ದೇಶದಲ್ಲಿರುವ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮಂತ್ರಾಲಯದಲ್ಲಿ(Mantralayam) ಶ್ರೀ ರಾಘವೇಂದ್ರ ಸ್ವಾಮಿಗಳ(Sri Raghavendra Swamiji) 351ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ಆಗಸ್ಟ್ 10ರಿಂದ ಆರಂಭವಾಗಿ ಆಗಸ್ಟ್ 16 ವರೆಗೆ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವ ನಡೆಯಲಿದೆ. ಈ ವಿಶೇಷ ಸಂದರ್ಭದಲ್ಲಿ ಎಮ್. ಎಸ್. ರಾಮಯ್ಯರ ಮಗ ಪಟ್ಟಾಭಿ ರಾಮ್ ರಾಯರಿಗೆ 1.5 ಕೋಟಿ ರೂ ಬೆಲೆ ಬಾಳುವ ಚಿನ್ನದ ಸರ ಕಾಣಿಕೆಯಾಗಿ ನೀಡಿದ್ದಾರೆ.