ಕ್ಷಮೆ ಕೇಳಿದರೂ ತಪ್ಪಲಿಲ್ಲ ಕಠಿಣ ಶಿಕ್ಷೆ; ಬಿಗ್ ಬಾಸ್​ ಮನೆಯಲ್ಲಿ ಇವರು ಮಾಡಿದ ತಪ್ಪೇನು?

|

Updated on: Oct 23, 2023 | 5:44 PM

ದೊಡ್ಮನೆಯೊಳಗೆ ಮೈಕೆಲ್​ ಅಜಯ್​ ಮತ್ತು ವಿನಯ್​ ಗೌಡ ಅವರು ತಪ್ಪು ಮಾಡಿದ್ದಾರೆ. ಮಾಡಿದ ತಪ್ಪಿಗೆ ಅವರು ಕ್ಷಮೆ ಕೂಡ ಕೇಳಿದ್ದಾರೆ. ಅದರೂ ಬಿಗ್​ ಬಾಸ್​ ಕರುಣೆ ತೋರಿಸಿಲ್ಲ. ಇವರಿಬ್ಬರು ಮಾಡಿದ ತಪ್ಪಿಗೆ ಇಡೀ ಮನೆಮಂದಿಗೆ ಕಠಿಣ ಶಿಕ್ಷೆ ನೀಡಲಾಗಿದೆ. ಇದು ಕೆಲವರ ಅಸಮಾಧಾನಕ್ಕೆ ಕಾರಣ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ರಿಯಾಲಿಟಿ ಶೋನಲ್ಲಿ ಹಲವು ಟ್ವಿಸ್ಟ್​ಗಳು ಸಿಗುತ್ತಿವೆ. ಈಗಾಗಲೇ ಸ್ನೇಕ್​ ಶ್ಯಾಮ್​, ಗೌರೀಶ್ ಅಕ್ಕಿ, ವರ್ತೂರು ಸಂತೋಷ್​ ಅವರು ದೊಡ್ಮನೆಯಿಂದ ಹೊರಬಿದ್ದಿದ್ದಾರೆ. ಬಿಗ್​ ಬಾಸ್​ ಮನೆಯೊಳಗಿನ ನಿಯಮಗಳು ತುಂಬ ಡಿಫರೆಂಟ್​ ಆಗಿರುತ್ತವೆ. ಆ ನಿಯಮ ಮುರಿದರೆ ಸಿಗುವ ಶಿಕ್ಷೆ ಕೂಡ ಅಷ್ಟೇ ಡಿಫರೆಂಟ್​ ಆಗಿರುತ್ತದೆ. ಈಗ ದೊಡ್ಮನೆಯೊಳಗೆ ಮೈಕೆಲ್​ ಅಜಯ್​ (Michael Ajay) ಮತ್ತು ವಿನಯ್​ ಗೌಡ ಅವರು ತಪ್ಪು ಮಾಡಿದ್ದಾರೆ. ಏಕಕಾಲಕ್ಕೆ ಸ್ಮೋಕಿಂಗ್​ ರೂಮ್​ ಅನ್ನು ಒಬ್ಬರಿಗಿಂತ ಹೆಚ್ಚು ಜನರು ಬಳಸಬಾರದು ಎಂಬ ನಿಯಮ ಇದೆ. ಅದನ್ನು ಮೈಕೆಲ್​ ಮತ್ತು ವಿನಯ್​ (Vinay Gowda) ಉಲ್ಲಂಘಿಸಿದ್ದಾರೆ. ಮಾಡಿದ ತಪ್ಪಿಗೆ ಅವರು ಕ್ಷಮೆ ಕೂಡ ಕೇಳಿದ್ದಾರೆ. ಅದರೂ ಬಿಗ್​ ಬಾಸ್​ ಕರುಣೆ ತೋರಿಸಿಲ್ಲ. ಇವರಿಬ್ಬರು ಮಾಡಿದ ತಪ್ಪಿಗೆ ಇಡೀ ಮನೆಮಂದಿಗೆ ಶಿಕ್ಷೆ ನೀಡಲಾಗಿದೆ. ಕಲರ್ಸ್​ ಕನ್ನಡದಲ್ಲಿ ಈ ಎಪಿಸೋಡ್​ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಕಾಣುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:18 pm, Mon, 23 October 23

Follow us on