Daily Devotional: ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ?

Updated on: Mar 04, 2026 | 7:27 AM

ಹಿಂದೂ ಧರ್ಮದಲ್ಲಿ ಸ್ತ್ರೀಯರಿಗೆ ಅಪಾರ ಗೌರವವಿದೆ; "ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ". ಮಹಿಳೆಯರನ್ನು ಮನೆಯ ಮಹಾಲಕ್ಷ್ಮಿ, ಜಗತ್ತಿನ ಶಿಕ್ಷಕಿ ಎಂದೂ ಬಣ್ಣಿಸಲಾಗಿದೆ. ಈ ಕಾಲಮಾನಕ್ಕೆ ತಕ್ಕಂತೆ, ಮಹಿಳೆಯರು ಸನ್ಯಾಸಿನಿಯರಾಗುವುದು ಸಮಂಜಸ. ಆತ್ಮರಕ್ಷಣೆ, ತಾಳ್ಮೆ, ಸಹನೆ ಮತ್ತು ನಿಷ್ಠೆಯಂತಹ ಗುಣಗಳು ಮಹಿಳೆಯರಲ್ಲಿ ಅಂತರ್ಗತವಾಗಿವೆ. ರಾಮಕೃಷ್ಣ ಮಠದಂತಹ ಸಂಸ್ಥೆಗಳಲ್ಲಿ ಅನೇಕ ಮಹಿಳೆಯರು ಧರ್ಮಜಾಗೃತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದ್ದರಿಂದ, ಮಹಿಳೆಯರು ಸನ್ಯಾಸಿನಿಯರಾಗುವುದು ಸಮಕಾಲೀನ ಸನ್ನಿವೇಶದಲ್ಲಿ ತಪ್ಪಲ್ಲ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

ಬೆಂಗಳೂರು, ಮಾರ್ಚ್​​ 04: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಸನ್ಯಾಸಿಗಳು ಮತ್ತು ಸನ್ಯಾಸಿನಿಯರನ್ನು ಗೌರವಯುತವಾಗಿ ದೇವತಾ ಸ್ವರೂಪಿಗಳೆಂದು ಕಾಣಲಾಗುತ್ತದೆ. ಸನ್ಯಾಸ ಎಂದರೆ ತಲೆ ಬೋಳಿಸಿಕೊಂಡು, ಕಾಷಾಯ ವಸ್ತ್ರ ಧರಿಸಿ, ರುದ್ರಾಕ್ಷಿ ಮಾಲೆಗಳನ್ನು ಧರಿಸಿ, ಬ್ರಾಹ್ಮೀ ಮುಹೂರ್ತದಲ್ಲಿ ಜಪತಪಗಳನ್ನು ಮಾಡಿ, ಹೋಮಹವನಗಳನ್ನು ನಿರ್ವಹಿಸಿ, ಭಿಕ್ಷೆಯಿಂದ ಪಡೆದ ಆಹಾರವನ್ನು ಸ್ವೀಕರಿಸುವುದು. ಸನ್ಯಾಸಿನಿಯರ ಪ್ರಥಮ ಕರ್ತವ್ಯ ಧರ್ಮಜಾಗೃತಿ, ಸಂಸ್ಕೃತಿಯ ಉದ್ಧಾರ ಮತ್ತು ಲೋಕಕ್ಷೇಮವನ್ನು ಬಯಸುವುದು.

ಹಿಂದೂ ಧರ್ಮದಲ್ಲಿ ಸ್ತ್ರೀಯರಿಗೆ ಅಪಾರ ಗೌರವವಿದೆ; “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ”. ಮಹಿಳೆಯರನ್ನು ಮನೆಯ ಮಹಾಲಕ್ಷ್ಮಿ, ಜಗತ್ತಿನ ಶಿಕ್ಷಕಿ ಎಂದೂ ಬಣ್ಣಿಸಲಾಗಿದೆ. ಈ ಕಾಲಮಾನಕ್ಕೆ ತಕ್ಕಂತೆ, ಮಹಿಳೆಯರು ಸನ್ಯಾಸಿನಿಯರಾಗುವುದು ಸಮಂಜಸ. ಆತ್ಮರಕ್ಷಣೆ, ತಾಳ್ಮೆ, ಸಹನೆ ಮತ್ತು ನಿಷ್ಠೆಯಂತಹ ಗುಣಗಳು ಮಹಿಳೆಯರಲ್ಲಿ ಅಂತರ್ಗತವಾಗಿವೆ. ರಾಮಕೃಷ್ಣ ಮಠದಂತಹ ಸಂಸ್ಥೆಗಳಲ್ಲಿ ಅನೇಕ ಮಹಿಳೆಯರು ಧರ್ಮಜಾಗೃತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದ್ದರಿಂದ, ಮಹಿಳೆಯರು ಸನ್ಯಾಸಿನಿಯರಾಗುವುದು ಸಮಕಾಲೀನ ಸನ್ನಿವೇಶದಲ್ಲಿ ತಪ್ಪಲ್ಲ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

Follow Us
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More