Sign In

By signing in or creating an account, you agree with Associated Broadcasting Company's Terms & Conditions and Privacy Policy.

Did DK Suresh warn MB Patil? ಯಾರಿಂದಲೂ ವಾರ್ನ್ ಮಾಡಿಸಿಕೊಳ್ಳುವಷ್ಟು ದುರ್ಬಲ ನಾನಲ್ಲ: ಎಂಬಿ ಪಾಟೀಲ್, ಸಚಿವರು

Did DK Suresh warn MB Patil? ಯಾರಿಂದಲೂ ವಾರ್ನ್ ಮಾಡಿಸಿಕೊಳ್ಳುವಷ್ಟು ದುರ್ಬಲ ನಾನಲ್ಲ: ಎಂಬಿ ಪಾಟೀಲ್, ಸಚಿವರು

ಅರುಣ್​ ಕುಮಾರ್​ ಬೆಳ್ಳಿ
|

Updated on: May 24, 2023 | 5:27 PM

ತಮ್ಮ ವಿವಾದಾತ್ಮಕ ಮುಖ್ಯಮಂತ್ರಿ ಪವರ್ ಶೇರಿಂಗ್ ಹೇಳಿಕೆ ಬಗ್ಗೆ ಎಮ್ ಬಿ ಪಾಟೀಲ್ ಕಾಮೆಂಟ್ ಮಾಡಬಯಸಲಿಲ್ಲ.

ಬೆಂಗಳೂರು:ಡಿಕೆ ಸುರೇಶ್ (DK Suresh) ನನಗೆ ವಾರ್ನಿಂಗ್ ಕೊಡುವ ರೀತಿಯಲ್ಲಿ ಮಾತಾಡಿಲ್ಲ, ವಿಜಯಪುರದವನಾಗಿರುವ ನಾನು ಬೇರೆ ಯಾರಿಂದಲೇ ಆಗಲಿ ವಾರ್ನ್ ಮಾಡಿಸಿಕೊಳ್ಳುವಷ್ಟು ದುರ್ಬಲನಾಗಿಲ್ಲ, ಅಪ್ಪ ಅಮ್ಮನಿಗೆ ಬಿಟ್ಟು ಯಾರಿಗೂ ನಾನು ಹೆದರಿದವನಲ್ಲ’ ಎಂದು ಸಚಿವ ಎಂಬಿ ಪಾಟೀಲ್ (MB Patil) ಇಂದು ಬೆಂಗಳೂರಲ್ಲಿ ಹೇಳಿದರು. ಸುರೇಶ್ ಮತ್ತು ಡಿಕೆ ಶಿವಕುಮಾರ್ (DK Shivakumar) ನಡುವಿನ ಭಾಂಧವ್ಯ ಚೆನ್ನಾಗಿದೆ, ಎಂದು ಹೇಳಿದ ಪಾಟೀಲ್, ತನ್ನ ಕಚೇರಿ ಕಡೆ ಹೋಗುತ್ತಿದ್ದಾಗ ಸುರೇಶ್ ಅವರು ‘ಎಂಬಿ ಪಾಟೀಲ್ರೇ’ ಅಂತ ಪ್ರೀತಿಯಿಂದ ಕರೆದು, ತಮಾಷೆಯಾಗಿ ‘ಗಟ್ಟಿಯಾಗಿರಿ’ ಅಂತ ಹೇಳಿದರೇ ಹೊರತು ತಮ್ಮ ನಡುವೆ ಯಾವುದೇ ವಾಗ್ವಾದ ನಡೆಯಲಿಲ್ಲ ಎಂದರು. ತಮ್ಮ ವಿವಾದಾತ್ಮಕ ಮುಖ್ಯಮಂತ್ರಿ ಪವರ್ ಶೇರಿಂಗ್ ಹೇಳಿಕೆ ಬಗ್ಗೆ ಅವರು ಕಾಮೆಂಟ್ ಮಾಡಬಯಸಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