Indian Army
2023ರಲ್ಲಿ ಸೇನೆಯಲ್ಲಿ ಮಹಿಳಾ ಸೇನಾನಿಗಳು ಮಾಡಿದ ಸಾಧನೆಗಳೇನು? ಅವರು ಕೈಗೊಂಡ ಪ್ರಮುಖ ನಿರ್ಧಾರಗಳೇನು? ಮೂರು ಸೇನೆಗಳಲ್ಲಿ ಒಟ್ಟು 11,414 ಮಹಿಳಾ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳು, ಇತರ ಶ್ರೇಣಿಗಳು, ಜೊತೆಗೆ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಶುಶ್ರೂಷಾ ಸೇವೆಗಳನ್ನು ಒಳಗೊಂಡಿದೆ.
ನೂತನ ಸಿಡಿಎಸ್ ಆಗಿ ಲೆಫ್ಟಿನೆಂಟ್ ಜನರಲ್ ಎನ್ಎಸ್ ರಾಜಾ ಸುಬ್ರಮಣಿ ನೇಮಕ: ನೌಕಾಪಡೆಗೆ ಕೃಷ್ಣ ಸ್ವಾಮಿನಾಥನ್ ಮುಖ್ಯಸ್ಥ
ಭಾರತೀಯ ಸೇನಾ ಪಡೆಗಳ ನೂತನ ಮುಖ್ಯಸ್ಥರಾಗಿ (CDS) ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಮತ್ತು ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರನ್ನು ಸರ್ಕಾರ ನೇಮಕ ಮಾಡಿದೆ. ಮೇ 30 ರಂದು ಹಾಲಿ ಸಿಡಿಎಸ್ ಅನಿಲ್ ಚೌಹಾಣ್ ಅವರ ಅಧಿಕಾರಾವಧಿ ಮುಕ್ತಾಯವಾಗಲಿದ್ದು, ಆ ಬಳಿಕ ಹೊಸ ನೇಮಕಾತಿ ಜಾರಿಗೆ ಬರಲಿದೆ.
- Ganapathi Sharma
- Updated on: May 9, 2026
- 7:12 am
ಆಪರೇಷನ್ ಸಿಂಧೂರ್ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ರಾಜನಾಥ್ ಸಿಂಗ್
ಇಂದು ಭಾರತ ಆಪರೇಷನ್ ಸಿಂಧೂರ್ ನ ಮೊದಲ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದು, ಇದನ್ನು ಆಧುನಿಕ ಯುದ್ಧದ ಮಾನದಂಡ ಎಂದು ಕರೆದಿದ್ದಾರೆ. ಮೂರು ಸಶಸ್ತ್ರ ಪಡೆಗಳ ನಡುವಿನ ಅದರ ಅಪ್ರತಿಮ ನಿಖರತೆ ಮತ್ತು ಅತ್ಯುತ್ತಮ ಸಮನ್ವಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ, ಭಾರತ ಕಳೆದ ವರ್ಷ ಮೇ 7 ರಂದು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು. ಇದರಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿಗಳು ನಡೆದವು.
- Sushma Chakre
- Updated on: May 7, 2026
- 11:06 pm
ಆಪರೇಷನ್ ಸಿಂಧೂರ್ಗೆ ಒಂದು ವರ್ಷ; ಉಗ್ರರ ವಿರುದ್ಧದ ಕಾರ್ಯಾಚರಣೆ ಪರಿಣಾಮಕಾರಿಯಾಗಿದ್ದು ಹೇಗೆ?
