AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಗೆ ಬೆಂಬಲ ಘೋಷಿಸಿದ ಹಿನ್ನೆಲೆ ರಂಗಮಂದಿರದಿಂದ ಸಂಸದೆ ಸುಮಲತಾ ಫೋಟೋ ತೆರವು

ಬಿಜೆಪಿಗೆ ಬೆಂಬಲ ಘೋಷಿಸಿದ ಹಿನ್ನೆಲೆ ರಂಗಮಂದಿರದಿಂದ ಸಂಸದೆ ಸುಮಲತಾ ಫೋಟೋ ತೆರವು

ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on:Mar 11, 2023 | 1:16 PM

Share

ಸಂಸದೆ ಸುಮಲತಾ ಅಂಬರೀಶ್​ ಅವರು ಬಿಜೆಪಿಗೆ ಬೆಂಬಲ ಘೋಶಿಸಿದ ಹಿನ್ನೆಲೆ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿದರಕೆರೆ ಗ್ರಾಮದಲ್ಲಿನ ಲಂಕೇಶ್ ರಂಗ ಮಂದಿರದಿಂದ ಸುಮಲತಾರ ಫೋಟೋ ತೆರವುಗೊಳಿಸಲಾಗಿದೆ.

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್​ ಅವರು ಬಿಜೆಪಿಗೆ ಬೆಂಬಲ ಘೋಶಿಸಿದ ಹಿನ್ನೆಲೆ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿದರಕೆರೆ ಗ್ರಾಮದಲ್ಲಿನ ಲಂಕೇಶ್ ರಂಗ ಮಂದಿರದಿಂದ ಸುಮಲತಾರ ಫೋಟೋ ತೆರವುಗೊಳಿಸಲಾಗಿದೆ. ಬಿದರಕೆರೆ ಗ್ರಾಮದಲ್ಲಿ ದಿವಂಗತ ನಟ ಅಂಬರೀಶ್​ರವರ ಅನುದಾನದಿಂದ ರಂಗಮಂದಿರ ನಿರ್ಮಾಣವಾಗಿತ್ತು. ರಂಗಮಂದಿರದಲ್ಲಿ ವರನಟ ಡಾ ರಾಜ್ ಕುಮಾರ್, ದಿವಂಗತ ಅಂಬರೀಶ್​​ ಹಾಗೂ ಸುಮಲತಾರ ಫೋಟೊ ಅಳವಡಿಸಲಾಗಿತ್ತು. ನಿನ್ನೆ (ಮಾ.10) ಬಿಜೆಪಿಗೆ ತನ್ನ ಬೆಂಬಲ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಫೋಟೋ ತೆರವು ಮಾಡಲಾಗಿದೆ.

Published on: Mar 11, 2023 12:03 PM

Follow Us
Vivek Biradar
Vivek Biradar

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.