Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಸಿಎಂ ಸಿದ್ದರಾಮಯ್ಯ ನಿವಾಸದ ಮೇಲೆ ಕಲ್ಲೆಸೆದ ಆರೋಪಿ ಸೆರೆ, ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ ಜಡ್ಜ್

ಮೈಸೂರು: ಸಿಎಂ ಸಿದ್ದರಾಮಯ್ಯ ನಿವಾಸದ ಮೇಲೆ ಕಲ್ಲೆಸೆದ ಆರೋಪಿ ಸೆರೆ, ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ ಜಡ್ಜ್

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 11, 2023 | 10:46 AM

ಸತ್ಯಮುರ್ತಿಯನ್ನು ಬಂಧಿಸಲು ಹೋದಾಗ ತೀವ್ರ ಪ್ರತಿರೋಧ ಒಡ್ಡಿದ್ದಾನೆ ಮತ್ತು ಪೊಲೀಸ್ ಇನ್ಸ್ ಪೆಕ್ಟರ್ ಮಹೇಂದ್ರ ಎನ್ನುವವರ ಮೇಲೆ ಹಲ್ಲೆಯನ್ನೂ ನಡೆಸಿದ್ದಾನೆ. ಸತ್ಯಮೂರ್ತಿಯ ಹಿನ್ನೆಲೆ ಬಗ್ಗೆ ಗೊತ್ತಾಗಿಲ್ಲ. ಅವನೇನು ಕೆಲಸ ಮಾಡಿಕೊಂಡಿದ್ದಾನೆ, ಕಲ್ಲೆಸೆಯಲು ಕಾರಣವೇನು ಮೊದಲಾದ ಸಂಗತಿಗಳನ್ನು ಪೊಲಿಸರು ತಮ್ಮ ವಿಚಾರಣೆಯಲ್ಲಿ ಕಂಡುಕೊಳ್ಳಲಿದ್ದಾ

ಮೈಸೂರು: ಮಂಗಳವಾರದಂದು ದುಷ್ಕರ್ಮಿಯೊಬ್ಬ ನಗರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಿವಾಸದ ಮೇಲೆ ಕಲ್ಲೆಸೆದು ಕಿಟಕಿ ಗಾಜನ್ನು ಪುಡಿಮಾಡಿದ ಪ್ರಕರಣವನ್ನು ವರದಿ ಮಾಡಿದ್ದೇವೆ. ಮೈಸೂರಿನ ಸರಸ್ವತೀಪುರಂ ಠಾಣೆಯ ಪೊಲೀಸರು ಇವತ್ತು ಆರೋಪಿಯನ್ನು ಬಂಧಿಸಿ ಎಫ್ ಐ ಆರ್ (FIR) ದಾಖಲಿಸಿದ್ದಲ್ಲದೆ ನಗರದ 3 ನೇ ಜೆಎಂಎಫ್ಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ. ಆರೋಪಿಯ ಹೆಸರು ಸತ್ಯಮೂರ್ತಿಯಾಗಿದ್ದು (Satyamurthy) ಅವನು ಸ್ಥಳೀಯನೇ ಆಗಿದ್ದಾನೆ. ಕೋರ್ಟ್ ಸತ್ಯಮೂರ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪೊಲೀಸರು ಸತ್ಯಮುರ್ತಿಯನ್ನು ಬಂಧಿಸಲು ಹೋದಾಗ ತೀವ್ರ ಪ್ರತಿರೋಧ ಒಡ್ಡಿದ್ದಾನೆ ಮತ್ತು ಪೊಲೀಸ್ ಇನ್ಸ್ ಪೆಕ್ಟರ್ ಮಹೇಂದ್ರ ಎನ್ನುವವರ ಮೇಲೆ ಹಲ್ಲೆಯನ್ನೂ ನಡೆಸಿದ್ದಾನೆ. ಸತ್ಯಮೂರ್ತಿಯ ಹಿನ್ನೆಲೆ ಬಗ್ಗೆ ಗೊತ್ತಾಗಿಲ್ಲ. ಅವನೇನು ಕೆಲಸ ಮಾಡಿಕೊಂಡಿದ್ದಾನೆ, ಕಲ್ಲೆಸೆಯಲು ಕಾರಣವೇನು ಮೊದಲಾದ ಸಂಗತಿಗಳನ್ನು ಪೊಲಿಸರು ತಮ್ಮ ವಿಚಾರಣೆಯಲ್ಲಿ ಕಂಡುಕೊಳ್ಳಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