ATM ನಲ್ಲಿ ಹಣ ಬರಲಿಲ್ಲವೆಂದು ಸಹಾಯ ಕೋರಿದರೆ ಆ ಮೋಸಗಾರ ಏನು ಮಾಡಿದ ನೋಡಿ

ಅಪರಿಚಿತನು, ಮಹಿಳೆ ನೀಡಿದ ಎಟಿಎಂ ಕಾರ್ಡ್ ಅನ್ನು ಎರಡು-ಮೂರು ಬಾರಿ ಬಳಸಲು ಪ್ರಯತ್ನಿಸಿ, ಅದು ಕೆಲಸ ಮಾಡುತ್ತಿಲ್ಲ ಎಂದಿದ್ದಾನೆ. ಆದರೆ ಈ ಮಧ್ಯೆ, ಹುಷಾರಾಗಿ ತನ್ನಲ್ಲಿದ್ದ ಇನ್ನೊಂದು ಎಟಿಎಂ ಕಾರ್ಡ್ ತೆಗೆದು ಮಹಿಳೆಗೆ ಕೊಟ್ಟಿದ್ದಾನೆ. ಅಪರಿಚಿತನ ಮೋಸದ ವಿಚಾರ ತಿಳಿಯದೆ ಮಹಿಳೆಯು ಯುವಕ ನೀಡಿದ ಎಟಿಎಂ ಕಾರ್ಡ್ ತೆಗೆದುಕೊಂಡು ಕೇಂದ್ರದಿಂದ ಹೊರ ಹೋಗಿದ್ದಾರೆ.

ATM ನಲ್ಲಿ ಹಣ ಬರಲಿಲ್ಲವೆಂದು ಸಹಾಯ ಕೋರಿದರೆ ಆ ಮೋಸಗಾರ ಏನು ಮಾಡಿದ ನೋಡಿ
|

Updated on:Nov 18, 2023 | 2:48 PM

ಅನಂತಪುರ ಜಿಲ್ಲೆಯ ಗುತ್ತಿ ಪಟ್ಟಣದಲ್ಲಿ (Gooty in Anantapur) ಆಂಧ್ರ ಪ್ರದೇಶ ಗಾಮೀಣ ಪ್ರಗತಿ ಬ್ಯಾಂಕ್ (APGPB) ಗೆ ಸೇರಿದ​​ ಎಟಿಎಂ ಕೇಂದ್ರದಲ್ಲಿ (ATM Center) ಮುನೀಂದ್ರ ಎಂಬ ಮಹಿಳೆಗೆ ಸೇರಿದ ಎಟಿಎಂ ಕಾರ್ಡ್‌ ಅನ್ನು ಅಪರಿಚಿತ ವ್ಯಕ್ತಿಯೊಬ್ಬ ಬಳಸಿ 25 ಸಾವಿರ ರೂ. ನಗದನ್ನು ಡ್ರಾ ಮಾಡಿ ಪರಾರಿಯಾಗಿದ್ದಾನೆ. ತಕ್ಷಣವೇ, ತಾನು ವಂಚನೆಗೆ (Cheat) ಒಳಗಾಗಿರುವುದು ಅರಿವಾಗಿ ಖಾತೆದಾರ ಮಹಿಳೆಯು ತಾನು ಮೋಸ ಹೋಗಿರುವುದರ ಬಗ್ಗೆ ಗುತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಟಿಎಂ ಕಾರ್ಡ್ ಬಳಸಿ ಹಣ ಪಡೆಯಲು ಯತ್ನಿಸುತ್ತಿದ್ದ ಮಹಿಳೆ ಹಣ ಸಿಗುತ್ತಿಲ್ಲ ಎಂದು ಪಕ್ಕದಲ್ಲಿಯೇ ಇದ್ದ ಅ ಅಪರಿಚಿತನಿಗೆ ತೋರಿಸಿ, ಹಣ ಡ್ರಾ ಮಾಡಿ ಕೊಡುವಂತೆ ಹೇಳಿದ್ದಾರೆ.

