ತಾನದ ಅಸಲಿ ಮುಖ ಮತ್ತೊಮ್ಮೆ ಬಯಲಾಗಿದೆ. ಲಷ್ಕರ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ರಿಜ್ವಾನ್ ಹನೀಫ್ ಎಂಬಾತನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿಷೇಧಿತ ಉಗ್ರ ಸಂಘಟನೆಯನ್ನು ದೇಶದಿಂದಲೇ ನಿವಾರಿಸಿರುವುದಾಗಿ ಪಾಕಿಸ್ತಾನ ಸರ್ಕಾರ ಪ್ರತಿಪಾದಿಸುತ್ತಿರುವ ಬೆನ್ನಲ್ಲೇ ಈ ವಿಡಿಯೋ ಪಾಕಿಸ್ತಾನದ ಸುಳ್ಳನ್ನು ಬಯಲು ಮಾಡಿದೆ.
- Sushma Chakre
- Updated on: Aug 3, 2026
- 9:21 pm
ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ ಗಡಿಗಳಲ್ಲಿ ಪ್ರಬಲ ರೈಲು ಜಾಲ ಅಳವಡಿಕೆಗೆ ಭಾರತ ಯೋಜನೆ; 45,000 ಕೋಟಿ ರೂ ಹೂಡಿಕೆ ಸಾಧ್ಯತೆ
India to strengthen border regions by upgrading railway infrastructure: ಗಡಿಗಳಲ್ಲಿ ಬಿಗಿ ಭದ್ರತೆ ಹೆಚ್ಚಿಸಲು ಮತ್ತು ಸಮರ ಸನ್ನದ್ಧತೆಯನ್ನು ತೀವ್ರಗೊಳಿಸಲು ಭಾರತ ಮತ್ತೊಂದು ಹೆಜ್ಜೆ ಇಡುತ್ತಿದೆ. ಪಾಕಿಸ್ತಾನ, ಚೀನಾ, ಬಾಂಗ್ಲಾ ಗಡಿಗಳಲ್ಲಿ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿಗೆ ಭಾರತ ಯೋಜನೆ ಹಾಕಿದೆ. 45,000 ಕೋಟಿ ರೂ ಹೂಡಿಕೆ ಬೇಕಾಗಬಹುದು. ಎರಡು ವರ್ಷದಲ್ಲಿ ಈ ಹೂಡಿಕೆ ಆಗಲಿದೆ.
- Vijaya Sarathy SN
- Updated on: Aug 3, 2026
- 2:35 pm
IRCTC Luggage Booking: ಆನ್ಲೈನ್ನಲ್ಲಿ ಹೆಚ್ಚುವರಿ ಲಗೇಜ್ ಬುಕಿಂಗ್ ಸೇವೆ ಆರಂಭಿಸಿದ ಭಾರತೀಯ ರೈಲ್ವೆ
Indian Railways Online Luggage Booking: ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ(Indian Railways)ಯು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದು, ಇಂದಿನಿಂದ ಆನ್ಲೈ್ ಲಗೇಜ್ ಬುಕಿಂಗ್ ಸೌಲಭ್ಯವನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ರೈಲುಗಳಲ್ಲಿ ನಿಯಮಕ್ಕಿಂತ ಹೆಚ್ಚು ಭಾರವಾದ ಲಗೇಜ್ ಹೊತ್ತು ತರುವುದರಿಂದ ಸಹ-ಪ್ರಯಾಣಿಕರಿಗೆ ಉಂಟಾಗುತ್ತಿದ್ದ ತೊಂದರೆಗಳನ್ನು ತಪ್ಪಿಸಲು ಹಾಗೂ ನಿಲ್ದಾಣಗಳ ಪಾರ್ಸೆಲ್ ಕೌಂಟರ್ಗಳಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಈ ಡಿಜಿಟಲ್ ವ್ಯವಸ್ಥೆಯನ್ನು ತರಲಾಗಿದೆ.
