ಮೈಸೂರು ದಸರಾ ಮಹೋತ್ಸವ 2022: ಗಜಪಡೆಯ ತಾಲೀಮು ಗುರುವಾರದಿಂದ ಆರಂಭವಾಯಿತು

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Aug 18, 2022 | 11:29 AM

ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಬೆನ್ನಮೇಲೆ 300 ಕೆಜೆ ಭಾರದ ಮರಳಿನ ಮೂಟೆಗಳನ್ನು ಹೊರೆಸಿ ತಾಲೀಮನ್ನು ಶುರುಮಾಡಲಾಯಿತು.

ಮೈಸೂರು: ನಾಡಹಬ್ಬ ದಸರಾಗೆ (Dasara) ಇನ್ನೂ ಒಂದು ತಿಂಗಳುಗಿಂತ ಹೆಚ್ಚಿನ ಸಮಯ ಬಾಕಿಯಿದೆ ಅದರೆ, ಮೈಸೂರಲ್ಲಿ ದಸರಾ ಮಹೋತ್ಸವ-2022 ರ ತಯಾರಿ ಆರಂಭಗೊಂಡಿದೆ. ವಿಶ್ವಪ್ರಸಿದ್ಧ ಮತ್ತು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ (Jumbo Savari) ಪಾಲ್ಗೊಳ್ಳುವ ಅಭಿಮನ್ಯು (Abhimanyu), ಭೀಮ, ಮಹೇಂದ್ರ, ಗೋಪಾಲಸ್ವಾಮಿ, ಧನಂಜಯ ಆನೆಗಳ ತಾಲೀಮು ಗುರುವಾರದಿಂದ ಪ್ರಾರಂಭಿಸಲಾಯಿತು. ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಮೇಲೆ 300 ಕೆಜೆ ಭಾರದ ಮರಳಿನ ಮೂಟೆಗಳನ್ನು ಹೊರೆಸಿ ತಾಲೀಮನ್ನು ಶುರುಮಾಡಲಾಯಿತು.

Published on: Aug 18, 2022 11:28 AM
Follow Us
Web contact

TV9 Kannada

Read More