ಇನ್ನು ಅಪರಿಚಿತನು, ಮಹಿಳೆ ನೀಡಿದ ಎಟಿಎಂ ಕಾರ್ಡ್ ಅನ್ನು ಎರಡು-ಮೂರು ಬಾರಿ ಬಳಸಲು ಪ್ರಯತ್ನಿಸಿ, ಅದು ಕೆಲಸ ಮಾಡುತ್ತಿಲ್ಲ ಎಂದಿದ್ದಾನೆ. ಆದರೆ ಈ ಮಧ್ಯೆ, ಹುಷಾರಾಗಿ ತನ್ನಲ್ಲಿದ್ದ ಇನ್ನೊಂದು ಎಟಿಎಂ ಕಾರ್ಡ್ ತೆಗೆದು ಮಹಿಳೆಗೆ ಕೊಟ್ಟಿದ್ದಾನೆ. ಅಪರಿಚಿತನ ಮೋಸದ ವಿಚಾರ ತಿಳಿಯದೆ ಮಹಿಳೆಯು ಯುವಕ ನೀಡಿದ ಎಟಿಎಂ ಕಾರ್ಡ್ ತೆಗೆದುಕೊಂಡು ಕೇಂದ್ರದಿಂದ ಹೊರ ಹೋಗಿದ್ದಾರೆ.

ಅವರು ಆ ಕಡೆ ಕೇಂದ್ರದಿಂದ ಹೊರಹೋಗುತ್ತಿದ್ದಂತೆ ಅಪರಿಚಿತ ವ್ಯಕ್ತಿ ಎಟಿಎಂ ಕಾರ್ಡ್‌ನಿಂದ 25,000 ರೂ. ಡ್ರಾ ಮಾಡಿಕೊಂಡಿದ್ದಾನೆ. ತಕ್ಷಣ ಎಚ್ಚೆತ್ತ ಸಂತ್ರಸ್ತ ಗುತ್ತಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಎಟಿಎಂನಲ್ಲಿ ಮಹಿಳೆಯನ್ನು ವಂಚಿಸಿ ಕಾರ್ಡ್ ಬದಲಿಸಿ ಹಣ ಡ್ರಾ ಮಾಡುತ್ತಿರುವ ದೃಶ್ಯಗಳು ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಪೊಲೀಸರು ಮುಂದಿನ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:45 pm, Sat, 18 November 23

Follow us
ಎಂಟು ಜನರ ಮೇಲೆ ಎಲಿಮಿನೇಷನ್​ ತೂಗುಗತ್ತಿ; ಯಾರಾಗಲಿದ್ದಾರೆ ಔಟ್?
ಎಂಟು ಜನರ ಮೇಲೆ ಎಲಿಮಿನೇಷನ್​ ತೂಗುಗತ್ತಿ; ಯಾರಾಗಲಿದ್ದಾರೆ ಔಟ್?
ಈ ರೀತಿಯ ಸಿಕ್ಸ್ ರಿಂಕು ಸಿಂಗ್ ಮಾತ್ರ ಸಿಡಿಸಲು ಸಾಧ್ಯ: ರೋಚಕ ವಿಡಿಯೋ
ಈ ರೀತಿಯ ಸಿಕ್ಸ್ ರಿಂಕು ಸಿಂಗ್ ಮಾತ್ರ ಸಿಡಿಸಲು ಸಾಧ್ಯ: ರೋಚಕ ವಿಡಿಯೋ
ಕೊಪ್ಪಳ: ಹೊತ್ತಿ ಉರಿದ ಮೂರು ಅಂತಸ್ತಿನ ಜ್ಯುವೆಲ್ಲರಿ ಶಾಪ್ ಕಟ್ಟಡ
ಕೊಪ್ಪಳ: ಹೊತ್ತಿ ಉರಿದ ಮೂರು ಅಂತಸ್ತಿನ ಜ್ಯುವೆಲ್ಲರಿ ಶಾಪ್ ಕಟ್ಟಡ
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್