ಜಗತ್ತಿನಲ್ಲಿ ಹಲವು ಯುದ್ಧಗಳು ನಡೆದಿವೆ. ರಷ್ಯಾ-ಉಕ್ರೇನ್ ಯುದ್ಧವು ಐದನೇ ವರ್ಷಕ್ಕೆ ಕಾಲಿಟ್ಟಿದ್ದರೂ ಯಾವುದೇ ಸ್ಪಷ್ಟ ಪರಿಹಾರ ಸಿಕ್ಕಿಲ್ಲ. ಇರಾನ್-ಇಸ್ರೇಲ್-ಅಮೆರಿಕದ ನಡುವೆಯೂ ಯುದ್ಧ ನಡೆದು ಅದರ ಪರಿಣಾಮವನ್ನು ಅನೇಕ ಇತರೆ ದೇಶಗಳೂ ಅನುಭವಿಸಿವೆ. ಆದರೆ, ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಈ ಎಲ್ಲ ಯುದ್ಧಗಳಿಗಿಂತಲೂ ಬಹಳ ಭಿನ್ನವಾಗಿತ್ತು. ಆ ಕಾರ್ಯಾಚರಣೆಯಲ್ಲಿ ಭಾರತ ಒಂದೇ ಒಂದು ಅಮಾಯಕರ ಜೀವವನ್ನೂ ಬಲಿ ಪಡೆಯದೆ ಕೇವಲ ಉಗ್ರರನ್ನು ಮಾತ್ರ ಟಾರ್ಗೆಟ್ ಮಾಡಿ ನಾಶಪಡಿಸಿದ್ದು ವಿಶೇಷ. ಆಪರೇಷನ್ ಸಿಂಧೂರ್ ನಡೆದು 1 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಹಿನ್ನೋಟ ಇಲ್ಲಿದೆ.
- Sushma Chakre
- Updated on: May 6, 2026
- 8:02 pm
ಕರ್ನಾಟಕ ಸಂಪರ್ಕ ಕ್ರಾಂತಿ ರೈಲಿನಲ್ಲಿ ಗಾಂಜಾ ಸೇವನೆ: ಯುವಕರ ದರ್ಬಾರ್ ವಿಡಿಯೋ ವೈರಲ್!
ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ರೈಲಿನಲ್ಲಿ ಯುವಕರಿಬ್ಬರು ರಾಜಾರೋಷವಾಗಿ ಗಾಂಜಾ ಸೇವನೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ರೈಲು ಸಂಖ್ಯೆ 12650ರಲ್ಲಿ ರಾತ್ರಿ ವೇಳೆ ನಡೆದ ಈ ಘಟನೆಯಿಂದ ಸಹಪ್ರಯಾಣಿಕರು ಆತಂಕಗೊಂಡಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ರೈಲ್ವೆ ಪೊಲೀಸರಿಗೆ ಒತ್ತಾಯಿಸಿದ್ದಾರೆ. ವಿಡಿಯೋ ಇಲ್ಲಿದೆ.
- Sanjayya Chikkamath
- Updated on: Apr 10, 2026
- 8:50 am
ಒಮಾನ್ ಗಲ್ಫ್ನತ್ತ ಭಾರತದ 6ಕ್ಕೂ ಹೆಚ್ಚು ಯುದ್ಧನೌಕೆ ರವಾನೆ: ಕೇಂದ್ರದ ದಿಢೀರ್ ನಿರ್ಧಾರಕ್ಕೆ ಇಲ್ಲಿದೆ ಕಾರಣ
ಅಮೆರಿಕ, ಇಸ್ರೇಲ್ ಮತ್ತು ಇರಾನ್ ಯುದ್ಧ ಆರಂಭವಾಗಿ 20 ದಿನಗಳೇ ಆಗಿವೆ. ಯಾವ ದೇಶವೂ ಜಿದ್ದನ್ನು ಬಿಡುತ್ತಿಲ್ಲ. ಇದು ಕರ್ನಾಟಕದ ಹೋಟೆಲ್ ಉದ್ಯಮಕ್ಕೆ ಮರ್ಮಾಘಾತವನ್ನೇ ಕೊಟ್ಟಿದೆ. ಇದೀಗ ಗ್ಯಾಸ್ ಗಂಡಾಂತರ ತಪ್ಪಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಹೊರ್ಮುಜ್ ಮೂಲಕ ಭಾರತದತ್ತ ಬರುತ್ತಿರುವ ಎಲ್ಪಿಜಿ, ತೈಲ ಹಡಗುಗಳ ರಕ್ಷಣೆಗಾಗಿ ಒಮಾನ್ ಗಲ್ಫ್ನತ್ತ ಭಾರತ 6ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ರವಾನಿಸಿರುವ ಬಗ್ಗೆ ವರದಿಯಾಗಿದೆ.
