ನಟಿ ಮಾಲಾಶ್ರೀ ಅವರು ಕನ್ನಡದಲ್ಲಿ ಹಲವು ಮಾಸ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರ ಜತೆಗೆ ಪೊಲೀಸ್ ಅಧಿಕಾರಿ ಪಾತ್ರದಲ್ಲೂ ಅವರು ಮಿಂಚಿದ್ದರು. ಅವರು ಅನೇಕರಿಗೆ ಸ್ಫೂರ್ತಿ. ಈಗ ‘ಉಗ್ರಾವತಾರ’ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಮಾಲಾಶ್ರೀ ಅವರೇ ಸ್ಫೂರ್ತಿ. ಈ ಬಗ್ಗೆ ಟಿವಿ9 ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಏನೆಲ್ಲ ಅಂದ್ರು ಅನ್ನುವ ಬಗ್ಗೆ ಇಲ್ಲಿದೆ ಮಾಹಿತಿ. ಈ ಚಿತ್ರಕ್ಕೆ ಗುರುಮೂರ್ತಿ ನಿರ್ದೇಶನವಿದೆ. ತಾರಾಗಣದಲ್ಲಿ ಸುಮನ್, ಪವಿತ್ರಾ ಲೋಕೇಶ್, ಶೋಭ, ನಟರಾಜ್ ಮುಂತಾದವರು ಇದ್ದಾರೆ. ನಂದಕುಮಾರ್ ಛಾಯಾಗ್ರಹಣ, ಕಿನ್ನಾಳ್ರಾಜ್ ಸಾಹಿತ್ಯ ಮತ್ತು ಸಂಭಾಷಣೆ, ವಿನೋದ್-ಮಾಸ್ಮಾದ-ಅಶೋಕ್ ಸಾಹಸ, ವೆಂಕಿ.ಯುಡಿವಿ ಸಂಕಲನ ಚಿತ್ರಕ್ಕಿದೆ. ಸಿನಿಮಾದ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ಇನ್ನೆರಡು ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡೋ ಆಲೋಚನೆ ಚಿತ್ರತಂಡದ್ದು.
ಇದನ್ನೂ ಓದಿ: ಪ್ರಿಯಾಂಕಾ ಉಪೇಂದ್ರ ‘ಉಗ್ರಾವತಾರ’ಕ್ಕೆ ಗಿರಿಜಾ ಸಿದ್ದಿ ಸಾತ್; ಬರುತ್ತಿದೆ ಮತ್ತೊಂದು ಕೊಂಕಣಿ ಸಾಂಗ್
‘‘ಉಗ್ರಾವತಾರ’ದಲ್ಲಿ ಸಿದ್ದಿ ಹಾಡುಗಾರರಿಂದ ವಿಶೇಷ ಹಾಡು; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
Published On - 3:00 pm, Tue, 18 January 22