ಕೆಲಸ ಮಾಡವ ಜಾಗದಲ್ಲಿ ಅನ್ಯಾಯವಾಗ್ತಿದೆ ಎಂದು ಮೊಬೈಟ್​​ ಟವರ್​​ ಏರಿದ ವ್ಯಕ್ತಿ, ಕೆಳಗಿಳಿಸಲು ಹರಸಾಹಸ

Edited By: ಆಯೇಷಾ ಬಾನು

Updated on: Jan 18, 2024 | 12:53 PM

ಹಾಸನದ ಚಾಮುಂಡೇಶ್ವರಿ ಶುಗರ್​​​ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ ಸಿದ್ದೇಗೌಡ(45) ಕೆಲಸ ಮಾಡವ ಜಾಗದಲ್ಲಿ ತನಗೆ ಅನ್ಯಾಯವಾಗ್ತಿದೆ ಎಂದು ಆರೋಪಿಸಿ ಮೊಬೈಟ್​​ ಟವರ್​​ ಏರಿದ್ದಾನೆ. ನನಗೆ ನ್ಯಾಯ ಕೊಡಿಸಿ ಅಲ್ಲಿಯ ವರೆಗೆ ಮೊಬೈಲ್ ಟವರ್​ನಿಂದ ಇಳಿಯಲ್ಲ ಎಂದು ಪಟ್ಟುಹಿಡಿದಿದ್ದಾನೆ.

ಮೈಸೂರು, ಜ.18: ಕೆಲಸ ಮಾಡವ ಜಾಗದಲ್ಲಿ ಅನ್ಯಾಯವಾಗ್ತಿದೆ ಎಂದು ವ್ಯಕ್ತಿಯೋರ್ವ ಟವರ್​​ ಏರಿದ ಘಟನೆ ಮೈಸೂರು ಜಿಲ್ಲೆಯ ವರುಣದಲ್ಲಿ ನಡೆದಿದೆ. ಹಾಸನದ ಚಾಮುಂಡೇಶ್ವರಿ ಶುಗರ್​​​ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ ಸಿದ್ದೇಗೌಡ(45) ಕೆಲಸ ಮಾಡವ ಜಾಗದಲ್ಲಿ ತನಗೆ ಅನ್ಯಾಯವಾಗ್ತಿದೆ ಎಂದು ಆರೋಪಿಸಿ ಮೊಬೈಟ್​​ ಟವರ್​​ ಏರಿದ್ದಾನೆ. ನನಗೆ ನ್ಯಾಯ ಕೊಡಿಸಿ ಅಲ್ಲಿಯ ವರೆಗೆ ಮೊಬೈಲ್ ಟವರ್​ನಿಂದ ಇಳಿಯಲ್ಲ ಎಂದು ಪಟ್ಟುಹಿಡಿದಿದ್ದಾನೆ. ಸಧ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿ ಸಿದ್ದೇಗೌಡನನ್ನು ಕೆಳಗಿಳಿಸಲು ಹರಸಾಹಸಪಡುತ್ತಿದ್ದಾರೆ.

ವಿದ್ಯುತ್ ತಂತಿ ತಗುಲಿ ವ್ಯಕ್ತಿ ಗಂಭೀರ ಗಾಯ

ಮೈಸೂರಿನಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಘವೇಂದ್ರ ನಗರದಲ್ಲಿ ಕಟ್ಟಡವೊಂದಕ್ಕೆ ಬಣ್ಣ ಬಳಿಯುತ್ತಿದ್ದಾಗ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಸಿದ್ದರಾಜು ಹಾಗೂ ಮನು ಎಂಬುವರು ಗಾಯಗೊಂಡಿದ್ದಾರೆ. ವಿದ್ಯುತ್ ಸ್ಪರ್ಶದಿಂದ ಸಿದ್ದರಾಜು ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಜರ್​ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: Jan 18, 2024 12:51 PM
Follow Us
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More