- Ganapathi Sharma
- Updated on: Mar 19, 2026
- 6:44 am
ಭಾರತದ ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಇಂಡೋನೇಷ್ಯಾದಿಂದ 200-350 ಬಿಲಿಯನ್ ಡಾಲರ್ ಡೀಲ್
Indonesia Inks $200-$350 Million Deal To Buy BrahMos Missiles From India Amid Defence Boost: ಭಾರತ ಮತ್ತು ರಷ್ಯಾದ ಜಂಟಿ ನಿರ್ಮಾಣದ ಬ್ರಹ್ಮೋಸ್ ಕ್ಷಿಪಣಿಗಳನ್ನು ಇಂಡೋನೇಷ್ಯಾ ಖರೀದಿಸುತ್ತಿದೆ. 200ರಿಂದ 350 ಮಿಲಿಯನ್ ಡಾಲರ್ ಮೊತ್ತದ ಡೀಲ್ ಅನ್ನು ಇಂಡೋನೇಷ್ಯಾ ಮಾಡಿಕೊಂಡಿದೆ. ಬ್ರಹ್ಮೋಸ್ ಏರೋಸ್ಪೇಸ್ ಸಂಸ್ಥೆ ನಿರ್ಮಿಸಿರುವ ಬ್ರಹ್ಮೋಸ್ ಕ್ಷಿಪಣಿ ಬಹಳ ನಿಖರ ದಾಳಿಗೆ ಹೆಸರುವಾಸಿಯಾಗಿದೆ. ಪಾಕಿಸ್ತಾನ ವಿರುದ್ಧದ ಆಪರೇಷ್ ಸಿಂದೂರ್ನಲ್ಲಿ ಇದು ಮಹತ್ವದ ಪಾತ್ರ ಹೊಂದಿತ್ತು.
- Vijaya Sarathy SN
- Updated on: Mar 9, 2026
- 6:35 pm
ಕೇರಳದ ಕೊಚ್ಚಿಯಲ್ಲಿ ನಿಂತಿದೆ ಇರಾನ್ನ ಐರಿಸ್ ಲವನ್ ಹಡಗು; ಐರಿಸ್ ದೇನಾ ದಾಳಿಗೂ ಮುನ್ನ ಆಗಿದ್ದೇನು?
ಶ್ರೀಲಂಕಾ ಕರಾವಳಿಯಲ್ಲಿ ಇರಾನ್ನ ಯುದ್ಧನೌಕೆ ಐರಿಸ್ ದೇನಾ ಮೇಲೆ ಅಮೆರಿಕ ದಾಳಿ ನಡೆಸುವ ಕೆಲವು ದಿನಗಳ ಮೊದಲು ಇರಾನ್ ಭಾರತವನ್ನು ಸಂಪರ್ಕಿಸಿತ್ತು. ತಾಂತ್ರಿಕ ಸಮಸ್ಯೆಗಳಿಂದಾಗಿ ಕೊಚ್ಚಿಯಲ್ಲಿ ಮತ್ತೊಂದು ನೌಕಾ ಹಡಗು ಐರಿಸ್ ಲವನ್ಗೆ ಅನುಮತಿ ಕೋರಿತ್ತು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಫೆಬ್ರವರಿ 28ರಂದು ಇರಾನ್ನಿಂದ ವಿನಂತಿಯನ್ನು ಸ್ವೀಕರಿಸಲಾಯಿತು. ತಾಂತ್ರಿಕ ಸಮಸ್ಯೆಯಿಂದಾಗಿ ಹಡಗಿಗೆ ತುರ್ತು ಡಾಕಿಂಗ್ ಅಗತ್ಯವಿದೆ ಎಂದು ಇರಾನ್ ಹೇಳಿತ್ತು. ಮಾರ್ಚ್ 1ರಂದು ಡಾಕಿಂಗ್ಗೆ ಭಾರತೀಯ ಅಧಿಕಾರಿಗಳು ಅನುಮತಿ ನೀಡಿದರು. ಆ ಹಡಗು ಈಗಲೂ ಕೇರಳದ ಕೊಚ್ಚಿಯಲ್ಲಿಯೇ ಇದೆ.
