AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Devanahalli News: ಸಚಿವ ಮುನಿಯಪ್ಪ ದುಂಬಾಲು ಬಿದ್ದು ದೇವನಹಳ್ಳಿಯಿಂದ ಕೆಲ ಗ್ರಾಮಗಳಿಗೆ ಬಸ್ ವ್ಯವಸ್ಥೆ ಮಾಡಿಸಿಕೊಂಡ ಶಾಸಕ ಪ್ರದೀಪ್ ಈಶ್ವರ್

Devanahalli News: ಸಚಿವ ಮುನಿಯಪ್ಪ ದುಂಬಾಲು ಬಿದ್ದು ದೇವನಹಳ್ಳಿಯಿಂದ ಕೆಲ ಗ್ರಾಮಗಳಿಗೆ ಬಸ್ ವ್ಯವಸ್ಥೆ ಮಾಡಿಸಿಕೊಂಡ ಶಾಸಕ ಪ್ರದೀಪ್ ಈಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 24, 2023 | 2:37 PM

ದೇವನಹಳ್ಳಿಯಿಂದ ಯಲಿಯೂರು, ದೊಡ್ಡತತ್ತಮಂಗಲ, ಗಡ್ಡದನಾಯಕನಹಳ್ಳಿ, ವಿಜಯಪುರಗಳ ಮೂಲಕ ಹಾದುಗೋಗುವ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ದೇವನಹಳ್ಳಿ: ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಒಬ್ಬ ಭಿನ್ನ ರಾಜಕಾರಣಿ ಅಂತ ಈಗ ಎಲ್ಲರೂ ಹೇಳುತ್ತಿದ್ದಾರೆ. ನಿಮಗೆ ನೆನಪಿರಬಹುದು; ಕೆಲ ವಾರಗಳ ಹಿಂದೆ ದೇವನಹಳ್ಳಿಯಿಂದ (Devanahalli) ಕೆಲ ರಿಮೋಟ್ ಗ್ರಾಮಗಳಿಗೆ ಬಸ್ ವ್ಯವಸ್ಥೆಯಿಲ್ಲದೆ ಜನ ಪರದಾಡುತ್ತಿದ್ದಾರೆ ಅಂತ ಪ್ರದೀಪ್, ದೇವನಹಳ್ಳಿ ಶಾಸಕ ಹಾಗೂ ಸಚಿವ ಕೆಹೆಚ್ ಮುನಿಯಪ್ಪರ (KH Muniyappa) ಗಮನಕ್ಕೆ ತಂದಿದ್ದರು. ಅಷ್ಟು ಮಾಡಿ ಅವರು ಸುಮ್ಮನಾಗದೆ ಸಚಿವರ ದುಂಬಾಲು ಬಿದ್ದರು. ಅದರ ಪರಿಣಾಮವಾಗೇ ದೇವನಹಳ್ಳಿಯಿಂದ ಯಲಿಯೂರು, ದೊಡ್ಡತತ್ತಮಂಗಲ, ಗಡ್ಡದನಾಯಕನಹಳ್ಳಿ, ವಿಜಯಪುರಗಳ ಮೂಲಕ ಹಾದುಗೋಗುವ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲಂಕೃತಗೊಂಡ ಬಸ್ ಒಂದಕ್ಕೆ ಪೂಜೆ ನೆರವೇರಿಸಿದ ಬಳಿಕ ವಾಹನದ ಒಂದು ಭಾಗದಲ್ಲಿ ಸಚಿವ ಮುನಿಯಪ್ಪ ಮತ್ತೊಂದು ಭಾಗದಲ್ಲಿ ಪ್ರದೀಪ್ ಈಶ್ವರ್ ನಿಂತುಕೊಂಡು ಹಸಿರು ಬಾವುಟ ತೋರಿದರು. ನಂತರ ಅವರು ಅದೇ ಬಸ್ ನಲ್ಲಿ ಪ್ರಯಾಣಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