ರಾಮಲಲ್ಲಾ ದರ್ಶನಕ್ಕಾಗಿ ಜಮ್ಮುನಿಂದ ಅಯೋಧ್ಯೆಗೆ ಧಾವಿಸಿ ಬಂದ ಮುಸ್ಲಿಂ ಮಹಿಳೆ ಸಿದ್ದಿಖಾ ಖಾನ್!

ಅರುಣ್​ ಕುಮಾರ್​ ಬೆಳ್ಳಿ

Updated on: Jan 23, 2024 | 1:02 PM

ತನಗೆ ಎಲ್ಲ ಧರ್ಮಗಳ ಸ್ನೇಹಿತೆಯರಿದ್ದಾರೆ ಎಂದು ಹೇಳುವ ಸಿದ್ದೀಖಾ, ಆತ್ಮದ ಕರೆಯಿಂದಾಗಿ ಭ್ರಾತೃತ್ವದ ಸಂದೇಶ ಹಂಚಲು ತಾನಿಲ್ಲಿಗೆ ಬಂದಿರುವುದಾಗಿ ಹೇಳುತ್ತಾರೆ. ಅವರ ಕುಟುಂಬಸ್ಥರಿಂದ ತನಗೆ ಜೀವಭಯವಿದೆ ಹೇಳುವ ಅವರು ಅಯೋಧ್ಯೆಯಲ್ಲಿ ಭ್ರಾತೃತ್ವ, ಸೌಹಾರ್ದತೆ ಮನೆಮಾಡಿವೆ, ಇದೇ ಸಂದೇಶ ತನ್ನ ಕುಟುಂಬದ ಸದಸ್ಯರಿಗೂ ನೀಡುವುದಾಗಿ ಅವರು ಹೇಳುತ್ತಾರೆ.

ಅಯೋಧ್ಯೆ: ರಾಮಲಲ್ಲಾನ (Ram Lalla) ದರ್ಶನಕ್ಕೆ ಜಮ್ಮುನಿಂದ (Jammu) ಬಂದ ಸಿದ್ದಿಖಾ ಖಾನ್ (Siddiqua Khan)! ನಂಬೋದಿಕ್ಕೆ ಕಷ್ಟ ಆಗಬಹುದು ತಾನೇ? ಆದರೆ, ಇದು ಸತ್ಯ ಮತ್ತು ಅ ಮಹಿಳೆಯೇ ಟಿವಿ9 ಕನ್ನಡ ವಾಹಿನಿಯ ದೆಹಲಿ ವರದಿಗಾರನೊಂದಿಗೆ ಮಾತಾಡಿದ್ದಾರೆ. ಇವರು ರಾಮನ ದರ್ಶನಕ್ಕೆ ಸುಮ್ಮನೆ ಬಂದಿಲ್ಲ, ಅದಕ್ಕಾಗಿ 3 ದಿನಗಳ ವ್ರತವನನ್ನೂ ಆಚರಿಸಿದ್ದಾರೆ. ಜಮ್ಮು ನಿವಾಸಿಯಾಗಿರುವ ಸಿದ್ದಿಖಾ ಖಾನ್ ಮೂರು ದಿನಗಳ ಹಿಂದೆ ರಾತ್ರಿ 2 ಗಂಟೆಗೆ ತನಗೆ ರಾಮ ಕನಸಲ್ಲಿ ಕಾಣಿಸಿಕೊಂಡು, ನಾನು ಅಯೋಧ್ಯೆಗೆ ಬಂದಿದ್ದೇನೆ, ನೀನ್ಯಾಕೆ ಇನ್ನೂ ಇಲ್ಲೇ ಇದ್ಧೀಯಾ ಅಂತ ಕೇಳಿದರು ಅನ್ನುತ್ತಾರೆ. ಅವರಿಗೆ ಧಿಗ್ಗನೆ ಎಚ್ಚರವಾಗಿ ರಾಮ ಮತ್ತು ಅಲ್ಲಾಹು ನಾಮ ಜಪಿಸಿ ಕೂಡಲೇ ಅಯೋಧ್ಯೆ ಕಡೆ ಕಾರಲ್ಲಿ ಹೊರಟಿದ್ದಾರೆ. ಮೂರು ದಿನಗಳ ಕಾಲ ಡ್ರೈವ್ ಮಾಡಕೊಂಡು ಬಂದ ಇವರು ನಿನ್ನೆ ಅಯೋಧ್ಯೆಯಲ್ಲಿ ರಾಮನ ದರ್ಶನ ಪಡೆದುಕೊಂಡಿದ್ದಾರೆ. ತನಗೆ ಎಲ್ಲ ಧರ್ಮಗಳ ಸ್ನೇಹಿತೆಯರಿದ್ದಾರೆ ಎಂದು ಹೇಳುವ ಸಿದ್ದೀಖಾ, ಆತ್ಮದ ಕರೆಯಿಂದಾಗಿ ಭ್ರಾತೃತ್ವದ ಸಂದೇಶ ಹಂಚಲು ತಾನಿಲ್ಲಿಗೆ ಬಂದಿರುವುದಾಗಿ ಹೇಳುತ್ತಾರೆ. ಅವರ ಕುಟುಂಬಸ್ಥರಿಂದ ತನಗೆ ಜೀವಭಯವಿದೆ ಹೇಳುವ ಅವರು ಅಯೋಧ್ಯೆಯಲ್ಲಿ ಭ್ರಾತೃತ್ವ, ಸೌಹಾರ್ದತೆ ಮನೆಮಾಡಿವೆ, ಇದೇ ಸಂದೇಶ ತನ್ನ ಕುಟುಂಬದ ಸದಸ್ಯರಿಗೂ ನೀಡುವುದಾಗಿ ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.