ಗ್ರಾಹಕರ ಪ್ರಾಣದ ಜತೆ ಚೆಲ್ಲಾಟ: ಬೇಕರಿಯಲ್ಲಿ ‘ಬೂಸ್ಟ್’ ತುಂಬಿದ ಕೇಕ್ ಮಾರಾಟ, ಆಹಾರ ಇಲಾಖೆ ಡೋಂಟ್ ಕೇರ್
ನರಗುಂದ ತಾಲೂಕಿನ ಶಿರೋಳ ಗ್ರಾಮದ ಬೆಂಗಳೂರು ಬೇಕರಿಯಲ್ಲಿ 'ಬೂಸ್ಟ್' ಪುಡಿಯನ್ನು ವಿಪರೀತವಾಗಿ ತುಂಬಿದ ಕೇಕ್ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದು ಗ್ರಾಹಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಲಾಗಿದೆ. ಈ ಕುರಿತ ವಿಡಿಯೋಗಳು ವೈರಲ್ ಆಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಹಾರ ಸುರಕ್ಷತಾ ಇಲಾಖೆಯ ನಿರ್ಲಕ್ಷ್ಯದ ಬಗ್ಗೆಯೂ ಪ್ರಶ್ನೆಗಳು ಎತ್ತಲ್ಪಟ್ಟಿವೆ.
ಗದಗ, ಫೆ.12: ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಬೇಕರಿಯೊಂದರಲ್ಲಿ ‘ಬೂಸ್ಟ್’ (Boost) ಪುಡಿಯನ್ನು ಅಸಹಜವಾಗಿ ತುಂಬಿದ ಕೇಕ್ ಮಾರಾಟ ಮಾಡುತ್ತಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ಶಿರೋಳ ಗ್ರಾಮದ ‘ಬೆಂಗಳೂರು ಬೇಕರಿ’ಯಲ್ಲಿ ಗ್ರಾಹಕರೊಬ್ಬರು ಕೇಕ್ ಖರೀದಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಕೇಕ್ನ ಒಳಭಾಗದಲ್ಲಿ ಬೂಸ್ಟ್ ಪುಡಿಯನ್ನು ವಿಪರೀತವಾಗಿ ತುಂಬಲಾಗಿದೆ. ಇದರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಹೆಚ್ಚು ಲಾಭಕ್ಕಾಗಿ ಹಾಗೂ ಹಳೆಯ ಕೇಕ್ಗಳು ಮಾರಾಟವಾಗಲು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ನರಗುಂದ ತಾಲೂಕಿನ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us