Hassan News: ಅರಸೀಕೆರೆ ಬಳಿ ಮಳೆಯಿಂದ ಕುಸಿದ ಮನೆಯ ನಿರ್ಗತಿಕ ಕುಟುಂಬಕ್ಕೆ ಶಾಸಕ ಶಿವಲಿಂಗೇಗೌಡ ನೆರವು

ಅರುಣ್​ ಕುಮಾರ್​ ಬೆಳ್ಳಿ

Updated on: Jul 26, 2023 | 4:08 PM

ಸಮಾಧಾನಕರ ಸಂಗತಿಯೆಂದರೆ ಶಾಸಕ ಕೆಎಂ ಶಿವಲಿಂಗೇಗೌಡ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಗೆ ರೂ. 5 ಲಕ್ಷ ಚೆಕ್ ಪರಿಹಾರದ ರೂಪದಲ್ಲಿ ನೀಡಿದ್ದಾರೆ.

ಹಾಸನ: ವಿಡಿಯೋದಲ್ಲಿ ಕಾಣುತ್ತಿರುವ ಮಹಿಳೆಯ ಮನೆಮಾತ್ರ ಅಲ್ಲ, ಆಕೆಯ ತಲೆ ಮೇಲೆ ಆಕಾಶವೇ ಕಳಚಿಬಿದ್ದಿದೆ. ಅರಸೀಕೆರೆ (Arasikere) ತಾಲ್ಲೂಕಿನ ಡಿಎಂ ಕುರ್ಕೆ ಹೆಸರಿನ ಗ್ರಾಮದಲ್ಲಿದ್ದ ಮನೆ ಕುಸಿದಾಗ ಅದರೊಳಗಿದ್ದ ಮಹಿಳೆಯ ತಾಯಿ (woman’s mother) ಬಲಿಯಾಗಿದ್ದಾರೆ. ಹಾಸನದ ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಈಕೆ ತಮ್ಮ ಕಷ್ಟ, ನೋವು ಯಾತನೆ ಹೇಳಿಕೊಳ್ಳುತ್ತಿದ್ದಾರೆ. ತಲೆ ಮೆಲಿದ್ದ ಸೂರು ಉರುಳಿ ಬಿದ್ದಿದೆ. ಆಕೆಯೊಂದಿಗೆ ಇಬ್ಬರು ಮಕ್ಕಳು, ಅಸ್ವಸ್ಥ ತಂದೆ ಮತ್ತು ಒಬ್ಬ ತಮ್ಮ ವಾಸವಾಗಿದ್ದಾರೆ. ಭವಿಷ್ಯದ ಕರಾಳತೆ ಮಹಿಳೆಯನ್ನು ಆತಂಕಕ್ಕೆ ದೂಡಿದೆ. ಆಕೆಗೆ ಕೂಡಲೇ ವಾಸಿಸಲು ಒಂದು ಮನೆ ಬೇಕಿದೆ. ಸಮಾಧಾನಕರ ಸಂಗತಿಯೆಂದರೆ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ಮತ್ತು ಹಾಸನ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಅನಾಹುತವನ್ನು ವೀಕ್ಷಿಸಿ ಮಹಿಳೆಗೆ ರೂ. 5 ಲಕ್ಷ   ಚೆಕ್ ಪರಿಹಾರದ ರೂಪದಲ್ಲಿ ನೀಡಿದ್ದಾರೆ. ಸುತ್ತಮುತ್ತಲಿನ ಬೇರೆ ಮನೆಗಳ ಸಹ ಕುಸಿಯುವ ಸ್ಥಿತಿಯಲ್ಲಿವೆಯಂತೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.