ಗಡ್ಕರಿಗೆ ಜೀವ ಬೆದರಿಕೆ ಕೇಸ್​​: ಉಗ್ರ ಅಕ್ಬರ್ ಪಾಷಾ ಹಿಂಡಲಗಾ ಜೈಲಿಗೆ ಶಿಫ್ಟ್

| Updated By: ವಿವೇಕ ಬಿರಾದಾರ

Updated on: Aug 27, 2024 | 11:21 AM

ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿರುವ ಆರೋಪದ ಮೇಲೆ ನಾಗ್ಪುರ್​ ಪೊಲೀಸರ ವಶದಲ್ಲಿರುವ ಮೋಸ್ಟ್ ವಾಂಟೆಡ್‌ ಉಗ್ರ ಅಕ್ಬರ್ ಪಾಷಾನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್​ ಮಾಡಲಾಗಿದೆ. ಉಗ್ರ ಕಳೆದ ವರ್ಷ ನಿತಿನ್​ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿದ್ದನು.

ಬೆಳಗಾವಿ, ಆಗಸ್ಟ್​ 27: ಮೋಸ್ಟ್ ವಾಂಟೆಡ್‌ ಉಗ್ರ ಅಕ್ಬರ್ ಪಾಷಾ ಹಿಂಡಲಗಾ ಜೈಲಿಗೆ (Hindalaga Jail) ಶಿಫ್ಟ್​ ಮಾಡಲಾಗಿದೆ. ಉಗ್ರ ಅಕ್ಬರ್​ ಪಾಷಾ ಮತ್ತು ನಟೋರಿಯಸ್ ಪಾತಕಿ ಜಯೇಶ್ ಪೂಜಾರಿ ಜೊತೆಗೂಡಿ ಕಳೆದ ವರ್ಷ ಕೇಂದ್ರ ಸಚಿವ ನಿತಿನ್​ ಗಡ್ಕರಿ (Nitin Gadkari) ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದರು. 10 ಕೋಟಿ ರೂ. ಕೊಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಹೇಳಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಹಾರಾಷ್ಟ್ರದ ನಾಗ್ಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ಸಂಬಂಧ ನಾಗ್ಪುರ ಠಾಣೆ ಪೊಲೀಸರು ಉಗ್ರ ಅಕ್ಬರ್​ ಪಾಷಾನನ್ನು ಬಾಡಿ ವಾರೆಂಟ್​ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ, ನಟೋರಿಯಸ್ ಪಾತಕಿ ಜಯೇಶ್ ಪೂಜಾರಿ ಮತ್ತು ಅಕ್ಬರ್ ಪಾಷ್ ನಡುವೆ ಲಿಂಕ್ ಇರುವುದು ಬೆಳಕಿಗೆ ಬಂದಿದೆ. ನಂತರ ಇಬ್ಬರನ್ನು ವಿಚಾರಣೆ ಬಳಿಕ ಇದೀಗ ನಾಗ್ಪುರ ಪೊಲೀಸರು ಉಗ್ರ ಅಕ್ಬರ್​ ಪಾಷಾನನ್ನು ಮತ್ತೆ ಬೆಳಗಾವಿಗೆ ಶಿಫ್ಟ್​​ ಮಾಡಿದ್ದಾರೆ.

ಬೆಳಗಾವಿಯ ಇದೇ ಹಿಂಡಲಾಗ ಜೈಲಿಗೆ ಕೊಲೆ ಆರೋಪಿ ನಟ ದರ್ಶನ್​ ಮತ್ತು ಇತರರನ್ನು ಶಿಫ್ಟ್​ ಮಾಡುವ ಸಾಧ್ಯತೆ ಇದೆ. ದರ್ಶನ್​ ಅವರನ್ನು ಹಿಂಡಲಗಾ ಜೈಲಿಗೆ ಶಿಫ್ಟ್​ ಮಾಡಬೇಕಾದರೆ ನ್ಯಾಯಾಲಯದ ಅನುಮತಿ ಅವಶ್ಯಕತೆ ಇದೆ. ಹೀಗಾಗಿ ಶಿಫ್ಟ್​ ಸ್ವಲ್ಪ ತಡವಾಗುವ ಸಾಧ್ಯತೆ ಇದೆ. ಜೈಲಿನ ನಿಯಮಗಳನ್ನು ಉಲ್ಲಂಘನೆ ಮಾಡಿದಕ್ಕಾಗಿ ದರ್ಶನ್​ ಅವರ ಮೇಲೆ ಮತ್ತೆ ಎರಡು ಪ್ರಕರಣಗಳು ದಾಖಲಾಗಿವೆ. ​

ಇದನ್ನೂ ಓದಿ: ಹಿಂಡಲಗಾ ಜೈಲ್​: ದರ್ಶನ್​ ಶಿಫ್ಟ್ ಆಗಲಿರುವ 101 ವರ್ಷ ಇತಿಹಾಸದ ಕಾರಾಗೃಹದ ಬಗ್ಗೆ ನಿಮಗೆಷ್ಟು ಗೊತ್ತು?

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us on