AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಸೆ. 7ರಿಂದ ಮತ್ತೇ ಸಂಚಾರ ಆರಂಭಿಸಲಿದೆ ನಮ್ಮ ಮೆಟ್ರೋ

[lazy-load-videos-and-sticky-control id=”FwahkoyonL4″] ಬೆಂಗಳೂರು: ಬೆಂಗಳೂರಿಗರಿಗೆ ಕೊನೆಗೂ ಸಿಕ್ಕಿದೆ ಸಿಹಿ ಸುದ್ದಿ. ಲಾಕ್‌ಡೌನ್‌ನಂತರ ಸಂಚಾರವನ್ನು ಸ್ಥಗೀತಗೊಳಿಸಿದ್ದ ನಮ್ಮ ಮೆಟ್ರೋ ಈಗ ಮತ್ತೇ ಪುನಾರಂಭಗೊಳ್ಳುತ್ತಿದೆ. ಹೌದು ನಮ್ಮ ಮೆಟ್ರೋ ಮತ್ತೇ ಸೆಪ್ಟೆಂಬರ್ 7ರಿಂದ ಸಂಚಾರ ಆರಂಭಿಸುತ್ತಿದೆ. ಮೊದಲ ನಾಲ್ಕು ದಿನ ಅಂದ್ರೆ ಸೆಪ್ಟೆಂಬರ್‌ 7ರಿಂದ 10ರವರೆಗೆ ನೇರಳೆ ಮಾರ್ಗದಲ್ಲಿ ಸಂಚಾರ ಆರಂಭವಾಗುತ್ತೆ. ಇದಾದ ನಂತರ ಸೆಪ್ಟೆಂಬರ್ 9 ಮತ್ತು 10ರಂದು ಹಸಿರು ಮಾರ್ಗದಲ್ಲಿ ಓಡಾಟ ಆರಂಭಿಸುತ್ತೆ. ಮೊದಲು ಬೆಳಗ್ಗೆ 8ರಿಂದ ಬೆಳಗ್ಗೆ 11 ಗಂಟೆವರೆಗೆ ಮತ್ತು ಸಂಜೆ 4.30ರಿಂದ ಸಂಜೆ […]

ಕೊನೆಗೂ ಸೆ. 7ರಿಂದ ಮತ್ತೇ ಸಂಚಾರ ಆರಂಭಿಸಲಿದೆ ನಮ್ಮ ಮೆಟ್ರೋ
Guru
| Edited By: |

Updated on:Sep 03, 2020 | 9:49 AM

Share

[lazy-load-videos-and-sticky-control id=”FwahkoyonL4″]

ಬೆಂಗಳೂರು: ಬೆಂಗಳೂರಿಗರಿಗೆ ಕೊನೆಗೂ ಸಿಕ್ಕಿದೆ ಸಿಹಿ ಸುದ್ದಿ. ಲಾಕ್‌ಡೌನ್‌ನಂತರ ಸಂಚಾರವನ್ನು ಸ್ಥಗೀತಗೊಳಿಸಿದ್ದ ನಮ್ಮ ಮೆಟ್ರೋ ಈಗ ಮತ್ತೇ ಪುನಾರಂಭಗೊಳ್ಳುತ್ತಿದೆ.

ಹೌದು ನಮ್ಮ ಮೆಟ್ರೋ ಮತ್ತೇ ಸೆಪ್ಟೆಂಬರ್ 7ರಿಂದ ಸಂಚಾರ ಆರಂಭಿಸುತ್ತಿದೆ. ಮೊದಲ ನಾಲ್ಕು ದಿನ ಅಂದ್ರೆ ಸೆಪ್ಟೆಂಬರ್‌ 7ರಿಂದ 10ರವರೆಗೆ ನೇರಳೆ ಮಾರ್ಗದಲ್ಲಿ ಸಂಚಾರ ಆರಂಭವಾಗುತ್ತೆ. ಇದಾದ ನಂತರ ಸೆಪ್ಟೆಂಬರ್ 9 ಮತ್ತು 10ರಂದು ಹಸಿರು ಮಾರ್ಗದಲ್ಲಿ ಓಡಾಟ ಆರಂಭಿಸುತ್ತೆ.

ಮೊದಲು ಬೆಳಗ್ಗೆ 8ರಿಂದ ಬೆಳಗ್ಗೆ 11 ಗಂಟೆವರೆಗೆ ಮತ್ತು ಸಂಜೆ 4.30ರಿಂದ ಸಂಜೆ 7.30ರವರೆಗೆ ಮೆಟ್ರೋ ಓಡಾಟವಿರುತ್ತೆ. ಪ್ರತಿ 5 ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲುಗಳ ಸಂಚಾರ ಇರಲಿದೆ. ಸೆ.11ರಿಂದ ಹಸಿರು ಮತ್ತು ನೇರಳೆ ಎರಡೂ ಮಾರ್ಗಗಳಲ್ಲಿ ಓಡಾಟ ಶುರವಾಗಲಿದ್ದು, ಬೆಳಗ್ಗೆ 7ರಿಂದ ರಾತ್ರಿ 9 ಗಂಟೆವರೆಗೆ ಮೆಟ್ರೋ ರೈಲು ಓಡಾಟ ನಡೆಸಲಿದೆ.

ಈ ಸಂಬಂಧ ಪ್ರಯಾಣಿಕರಿಗೆ ಕೆಲವೊಂದು ಸೂಚನೆ ನೀಡಿರುವ BMRCL, ಮಾಸ್ಕ್‌, ಸ್ಮಾರ್ಟ್ ಕಾರ್ಡ್ ಇದ್ದವರಿಗೆ ಮಾತ್ರ ಅವಕಾಶ. ಪ್ರಯಾಣಿಕರು ಕಡ್ಡಾಯವಾಗಿ ಎರಡು ಮೀಟರ್ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಹಾಗೇನೆ ಪ್ರತಿ ರೈಲಿನಲ್ಲಿ 400 ಪ್ರಯಾಣಿಕರಿಗೆ ಮಾತ್ರ ಅವಕಾಶ ಇರಲಿದೆ ಎಂದು ಹೇಳಿದೆ.

ಇಷ್ಟೇ ಅಲ್ಲ ಪ್ರಯಾಣಿಕರು BMRCL ಸೂಚಿಸಿದ ಸ್ಥಳದಲ್ಲಿ ನಿಂತು ಪ್ರಯಾಣಿಸಬೇಕು. ಪ್ರತಿ ನಿಲ್ದಾಣದಲ್ಲಿ 60 ಸೆಕೆಂಡ್ ಮಾತ್ರ ರೈಲು ನಿಲ್ಲುತ್ತದೆ. ಹತ್ತು ವರ್ಷಕ್ಕಿಂತ ಕಡಿಮೆ, 65 ವರ್ಷಕ್ಕಿಂತ ಮೇಲ್ಪಟ್ಟವರು ಅಗತ್ಯಬಿದ್ದರೆ ಮಾತ್ರ ಮೆಟ್ರೋದಲ್ಲಿ ಸಂಚರಿಸಲು ಅವಕಾಶ ಇರಲಿದೆ ಎಂದು ನಮ್ಮ ಮೆಟ್ರೋ ಗೈಡ್‌ಲೈನ್ಸ್‌ನಲ್ಲಿ ತಿಳಿಸಿದೆ.

Press Release_K 02092020

Published On - 11:53 pm, Wed, 2 September 20

ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