ಸೂರ್ಯನ ಕಿರಣದ ಮೂಲಕ ಅಯೋಧ್ಯೆ ರಾಮಮಂದಿರದ ಚಿತ್ರ ಬಿಡಿಸಿದ ಮೈಸೂರು ಕಲಾವಿದ
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದ್ದು, ರಾಮಲಲ್ಲಾ (ಬಾಲ ರಾಮ)ನ ಮೂರ್ತಿ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ದೇಶದಾದ್ಯಂತ ಸಡಗರ, ಸಂಭ್ರಮ ಮುಗಿಲು ಮುಟ್ಟಿದೆ. ಈ ಮಧ್ಯೆ ಪ್ರಭು ಶ್ರೀರಾಮಚಂದ್ರನಿಗೆ ಭಕ್ತರು ವಿವಿಧ ರೀತಿಯಲ್ಲಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ. ಅದೇ ರೀತಿಯಾಗಿ ಮೈಸೂರಿನ ಕಲಾವಿದ ಶ್ಯಾಮ್ ಸೂರ್ಯ ಕಿರಣ ಬಳಿಸಿಕೊಂಡು ಅಯೋಧ್ಯೆ ರಾಮಮಂದಿರದ ಚಿತ್ರ ಬಿಡಿಸಿದ್ದಾರೆ.
ಮೈಸೂರು, ಜನವರಿ 20: ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ (Ram Mandir) ನಿರ್ಮಾಣವಾಗಿದ್ದು, ರಾಮಲಲ್ಲಾ (ಬಾಲ ರಾಮ)ನ ಮೂರ್ತಿ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ದೇಶದಾದ್ಯಂತ ಸಡಗರ, ಸಂಭ್ರಮ ಮುಗಿಲು ಮುಟ್ಟಿದೆ. ಈ ಮಧ್ಯೆ ಪ್ರಭು ಶ್ರೀರಾಮಚಂದ್ರನಿಗೆ ಭಕ್ತರು ವಿವಿಧ ರೀತಿಯಲ್ಲಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ. ಅದೇ ರೀತಿಯಾಗಿ ಮೈಸೂರಿನ ಕಲಾವಿದ ಶ್ಯಾಮ್ ಸೂರ್ಯ ಕಿರಣ ಬಳಿಸಿಕೊಂಡು ಅಯೋಧ್ಯೆ ರಾಮಮಂದಿರದ ಚಿತ್ರ ಬಿಡಿಸಿದ್ದಾರೆ. ಬೂದು ಗಾಜಿನ ಮೂಲಕ ಸೂರ್ಯನ ಕಿರಣ ಹಾಯಿಸಿ ಚಿತ್ರ ದಪ್ಪನೆಯ ಹಾಳೆಯ ಮೇಲೆ ಚಿತ್ರ ಬಿಡಿಸಿದ್ದಾರೆ. ಈ ಚಿತ್ರವನ್ನು ಬಿಡಿಸಲು ಶ್ಯಾಮ್ ಕಳೆದ ಮೂರು ದಿನಗಳಿಂದ ಅಭ್ಯಾಸ ಮಾಡಿದ್ದಾರೆ. ಶ್ಯಾಮ್ ಕಳೆದ 6 ವರ್ಷಗಳಿಂದ ಈ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಂದು (ಜ.20) ಮೈಸೂರು ಅರಮನೆಯ ಕೋಟೆ ಆಂಜನೇಯ ದೇಗುಲದ ಬಳಿ ಚಿತ್ರ ಬಿಡಿಸಿದ್ದಾರೆ.
Loading...
Unable to load recommendations.
Follow Us