Loading video

ಪುಂಡಾಟ ಮಾಡುತ್ತಿದ್ದ ಎಮ್ಮೆ ಕಟ್ಟಿಹಾಕಲು ಜೆಸಿಬಿಯೇ ಬರಬೇಕಾಯ್ತು!

Updated By: Ganapathi Sharma

Updated on: Feb 13, 2025 | 9:41 PM

ಯಃಕಶ್ಚಿತ್ ಎಮ್ಮೆಯೊಂದನ್ನು ಕಟ್ಟಿಹಾಕಲು ಜೆಸಿಬಿ ಬೇಕಾಯ್ತೇ? ಹೌದು, ಮುದ್ದೇಬಿಹಾಳ ಪಟ್ಟಣ ಇಂಥದ್ದೊಂದು ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಸಿಕ್ಕ ಸಿಕ್ಕ ಜನರಿಗೆ ತಿವಿದು, ವಾಹನಗಳಿಗೆ ಗುದ್ದಿ ಓಡುತ್ತಿದ್ದ ಎಮ್ಮೆಯನ್ನು ಕೊನೆಗೂ ಕಟ್ಟಿಹಾಕಿ ಜನ ನಿಟ್ಟುಸಿರುಬಿಟ್ಟರು. ಎಮ್ಮೆ ಸೆರೆ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ ನೋಡಿ.

ವಿಜಯಪುರ, ಫೆಬ್ರವರಿ 13: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದಲ್ಲಿ ಎಮ್ಮೆಯೊಂದು ಮದವೇರಿ ಜನರಿಗೆ ತೊಂದರೆ ಕೊಡುತ್ತಿದ್ದುದಲ್ಲದೆ ಕಟ್ಟಿಹಾಕಲೂ ಬಿಡದೆ ತಪ್ಪಿಸಿಕೊಳ್ಳುತ್ತಿತ್ತು. ಜನರಿಗೆ, ಸಂಚಾರ ಮಾಡುತ್ತಿದ್ದ ವಾಹನಗಳಿಗೆ ಗುದ್ದಿ ಓಡುತ್ತಿದ್ದ ಎಮ್ಮೆಯನ್ನು ಕಟ್ಟಿಹಾಕಲು ಕೊನೆಗೂ ಜೆಸಿಬಿಯನ್ನೇ ತರಬೇಕಾಯ್ತು! ಮುದ್ದೇಬಿಹಾಳ ಹಳೆಯ ಸರ್ಕಾರಿ ಆಸ್ಪತ್ರೆ ಆವರಣಕ್ಕೆ ಎಮ್ಮೆ ಪ್ರವೇಶ ಮಾಡಿತ್ತು. ಅಲ್ಲೇ ಗೇಟ್ ಹಾಕಿ ಪುರಸಭೆ ಅಧ್ಯಕ್ಷ ಹಾಗೂ ಸಿಬ್ಬಂದಿ ಜೆಸಿಬಿ ತರಿಸಿ ಎಮ್ಮೆ ಸೆರೆ ಹಿಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