AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣೇಶನನ್ನು ಪ್ರತಿಷ್ಠಾಪಿಸಿದ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!

ಗಣೇಶನನ್ನು ಪ್ರತಿಷ್ಠಾಪಿಸಿದ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Sep 23, 2023 | 7:48 PM

Share

ನಂತರದ ಕೆಲ ಕ್ಷಣಗಳಲ್ಲಿ ಯಂತ್ರೀಕೃತ ಮಾದರಿ ಜೀವ ತುಂಬಿಕೊಂಡು ಟೇಕಾಫ್ ಪ್ರಕ್ರಿಯೆಯನ್ನು ಬಿಂಬಿಸುವ ಹಾಗೆ ತನ್ನ ಹಿಂಭಾಗದಿಂದ ಹೊಗೆಯುಗುಳುತ್ತಾ ಮೇಲಕ್ಕೆ ಚಲಿಸಲಾರಂಭಿಸುತ್ತದೆ- ನಿಸ್ಸಂದೇಹವಾಗಿ ನೋಡುಗರನ್ನು ಮಂತ್ರಮುಗ್ಧಗೊಳಿಸುವ ದೃಶ್ಯ ಇದು!

ಬೆಂಗಳೂರು: ಚಂದ್ರಯಾನ-3 (Chandrayaan-3) ವಿಕ್ರಮ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿಸಿದ ಇಸ್ರೋ ವಿಜ್ಞಾನಿಗಳ (ISRO scientists) ಯಶಸ್ಸನ್ನು ಕೊಂಡಾಡುವ ಹಾಗೂ ಭಕ್ತಿ ಮತ್ತು ವಿಜ್ಞಾನದ ಅಪೂರ್ವ ಸಮ್ಮಿಲನವನ್ನು (fusion) ಮೈನವಿರೇಳಿಸುವಂತೆ ತೋರಿಸುವ ಒಂದು ವಿನಾಯಕ ಪ್ರತಿಷ್ಠಾಪನೆಯ ಪೆಂಡಾಲ್ ನೆಟ್ಟಿಗರನ್ನು ಮೂಕವಿಸ್ಮಿತರನ್ನಾಗಿಸುತ್ತಿದೆ. ಈಗಾಗಲೇ ವೈರಲ್ ಆಗಿರುವ ಈ ವಿಡಿಯೋನಲ್ಲಿ ಚಂದ್ರಯಾನ-3 ಯಶೋಗಾಥೆಯನ್ನು ವಿವರಿಸುವ ಮಾದರಿಯನ್ನು ಅದ್ಭುತ ಮತ್ತು ನಂಬಲಸದಳ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ನೋಡುವವರ ಮನಸೂರೆಗೊಳ್ಳುವ ಈ ಕ್ಲಿಪ್ ನಲ್ಲಿ ಚಂದ್ರಯಾನ-3 ಮಾದರಿಯು ಮೊದಲಿಗೆ ನೇರವಾಗಿ ನಿಂತಿರುವ ಮತ್ತು ಚಂದ್ರಯಾನಕ್ಕೆ ತಯಾರಾಗಿರುವ ಸ್ಥಿತಿಯಲ್ಲಿ ಕಾಣಿಸುತ್ತದೆ. ನಂತರದ ಕೆಲ ಕ್ಷಣಗಳಲ್ಲಿ ಯಂತ್ರೀಕೃತ ಮಾದರಿ ಜೀವ ತುಂಬಿಕೊಂಡು ಟೇಕಾಫ್ ಪ್ರಕ್ರಿಯೆಯನ್ನು ಬಿಂಬಿಸುವ ಹಾಗೆ ತನ್ನ ಹಿಂಭಾಗದಿಂದ ಹೊಗೆಯುಗುಳುತ್ತಾ ಮೇಲಕ್ಕೆ ಚಲಿಸಲಾರಂಭಿಸುತ್ತದೆ- ನಿಸ್ಸಂದೇಹವಾಗಿ ನೋಡುಗರನ್ನು ಮಂತ್ರಮುಗ್ಧಗೊಳಿಸುವ ದೃಶ್ಯ ಇದು!

ಅದರ ಚಮತ್ಕಾರಿಕ ಚಲನೆ ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ ಮಿಶನ್ ನ ಬಹು ಮಹತ್ವಪೂರ್ಣ ಮತ್ತು ಅವಿಭಾಜ್ಯ ಭಾಗವಾಗಿರುವ ವಿಕ್ರಮ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ನ ಚಿಕ್ಕ ಚಿಕ್ಕ ಪ್ರತಿರೂಪಗಳು ಚಂದ್ರನ ಕಕ್ಷೆ ತಲುಪಿದ ಬಳಿಕ ಮಾಡಿದ ಸಾಹಸಗಳನ್ನು ಕಣ್ಮನ ಸೆಳೆಯುವಂತೆ ಪ್ರದರ್ಶಿಸುತ್ತದೆ. ಚಂದ್ರಯಾನ-3 ಮಿಶನ್ ನ ಈ ಸಂಕೀರ್ಣ ಮಾದರಿಯು ಇಸ್ರೋ ವಿಜ್ಞಾನಿಗಳ ಬುದ್ಧಮತ್ತೆ ಮತ್ತು ಪರಿಶ್ರಮಕ್ಕೆ ಸಲ್ಲುವ ಸೂಕ್ತ ಗೌರವವಾಗಿದೆ.

ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿರುವ ಪೆಂಡಾಲ್ ನಲ್ಲಿ ಚಂದ್ರಯಾನ-3 ಮಿಶನ್ ವಿವರಿಸುವ ಮಾದರಿಯು ಪ್ರಮುಖ ಆಕರ್ಷಣೆಯಾಗಿದೆ ಮತ್ತು ಭಾರತದ ವೈಜ್ಞಾನಿಕ ಸಾಧನೆ ಹಾಗೂ ಬಾಹ್ಯಾಕಾಶ ಸಂಶೋಧನೆಗಳ ಸಂಕೇತವಾಗಿದೆ. ಗಣೇಶನ ದರ್ಶನಕ್ಕೆ ಬರುವ ಜನ ಈ ಪುಟ್ಟ ಮಾದರಿಯನ್ನು ಕಂಡು ಆಶ್ಚರ್ಯಚಕಿರಾಗುತ್ತಿದ್ದಾರೆ ಅಂತ ಹೇಳಿದರೆ ಅದೊಂದು ಅಂಡರ್ ಸ್ಟೇಟ್ಮೆಂಟ್ ಅನಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.