‘ವಿನಯ್​ಗೆ ಕ್ಯಾಪ್ಟನ್​ ಆಗುವ ಅರ್ಹತೆ ಇಲ್ಲ’; ನಮ್ರತಾ ಮಾತಿನಿಂದ ನೊಂದುಕೊಂಡ ವಿನಯ್​ ಗೌಡ

|

Updated on: Nov 30, 2023 | 5:41 PM

ಮೊದಲಿಗೆ ವಿನಯ್​ ಗೌಡ ಮತ್ತು ನಮ್ರತಾ ಗೌಡ ಅವರು ಬಹಳ ಕ್ಲೋಸ್​ ಆಗಿದ್ದರು. ಆದರೆ ಈಗ ಇಬ್ಬರ ನಡುವೆ ಬಿರುಕು ಮೂಡಿದೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಪ್ರೋಮೋ ರಿಲೀಸ್​ ಆಗಿದೆ. ದಿನದಿಂದ ದಿನಕ್ಕೆ ಬಿಗ್​ ಬಾಸ್​ ಮನೆಯಲ್ಲಿ ಪೈಪೋಟಿಯ ಕಾವು ಹೆಚ್ಚಾಗುತ್ತಿದೆ. ಸ್ಪರ್ಧಿಗಳ ನಿಜವಾದ ಬಣ್ಣ ಏನು ಎಂಬುದು ಗೊತ್ತಾಗುತ್ತಿದೆ.

ಬಿಗ್​ ಬಾಸ್ (Bigg Boss Kannada) ಆಟದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳು ಕೂಡ ಅಲ್ಲ. ಪರಿಸ್ಥಿತಿಗೆ ತಕ್ಕಂತೆ ಎಲ್ಲರೂ ಬದಲಾಗುತ್ತಾರೆ. ಕಷ್ಟದ ಸಂದರ್ಭದಲ್ಲಿ ಯಾರಿಂದಲಾದರೂ ಸಹಾಯ ಸಿಗುತ್ತೆ ಎಂದು ನಿರೀಕ್ಷಿಸುವುದು ಕೂಡ ಕಷ್ಟ. ಆ ಸತ್ಯ ಈಗ ವಿನಯ್​ ಗೌಡ ಅವರಿಗೆ ಅರ್ಥ ಆಗಿದೆ. ಅದನ್ನು ಅವರು ನೇರವಾಗಿಯೇ ಹೇಳಿದ್ದಾರೆ. 8ನೇ ವಾರದಲ್ಲಿ ಕ್ಯಾಪ್ಟನ್​ ಆಗಲು ಅರ್ಹರಲ್ಲದವರ ಹೆಸರನ್ನು ಹೇಳುವಂತೆ ನಮ್ರತಾಗೆ ಬಿಗ್​ ಬಾಸ್​ ಕಡೆಯಿಂದ ಆದೇಶ ಬಂತು. ಆಗ ಅವರು ವಿನಯ್​ ಗೌಡ (Vinay Gowda) ಹೆಸರನ್ನು ಹೇಳಿದರು. ಇದರಿಂದ ವಿನಯ್​ಗೆ ಶಾಕ್​ ಆಯಿತು. ‘ವಿನಯ್​ ಅವರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗೆ ಇಡುತ್ತೇನೆ. ಕೋಪದಲ್ಲಿ ಅವರು ಅಗ್ರೆಸಿವ್​ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮಾತನಾಡುವಾಗ ಬೇರೆಯವರಿಗೆ ನೋವಾಗುತ್ತದೆ ಎಂಬುದನ್ನು ಕೂಡ ಅವರು ಯೋಚಿಸುವುದಿಲ್ಲ’ ಎಂದು ನಮ್ರತಾ (Namratha Gowda) ಕಾರಣ ನೀಡಿದರು. ಇದನ್ನು ಕೇಳಿ ವಿನಯ್​ಗೆ ಬೇಸರ ಆಯಿತು. ಈ ಸಂಚಿಕೆ ನವೆಂಬರ್​ 30ರ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ದಲ್ಲಿ ಪ್ರಸಾರ ಆಗಲಿದೆ. ದಿನದ 24 ಗಂಟೆಯೂ ‘ಜಿಯೋ ಸಿನಿಮಾ’ದಲ್ಲಿ ಉಚಿತವಾಗಿ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on