ಕೆಎನ್ ರಾಜಣ್ಣಗೆ ಕೆಪಿಸಿಸಿ ಅಧ್ಯಕ್ಷನಾಗುವಾಸೆ, ಅದರೆ ಹೈಕಮಾಂಡ್ ಸಹ ಹಾಗೆ ಯೋಚಿಸುತ್ತದೆಯೇ?

ಅರುಣ್​ ಕುಮಾರ್​ ಬೆಳ್ಳಿ

Updated on: Jan 04, 2025 | 4:10 PM

ಪಕ್ಷದ ಜಿಲ್ಲಾಧ್ಯಕ್ಷ ಮತ್ತು ಬೂತ್ ಮಟ್ಟದ ಅಧ್ಯಕ್ಷರನ್ನು ಆಯ್ಕೆ ಮಾಡುವಾಗ ತಾನು ಅನುಸರಿಸುವ ಪಾಲಿಸಿಯನ್ನು ಜಾರಿಗೆ ತರಬೇಕೆಂದು ರಾಜಣ್ಣ ಹೇಳುತ್ತಾರೆ. ಯಾವುದೇ ಕ್ಷೇತ್ರದ ಶಾಸಕನೊಬ್ಬನ ಜಾತಿಯವರನ್ನೇ ಬೂತ್ ಮಟ್ಟದ ಅಥವಾ ತಾಲೂಕುಮಟ್ಟದ ಅಧ್ಯಕ್ಷನಾಗಿ ಆರಿಸಬಾರದು ಎಂದು ಹೇಳುವ ಅವರು ತಮ್ಮ ಈ ಸಿದ್ಧಾಂತವನ್ನು ಪಕ್ಷದ ವರಿಷ್ಠರ ಗಮನಕ್ಕೂ ತರಲಾಗುವುದೆಂದು ಹೇಳಿದರು.

ಬೆಂಗಳೂರು: ಸಹಕಾರ ಸಚಿವ ಕೆಎನ್ ರಾಜಣ್ಣ ಕೆಪಿಸಿಸಿ ಅಧ್ಯಕ್ಷನಾಗುವ ಕನಸನ್ನು ಬಹಳ ದಿನಗಳಿಂದ ಹೊಸೆಯುತ್ತಿದ್ದಾರೆ. ಅದರೆ, ಹೈಕಮಾಂಡ್ ಇವರ ಬಗ್ಗೆ ಸಿರಿಯಸ್ಸಾಗಿಲ್ಲ ಅನ್ನೋದು ಬೇರೆ ವಿಚಾರ. ಹಾಗಾಗೇ ಮಾಧ್ಯಮಗಳ ಮುಂದೆ ಮನಸ್ಸಿಗೆ ಬಂದಿದ್ದನ್ನೆಲ್ಲ ಮಾತಾಡದಂತೆ ವರಿಷ್ಠರು ಎಚ್ಚರಿಸಿದ್ದಾರೆ. ಅದರ ಬಗ್ಗೆ ಪ್ರಶ್ನೆ ಕೇಳಿದಾಗ ಅವರು ಜಾಣ್ಮೆಯಿಂದ ಮಾತನ್ನು ಲೋಕಸಭಾ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳ ಕಡೆ ತಿರುಗಿಸುತ್ತಾರೆ. ಬಜೆಟ್​ಗೆ ಸಂಬಂಧಿಸಿದ ಮೀಟಿಂಗ್ ಸಿಎಂ ಸಿದ್ದರಾಮಯ್ಯ ಕರೆದಿರುವುದರಿಂದ ತಮ್ಮ ಇಲಾಖೆಯ ಎಸ್ಟಿಮೇಶನ್ ತಯಾರಿಸುವಲ್ಲಿ ಮಗ್ನನಾಗಿರುವುದಾಗಿಯೂ ಹೇಳುತ್ತಾರೆ. ಕೆಪಿಸಿಸಿ ಅಧ್ಯಕ್ಷನ ನೇಮಕಾತಿ, ಸಂಪುಟ ಪುನಾರಚನೆ ಮೊದಲಾದವೆಲ್ಲ ಹೈಕಮಾಂಡ್ ಅಣತಿ ಮೇರೆಗೆ ನಡೆಯುತ್ತವೆ ಎಂದು ಸಚಿವ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಅವನೇನು ಸಮಾಜಕ್ಕೆ ರೋಲ್ ಮಾಡೆಲಾ? ದರ್ಶನ್ ವಿರುದ್ಧ ಸಚಿವ ಕೆಎನ್ ರಾಜಣ್ಣ ಗರಂ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.