ಬಿಗ್ ಬಾಸ್ ಕನ್ನಡ ವಿನ್ನರ್ ಹನುಮಂತಗೆ ಚಿನ್ನ ಎನ್ನುವ ಮೋಕ್ಷಿತಾ ಜಗದೀಶ್​ಗೆ ಎಂಟರ್ಟೇನರ್ ಅನ್ನುತ್ತಾರೆ!

ಅರುಣ್​ ಕುಮಾರ್​ ಬೆಳ್ಳಿ

Updated on: Jan 30, 2025 | 4:42 PM

ಬಿಗ್ ಬಾಸ್ ವಿನ್ನರ್ ಹನುಮಂತನ ವ್ಯಕ್ತಿತ್ವವನ್ನು ಮೋಕ್ಷಿತಾ ಮೊದಲಿಗೆ ಬೇರೆ ರೀತಿಯಲ್ಲಿ ವಿವರಿಸುತ್ತಾರೆ, ಅದು ಸರಿಯೆನಿಸದ ಕಾರಣ ಅವರೊಂಥರಾ ಚಿನ್ನ ಎಂದು ಹೇಳುತ್ತಾರೆ. ಎಲ್ಲಕ್ಕಿಂತ ಮಜ ನೀಡುವ ವ್ಯಾಖ್ಯಾನ ಅಂದರೆ ವಕೀಲ ಜಗದೀಶ್ ಗೆ ನೀಡಿದ್ದು. ಅವರನ್ನು ಮೋಕ್ಷಿತಾ ಎಂಟರ್​ಟೇನರ್ ಎನ್ನುತ್ತಾರೆ ಮತ್ತು ಮೊದಲ ಮೂರುವಾರ ಅವರ ಎಂಟರ್ಟೇನ್ಮೆಂಟ್ ನಲ್ಲೇ ಕಳೆದುಹೋಯಿತು ಅನ್ನುತ್ತಾರೆ!

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ಈಗ ಮುಗಿದುಹೋದ ಅಧ್ಯಾಯ, ಅದರಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ಅದರಲ್ಲೂ ವಿಶೇಷವಾಗಿ ಟಾಪ್ 5ನಲ್ಲಿದ್ದವರು ಒಬ್ಬೊಬ್ಬರಾಗಿ ಟಿವಿ9ನೊಂದಿಗೆ ಮಾತಾಡುತ್ತಿದ್ದಾರೆ. ಮೋಕ್ಷಿತಾ ಪೈ ಶೋನಲ್ಲಿ 4 ನೇ ಸ್ಥಾನಗಳಿಸಿದ್ದು ಕನ್ನಡಿಗರಿಗೆ ಗೊತ್ತಿದೆ. ತಮ್ಮೊಂದಿಗೆ ಶೋನಲ್ಲಿದ್ದ ಸ್ಪರ್ಧಿಗಳ ಬಗ್ಗೆ ಅವರು ಒಂದೊಂದು ಪದದ ವ್ಯಾಖ್ಯಾನ ನೀಡಿದ್ದಾರೆ. ಎಲ್ಲರಿಗೂ ಒಂದು ಶಬ್ದ ಹುಡುಕುವ ಅವರು ತ್ರಿವಿಕ್ರಮಗೆ ವ್ಯಕ್ತಿತ್ವಕ್ಕೆ ಸಮರ್ಪಕ ವ್ಯಾಖ್ಯಾನ ನೀಡಲ್ಲ, ಎಲ್ಲರ ಜೊತೆ ಹೊಂದಿಕೊಳ್ಳುವ ವ್ಯಕ್ತಿತ್ವದವರು ಅಂತ ಹೇಳುತ್ತಾರಾದರೂ ಖುದ್ದು ಅವರಿಗೆ ಆ ವ್ಯಾಖ್ಯಾನ ಸರಿಯೆನಿಸುವುದಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯಾವ ವೈರಿಗೂ ಬರಬಾರದು ಮೋಕ್ಷಿತಾ ಪೈ ಸ್ಥಿತಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.