ಛಲವಾದಿ ನಾರಾಯಣಸ್ವಾಮಿ ಅಪ್ರಬುದ್ಧ: ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್​ ಕಿಡಿ

Updated By: ಪ್ರಸನ್ನ ಹೆಗಡೆ

Updated on: Oct 09, 2025 | 12:57 PM

ಬಿಜೆಪಿಯವರು ಲಿಂಗಾಯತರನ್ನ ಟಾರ್ಗೆಟ್​ ಮಾಡುತ್ತಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರೇ ಯಡಿಯೂರಪ್ಪ ಅವರನ್ನ ಸಿಎಂ ಸ್ಥಾನದಿಂದ ಇಳಿಸುವಾಗ, ಯತ್ನಾಳ್​ರನ್ನು ಪಕ್ಷದಿಂದ ಉಚ್ಛಾಟಿಸುವಾಗ ನೀವು ಎಲ್ಲಿ ಹೋಗಿದ್ರಿ? ಎಂದು ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್​ ಪ್ರಶ್ನಿಸಿದ್ದಾರೆ. ಸುದೀಪ್​ರನ್ನು ಟಾರ್ಗೆಟ್​ ಮಾಡಲಾಗ್ತಿದೆ ಎಂಬ ಪರಿಷತ್​ ವಿಪಕ್ಷ ನಾಯಕರ ಹೇಳಿಕೆಗೆ ಚಿಕ್ಕಬಳ್ಳಾಪುರ ಶಾಸಕರು ಈ ರೀತಿ ಕೌಂಟರ್​ ಕೊಟ್ಟಿದ್ದಾರೆ.

ಬೆಂಗಳೂರು, ಅಕ್ಟೋಬರ್​ 09: ಸುದೀಪ್​ ಅವರನ್ನ ಟಾರ್ಗೆಟ್​ ಮಅಡಲಾಗಿದೆ ಎಂಬ ವಿಧಾನ ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಕಾಂಗ್ರೆಸ್​ ಶಾಸಕ ಪ್ರದೀಪ್​ ಈಶ್ವರ್ (Pradeep Eshwar)​ ತಿರುಗೇಟು ನೀಡಿದ್ದಾರೆ. ಅಪ್ರಬುದ್ಧ ಛಲವಾದಿ ನಾರಾಯಣಸ್ವಾಮಿ ಅವರೇ, ಸುದೀಪ್ ಅವರಿಗೂ ಸರ್ಕಾರಕ್ಕೂ ಏನು ಸಂಬಂಧ? ಕಾನೂನು ಎಲ್ಲರಿಗೂ ಒಂದೇ ಅಲ್ವಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಸುದೀಪ್​ ಅವರನ್ನ ನಿಮಗಿಂತ ಜಾಸ್ತಿ ನಾವು ಪ್ರೀತಿಸುತ್ತೇವೆ, ಅಭಿಮಾನಿಸುತ್ತೇವೆ ಎಂದು ಪ್ರದೀಪ್​ ಈಶ್ವರ್​ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.