Manasi Sudhir: ‘ಕಾಂತಾರ’ ಸಿನಿಮಾ ಬಗ್ಗೆ ಚಂದದ ಕವನ; ನಗುನಗುತ್ತಾ ಓದಿದ ಮಾನಸಿ ಸುಧೀರ್​

| Updated By: ಮದನ್​ ಕುಮಾರ್​

Updated on: Nov 10, 2022 | 8:02 AM

Manasi Sudhir | Sapthami Gowda: ಉಡುಪಿಯ ಲೇಖಕಿ ಶೋಭಾ ಹರಿಪ್ರಸಾದ್​ ಅವರು ಬರೆದ ಒಂದು ಕವನವನ್ನು ಮಾನಸಿ ಸುಧೀರ್​ ಓದಿದ್ದಾರೆ. ಕವನ ವಾಚನ ಕೇಳಿ ಖುಷಿಯಿಂದ ತಲೆದೂಗಿದ್ದಾರೆ ನಟಿ ಸಪ್ತಮಿ ಗೌಡ.

ನಟಿ, ಭರತನಾಟ್ಯ ಕಲಾವಿದೆ ಮಾನಸಿ ಸುಧೀರ್ (Manasi Sudhir)​ ಅವರಿಗೆ ‘ಕಾಂತಾರ’ (Kantara) ಸಿನಿಮಾದಿಂದ ಸಖತ್​ ​ಜನಪ್ರಿಯತೆ ಸಿಕ್ಕಿದೆ. ಈ ಚಿತ್ರದಲ್ಲಿ ಕಥಾನಾಯಕನ ತಾಯಿ ಪಾತ್ರ ಮಾಡಿರುವ ಅವರ ನಟನೆಗೆ ಜನರು ಚಪ್ಪಾಳೆ ತಟ್ಟಿದ್ದಾರೆ. ಕಮಲ ಎಂಬ ಆ ಪಾತ್ರ ಸಖತ್​ ಹೈಲೈಟ್​ ಆಗಿದೆ. ಈ ಸಿನಿಮಾ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿ ಸೈ ಎನಿಸಿಕೊಂಡಿದೆ. ಅನೇಕರು ಈ ಸಿನಿಮಾ ಬಗ್ಗೆ ಕವನ ಬರೆದಿದ್ದಾರೆ. ಉಡುಪಿಯ ಲೇಖಕಿ ಶೋಭಾ ಹರಿಪ್ರಸಾದ್​ ಅವರು ಬರೆದ ಒಂದು ಕವನವನ್ನು ಟಿವಿ9 ಸ್ಟುಡಿಯೋದಲ್ಲಿ ಕುಳಿತು ಓದಿದ್ದಾರೆ ಮಾನಸಿ ಸುಧೀರ್​. ಕವನ ವಾಚನ ಕೇಳಿ ಖುಷಿಯಿಂದ ತಲೆದೂಗಿದ್ದಾರೆ ನಟಿ ಸಪ್ತಮಿ ಗೌಡ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:02 am, Thu, 10 November 22

Follow us on