- Nayana Rajeev
- Updated on: Jul 31, 2026
- 12:18 pm
ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುತ್ತಿದೆ ‘ಮಾಲ್ವಾಣ್’ ಯುದ್ಧನೌಕೆ: ಸ್ವದೇಶಿ ನಿರ್ಮಿತ ಹಡಗಿನ ವಿಶೇಷಗಳೇನು? ಇಲ್ಲಿದೆ ನೋಡಿ
INS Malvan: ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ಇಂದು ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿತ ಐಎನ್ಎಸ್ ಮಾಲ್ವಾಣ್ ಯುದ್ಧನೌಕೆ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿದೆ. ಜಲಾಂತರ್ಗಾಮಿ ಪತ್ತೆ ಹಾಗೂ ಸಮುದ್ರ ಭದ್ರತೆಗೆ ಅಗತ್ಯವಾದ ಅತ್ಯಾಧುನಿಕ ವ್ಯವಸ್ಥೆಗಳನ್ನು ಈ ನೌಕೆ ಹೊಂದಿದೆ. ಮಾಲ್ವಾಣ್ ಯುದ್ಧನೌಕೆಯ ವಿಶೇಷತೆಗಳ ಮಾಹಿತಿ ಹಾಗೂ ವಿಡಿಯೋ ಇಲ್ಲಿದೆ.
- Ashok
- Updated on: Jul 22, 2026
- 9:56 am
ರಕ್ಷಣಾ ನೀತಿಯಲ್ಲಿ ದೊಡ್ಡ ಬದಲಾವಣೆ; ಕ್ಷಿಪಣಿ ತಯಾರಿಕೆಗೆ ಖಾಸಗಿಯವರಿಗೂ ಸಿಗಲಿದೆ ಅವಕಾಶ
Indian government to allow private sector to participate in missile production: ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆದಿಟ್ಟಿರುವ ಸರ್ಕಾರ ಈಗ ರಕ್ಷಣಾ ಕ್ಷೇತ್ರವನ್ನೂ ಹೆಚ್ಚೆಚ್ಚು ಮುಕ್ತಗೊಳಿಸುತ್ತಿದೆ. ಸರ್ಕಾರಿ ಸಂಸ್ಥೆಗಳ ಹೆಗಲಿಗೆ ಇದ್ದ ಕ್ಷಿಪಣಿಗಳ ಉತ್ಪಾದನೆಯ ಅವಕಾಶವನ್ನು ಖಾಸಗಿಯವರಿಗೂ ಕೊಡಲು ಸರ್ಕಾರ ನಿರ್ಧರಿಸಿದೆ. ಅಸ್ತ್ರ ಮಾರ್ಕ್-2, ಪ್ರಳಯ್ ಕ್ಷಿಪಣಿಗಳ ತಯಾರಿಕೆಗೆ ಟೆಂಡರ್ ಕರೆಯಬಹುದು.
- Vijaya Sarathy SN
- Updated on: Jul 12, 2026
- 5:48 pm
Dhiraj Seth ಭಾರತದ ನೂತನ ಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್ ಅಧಿಕಾರ ಸ್ವೀಕಾರ
ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಇವರು ಭಾರತೀಯ ಸೇನೆಯ 31ನೇ ಮುಖ್ಯಸ್ಥರಾಗಿದ್ದು, ನಿವೃತ್ತರಾದ ಜನರಲ್ ಉಪೇಂದ್ರ ದ್ವಿವೇದಿ ಅವರ ಸ್ಥಾನವನ್ನು ಅಲಂಕರಿಸಿದ್ದಾರೆ. ಜನರಲ್ ಧೀರಜ್ ಸೇಠ್ ಭಾರತೀಯ ಸೇನೆಯ ಅತ್ಯಂತ ಗೌರವಾನ್ವಿತ ಮತ್ತು ಅನುಭವಿ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ಭಾರತೀಯ ಸೇನೆಯ 'ಆರ್ಮರ್ಡ್ ಕಾರ್ಪ್ಸ್' ವಿಭಾಗಕ್ಕೆ ಸೇರಿದವರಾಗಿದ್ದಾರೆ. 1997ರಲ್ಲಿ ನಿವೃತ್ತರಾದ ಜನರಲ್ ಶಂಕರ್ ರಾಯ್ ಚೌಧರಿ ಅವರ ನಂತರ, ಕಳೆದ ಮೂರು ದಶಕಗಳಲ್ಲಿ ಭೂಸೇನೆಯ ಅತ್ಯುನ್ನತ ಹುದ್ದೆಗೇರಿದ ಮೊದಲ ಆರ್ಮರ್ಡ್ ಕಾರ್ಪ್ಸ್ ಅಧಿಕಾರಿ ಇವರಾಗಿದ್ದಾರೆ.
- Sushma Chakre
- Updated on: Jun 30, 2026
- 5:11 pm