- Sushma Chakre
- Updated on: Mar 6, 2026
- 10:59 pm
ಸುಖೋಯ್ ಯುದ್ಧವಿಮಾನ ಅಪಘಾತ; ಆಪರೇಷನ್ ಸಿಂಧೂರ್ನಲ್ಲಿ ಭಾಗಿಯಾಗಿದ್ದ ಪೈಲಟ್ ಸೇರಿ ಇಬ್ಬರು ಸಾವು
ಅಸ್ಸಾಂನಲ್ಲಿ ಭಾರತೀಯ ವಾಯುಪಡೆಯ ಸುಖೋಯ್ (Su-30MKI) ಯುದ್ಧವಿಮಾನ ನಾಪತ್ತೆಯಾಗಿತ್ತು. ರಡಾರ್ನಿಂದ ಕಣ್ಮರೆಯಾಗಿದ್ದ ಆ ವಿಮಾನ ಅಪಘಾತಕ್ಕೀಡಾಗಿದೆ. ಈ ವೇಳೆ ಅದರಲ್ಲಿದ್ದ ಇಬ್ಬರು ವಾಯುಪಡೆಯ ಪೈಲಟ್ಗಳು ಮೃತಪಟ್ಟಿದ್ದಾರೆ. ಅವರಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದ ಪೈಲಟ್ ಕೂಡ ಸೇರಿದ್ದಾರೆ. 10 ದಿನಗಳ ಹಿಂದಷ್ಟೇ ಅವರು ತಮ್ಮ ಕುಟುಂಬವನ್ನು ಭೇಟಿಯಾಗಿದ್ದರು. ಮೃತಪಟ್ಟ ಪೈಲಟ್ಗಳನ್ನು ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಎಂದು ಗುರುತಿಸಲಾಗಿದೆ.
- Sushma Chakre
- Updated on: Mar 6, 2026
- 10:09 pm
ಮೂರೂವರೆ ಲಕ್ಷ ಕೋಟಿ ರೂ ಮೌಲ್ಯದ ಕ್ಷಿಪಣಿ, ಯುದ್ಧ ವಿಮಾನಗಳ ಖರೀದಿಗೆ ಅನುಮೋದನೆ
India to buy fighter jets, missiles and other war items worth over Rs. 3.6 crore: ಮೂರೂವರೆ ಲಕ್ಷ ಕೋಟಿ ರೂಗೂ ಅಧಿಕ ಮೌಲ್ಯದ ವಿವಿಧ ಶಸ್ತ್ರಾಸ್ತ್ರಗಳ ಖರೀದಿಗೆ ಡಿಫೆನ್ಸ್ ಅಕ್ವಿಸಿಶನ್ ಕೌನ್ಸಿಲ್ ಅನುಮೋದನೆ ನೀಡಿದೆ. ಇದರಲ್ಲಿ 288 ಎಸ್-400 ಮಿಸೈಲ್ಗಳು ಸೇರಿವೆ. 114 ರಫೇಲ್ ಜೆಟ್ಗಳ ಖರೀದಿಗೂ ಎಒಎನ್ ನೀಡಲಾಗಿದೆ. ಎಸ್-400 ಕ್ಷಿಪಣಿಗಳನ್ನು ತ್ವರಿತ ಪ್ರಕ್ರಿಯೆಯಲ್ಲಿ ಖರೀದಿಸಲಾಗುವುದು.
- Vijaya Sarathy SN
- Updated on: Feb 13, 2026
- 1:43 pm
ಎಎಂಸಿಎ ಪ್ರಾಜೆಕ್ಟ್ ರೇಸ್ನಿಂದ ಎಚ್ಎಎಲ್ ಔಟ್; ಈ ಯೋಜನೆಯಿಂದ ನಿರ್ಗಮಿಸಲು ಕಾರಣವಾಯಿತಾ ಈ ಸಂಗತಿ?
