ಮೈಸೂರು, ಸೆಪ್ಟೆಂಬರ್ 18: ಗಣೇಶ ಚತುರ್ಥಿ ಹಿನ್ನೆಲೆ ಮೈಸೂರು ದಸರಾ (mysore dasara) ಗಜಪಡೆಗೆ ಇಂದು ಪೂಜೆ ಮಾಡಲಾಗಿದೆ. ಅರಮನೆ ಅಂಗಳದಲ್ಲಿ ಅಭಿಮನ್ಯು ನೇತೃತ್ವದಲ್ಲಿ ಮಾಜಿ ಕ್ಯಾಪ್ಟನ್ ಅರ್ಜುನ, ಭೀಮ, ವಿಜಯ ವರಲಕ್ಷ್ಮೀ, ಕಂಜನ್, ಗೋಪಿ, ಧನಂಜಯ, ಮಹೇಂದ್ರ ಆನೆಗಳಿಗೆ ಮೈಸೂರು ಅರಮನೆ ಅರ್ಚಕ ಪ್ರಹ್ಲಾದ್ ನೇತೃತ್ವದಲ್ಲಿ ಹೂವಿನಹಾರ ಹಾಕಿ, ಕಬ್ಬು, ಸಿಹಿತಿನ್ನಿಸಿ ವಿಶೇಷ ಪೂಜೆ ಮಾಡಲಾಗಿದೆ. ಗಜಪಡೆ ಪೂಜೆ ಆರಂಭವಾಗುತ್ತಿದ್ದಂತೆ ಮಳೆ ಆರಂಭವಾಯಿತು. ದಸರಾ ಗಜಪಡೆ ಪೂಜೆಯಲ್ಲಿ ಪೇಜಾವರ ಶ್ರೀ ಭಾಗಿಯಾಗಿದ್ದರು. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published On - 3:09 pm, Mon, 18 September 23