ಬೈಕ್ ಸವಾರನ ಎಡವಟ್ಟಿನಿಂದ ಪಲ್ಟಿ ಹೊಡೆದ ಬಸ್, 37 ಜನರಿಗೆ ಗಾಯ

Updated on: Mar 04, 2025 | 10:44 PM

ಗಾಯಾಳುಗಳನ್ನು ಚಿಕಿತ್ಸೆಗಾಗಿ ಲಾತೂರ್‌ನ ವಿಲಾಸ್‌ರಾವ್ ದೇಶಮುಖ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು. ಅಹ್ಮದ್‌ಪುರ ಡಿಪೋ ನಿರ್ವಹಿಸುತ್ತಿದ್ದ ಬಸ್, ಚಾಕೂರ್ ತಾಲ್ಲೂಕಿನ ನಂದಗಾಂವ್ ಪತಿ ಬಳಿ ಬೈಕ್ ಬಸ್ ಕೆಳಗೆ ಸಿಲುಕುವುದನ್ನು ತಪ್ಪಿಸಲು ಪ್ರಯತ್ನಿಸುವಾಗ ಬಸ್ ಚಾಲಕನ ನಿಯಂತ್ರಣ ತಪ್ಪಿತು.

ಲಾತೂರ್, (ಮಾರ್ಚ್ 4): ಸೋಮವಾರ ಮಧ್ಯಾಹ್ನ ಮಹಾರಾಷ್ಟ್ರದ ಲಾತೂರ್-ನಾಂದೇಡ್ ಹೆದ್ದಾರಿಯ ನಂದಗಾಂವ್ ಪತಿ ಬಳಿ ಬೈಕ್ ಅಪಘಾತವನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾಗ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ (MSRTC) ಬಸ್ ಪಲ್ಟಿಯಾಗಿದೆ. ನಿನ್ನೆ ಮಧ್ಯಾಹ್ನ ಈ ಅಪಘಾತ ಸಂಭವಿಸಿದ್ದು, 37 ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us