Reason why HAL out of race for AMCA fighter jet project: ಅತ್ಯಾಧುನಿಕ ಫೈಟರ್ ಜೆಟ್ಗಳನ್ನು ನಿರ್ಮಿಸುವ ಎಎಂಸಿಎ ಪ್ರಾಜೆಕ್ಟ್ನಿಂದ ಎಚ್ಎಎಲ್ ಅನ್ನು ಕೈಬಿಡಲಾಗಿದೆ. ಕಲ್ಯಾಣಿ ಗ್ರೂಪ್ ನೇತೃತ್ವದ ಕನ್ಸಾರ್ಟಿಯಂ, ಎಲ್ ಅಂಡ್ ಟಿ ನೇತೃತ್ವದ ಕನ್ಸಾರ್ಟಿಯಂ ಮತ್ತು ಟಾಟಾ ಗ್ರೂಪ್ ಈಗ ಈ ರೇಸ್ನಲ್ಲಿ ಉಳಿದಿವೆ. ಎಎಂಸಿಎ ಪ್ರಾಜೆಕ್ಟ್ಗೆ ಆಯ್ಕೆಯಾಗುವ ಸಂಸ್ಥೆಯು 2029ಕ್ಕೆ ಮೊದಲ ಪ್ರೋಟೋಟೈಪ್ ಸಿದ್ಧಪಡಿಸಬಹುದು. 2035ರಿಂದ ಪೂರ್ಣ ಜೆಟ್ ಪ್ರೊಡಕ್ಷನ್ ಆರಂಭಿಸಬಹುದು.
- Vijaya Sarathy SN
- Updated on: Feb 5, 2026
- 4:28 pm
ಕಾಶ್ಮೀರದ ಗಡಿಯೊಳಗೆ ಬಂದ ಪಾಕಿಸ್ತಾನಿ ಡ್ರೋನ್ಗಳು; ಭಾರತೀಯ ಸೇನೆಯಿಂದ ಗುಂಡಿನ ದಾಳಿ
ಉತ್ತರ ಕಾಶ್ಮೀರದಲ್ಲಿ ಪಾಕಿಸ್ತಾನಿ ಡ್ರೋನ್ಗಳು ಕಾಣಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ. ಕಾಶ್ಮೀರದ ಕೇರನ್ ಸೆಕ್ಟರ್ನಲ್ಲಿ ಪಾಕಿಸ್ತಾನಿ ಡ್ರೋನ್ಗಳು ಕಂಡುಬಂದವು. ಹೀಗಾಗಿ, ಭಾರತೀಯ ಸೇನೆಯಿಂದ ಗುಂಡಿನ ದಾಳಿ ನಡೆಸಲಾಯಿತು. ಉತ್ತರ ಕಾಶ್ಮೀರದ ಕುಪ್ವಾರಾದ ನಿಯಂತ್ರಣ ರೇಖೆಯ ಉದ್ದಕ್ಕೂ ಸುಮಾರು 15 ಪಾಕಿಸ್ತಾನಿ ಡ್ರೋನ್ಗಳು ಹಾರುತ್ತಿರುವುದು ಕಂಡುಬಂದಿದ್ದು, ಸೇನಾ ಪಡೆಗಳಿಂದ ತಕ್ಷಣದ ಪ್ರತಿಕ್ರಿಯೆ ವ್ಯಕ್ತವಾಗಿದೆ.
- Sushma Chakre
- Updated on: Jan 30, 2026
- 3:54 pm
ಆಪರೇಷನ್ ಸಿಂಧೂರ್ ವೇಳೆ ಭಾರತದ ವಾಯುಪಡೆಗೆ ಸೋತು ಪಾಕಿಸ್ತಾನ ಮಂಡಿಯೂರಿತ್ತು; ಯುರೋಪಿಯನ್ ಮಿಲಿಟರಿ ವಿಶ್ಲೇಷಣೆ
ಪಹಲ್ಗಾಮ್ ದಾಳಿಯ ನಂತರ ಭಾರತ ನಡೆಸಿದ್ದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿ, ಉಗ್ರರ ಸೇನಾ ನೆಲೆಗಳನ್ನು ಧ್ವಂಸಗೊಳಿಸಿತ್ತು. ಆದರೆ, ಈ ದಾಳಿಯಿಂದ ಪಾಕಿಸ್ತಾನಕ್ಕೆ ಆದ ನಷ್ಟವನ್ನು ಪಾಕಿಸ್ತಾನ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಈ ದಾಳಿ ನಡೆದು 8-10 ತಿಂಗಳುಗಳೇ ಕಳೆದಿವೆ. ಇದೀಗ ಪಾಕಿಸ್ತಾನದ ಒಂದೊಂದೇ ನಿಜರೂಪ ಜಗತ್ತಿನೆದುರು ಹೊರಬೀಳತೊಡಗಿದೆ.
- Sushma Chakre
- Updated on: Jan 26, 2026
- 9:11 pm