ಎಂಇಎಸ್​, ಶಿವಸೇನೆ ಕಾರ್ಯಕರ್ತರಿಂದ ಕರಾಳ ದಿನ: ಬೆಳಗಾವಿ ಗಡಿಯಲ್ಲಿ ಕಾರ್ಯಕರ್ತರಿಂದ ಹೈಡ್ರಾಮಾ
ಶಿವಸೇನೆ ಕಾರ್ಯಕರ್ತರ ಪ್ರತಿಭಟನೆ

ಎಂಇಎಸ್​, ಶಿವಸೇನೆ ಕಾರ್ಯಕರ್ತರಿಂದ ಕರಾಳ ದಿನ: ಬೆಳಗಾವಿ ಗಡಿಯಲ್ಲಿ ಕಾರ್ಯಕರ್ತರಿಂದ ಹೈಡ್ರಾಮಾ

Edited By: ವಿವೇಕ ಬಿರಾದಾರ

Updated on: Oct 31, 2022 | 5:44 PM

ಗಡಿನಾಡು ಬೆಳಗಾವಿಯಲ್ಲಿ ನವೆಂಬರ್ 1 ಕನ್ನಡ ರಾಜ್ಯೋತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಆದರೆ ಬೆಳಗಾವಿ ಎಂಇಎಸ್​ ಮತ್ತು ಶಿವಸೇನೆ ಠಾಕ್ರೆ ಬಣದ ಕಾರ್ಯಕರ್ತರು ಕರಾಳ ದಿನಾವಾಗಿ ಆಚರಿಸಲು ನಿರ್ಧರಿಸಿವೆ.

ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ನವೆಂಬರ್ 1 ಕನ್ನಡ ರಾಜ್ಯೋತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆದರೆ ಬೆಳಗಾವಿ ಎಂಇಎಸ್​ ಮತ್ತು ಶಿವಸೇನೆ ಠಾಕ್ರೆ ಬಣದ ಕಾರ್ಯಕರ್ತರು ಕರಾಳ ದಿನಾವಾಗಿ ಆಚರಿಸಲು ನಿರ್ಧರಿಸಿದೆ. ಈ ಸಂಬಂಧ ಶಿವಸೇನೆ ಠಾಕ್ರೆ ಬಣ ಬೆಳಗಾವಿಯನ್ನು ಪ್ರವೇಶಿಸದಂತೆ ಪೊಲೀಸರು ಗಡಿಯಲ್ಲಿ ಬಿಗಿ ಬಂದೋಬಸ್ತ್​ ಮಾಡಿದ್ದಾರೆ. ಆದರೆ ಶಿವಸೇನೆ ಕಾರ್ಯಕರ್ತರು ಬೆಳಗಾವಿ ಗಡಿಯಲ್ಲಿ ಪೊಲೀಸರೊಂದಿಗೆ ಕ್ಯಾತೆ ತೆಗೆದಿದ್ದಾರೆ. ನಿಪ್ಪಾಣಿ ತಾಲೂಕಿನ ಕೊಗನೋಳ್ಳಿ ಚೆಕ್ ಪೋಸ್ಟ್ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ಬೆಳಗಾವಿಗೆ ಪ್ರವೇಶಿಸದಂತೆ ತಡೆದಿದ್ದಾರೆ.

ಆದೆರೆ ಶಿವಸೇನೆ ಕಾರ್ಯಕರ್ತರು ಬೆಳಗಾವಿಯೊಳಗೆ ಪ್ರವೇಶ ನೀಡುವಂತೆ ಹೈಡ್ರಾಮಾ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೇಲೆಯೇ ಕುಳಿತು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಮತ್ತು ಶಿವಸೇನೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ ನೂಕಾಟ‌ ನಡೆದಿದೆ. ಪೊಲೀಸರು ನಿರ್ಬಂಧ ಹೆರಿದ್ದಕ್ಕೆ ರಸ್ತೆ ಪಕ್ಕದ ನದಿಗೆ ಇಳಿದು ಪ್ರತಿಭಟನೆ ಮಾಡಿದ್ದಾರೆ.

Shivasene Highdrama: ರಸ್ತೆ ಪಕ್ಕದ ನದಿಗೆ ಇಳಿದು ಶಿವಸೇನೆ ಹೈಡ್ರಾಮಾ | Tv9 Kannada

Published on: Oct 31, 2022 05:44 PM
Follow Us