Jaggesh: ಜಗ್ಗೇಶ್​ ಪುತ್ರನಿಗೆ ಕಾರು ಅಪಘಾತ ಯಾಕೆ ಆಯ್ತು? ಮೊದಲ ಬಾರಿ ಮಾತಾಡಿದ ‘ನವರಸ ನಾಯಕ’

| Updated By: ಮದನ್​ ಕುಮಾರ್​

Updated on: Nov 18, 2022 | 9:34 AM

Navarasa Nayaka Jaggesh | Yathiraj Jaggesh: ‘ಆಚೆ ಹೋಗೋದು ಬೇಡ ಅಂತ ಯತಿರಾಜ್​ಗೆ ಹೇಳಿದ್ದೆ. ಆತ ಸಿಟ್ಟು ಮಾಡಿಕೊಂಡಿದ್ದ’ ಎಂದು ಜಗ್ಗೇಶ್​ ಹೇಳಿದ್ದಾರೆ. ಮಗನ ಕಾರು ಅಪಘಾತದ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.

2021ರಲ್ಲಿ ಜಗ್ಗೇಶ್​ ಪುತ್ರ ಯತಿರಾಜ್​ (Yathiraj Jaggesh) ಚಲಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿತ್ತು. ಅದೃಷ್ಟವಶಾತ್​ ಯತಿರಾಜ್​ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಘಟನೆ ಕುರಿತಂತೆ ಜಗ್ಗೇಶ್​ ಅವರು ಸಾರ್ವಜನಿಕವಾಗಿ ಮಾತನಾಡಿರಲಿಲ್ಲ. ಈಗ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಯತಿರಾಜ್​ ಗ್ರಹಗತಿ ಚೆನ್ನಾಗಿ ಇರಲಿಲ್ಲ. ಆಚೆ ಹೋಗೋದು ಬೇಡ ಅಂತ ಹೇಳಿದ್ದೆ. ಅದನ್ನು ಆತ ನಂಬಿರಲಿಲ್ಲ. ಕಾರು ತಗೊಂಡು ಹೋದ. ದೊಡ್ಡ ಗಂಡಾಂತರ ಆಯಿತು. ರಾಯರು ಅವನನ್ನು ಕಾಪಾಡಿದರು. ಆ ಗಾಡಿಯನ್ನು ನಾವು ತೂಕಕ್ಕೆ ಹಾಕಿದ್ವಿ’ ಎಂದು ಜಗ್ಗೇಶ್​ (Jaggesh) ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:34 am, Fri, 18 November 22

Follow us on