AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ

ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ

ಸುಷ್ಮಾ ಚಕ್ರೆ
|

Updated on: Jun 10, 2025 | 10:04 PM

ಉತ್ತರ ಪ್ರದೇಶದ ಜಾನ್‌ಪುರದಲ್ಲಿ ಹಾರ ಹಾಕಿ ಸ್ವಾಗತ ಭಾಷಣ ಮಾಡಿದ ನಂತರ ಮಹೇಂದ್ರ ರಾಜ್‌ಭರ್ ಅವರಿಗೆ ವ್ಯಕ್ತಿಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ, ಓಂ ಪ್ರಕಾಶ್ ರಾಜ್‌ಭರ್ ಅವರ ಒಕ್ಕೂಟದಡಿಯಲ್ಲಿ ಬಿಜೆಪಿ ಮಿತ್ರ ಪಕ್ಷವಾಗಿ ರಾಜಕಾರಣಿ ಮುಖ್ತಾರ್ ಅನ್ಸಾರಿ ವಿರುದ್ಧ ಸ್ಪರ್ಧಿಸಿದ್ದರು. ಆದರೆ ಸುಮಾರು 6,000 ಮತಗಳಿಂದ ಸೋತರು.

ನೊಯ್ಡಾ, ಜೂನ್ 10: ಜಾನ್‌ಪುರದ ಆಶಾ ಪೂರ್ವಾ ಗ್ರಾಮದಲ್ಲಿ ಸುಹೇಲ್‌ದೇವ್ ಜಯಂತಿ ಆಚರಣೆಯ ಸಂದರ್ಭದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಸುಹೇಲ್‌ದೇವ್ ಸ್ವಾಭಿಮಾನ್ ಪಕ್ಷದ ಸದಸ್ಯ ಬ್ರಿಜೇಶ್ ರಾಜ್‌ಭರ್ ಅವರು ಪಕ್ಷದ ಮುಖ್ಯಸ್ಥ ಮಹೇಂದ್ರ ರಾಜ್‌ಭರ್ ಅವರಿಗೆ ಸ್ವಾಗತ ಕೋರಿ, ಕೊರಳಿಗೆ ಹಾರ ಹಾಕಿ ಕಪಾಳಮೋಕ್ಷ ಮಾಡಿದರು. ಈ ವಿಡಿಯೋದಲ್ಲಿರುವ ಸಂಪೂರ್ಣ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