Loading video

ಶಿವಕುಮಾರ್ ಮಹಾಕುಂಭ ಮೇಳ ಮಾತ್ರ ಅಲ್ಲ, ದೇಶದ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ: ರಾಮಲಿಂಗಾರೆಡ್ಡಿ

|

Updated on: Feb 10, 2025 | 6:32 PM

ಬಂಗಾರಪೇಟೆ ಕಾಂಗ್ರೆಸ್ ಶಾಸಕ ನಾರಾಯಣಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಚಿವ ರಾಮಲಿಂಗಾರೆಡ್ಡಿ, ಪಕ್ಷದ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಪಕ್ಷ ಅಥವಾ ಪಕ್ಷದ ಕಾರ್ಯಕರ್ತರ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಬಾರದೆಂದು ತಿಳಿಸಿದ್ದಾರೆ, ನಾಲ್ಕು ಗೋಡೆಗಳ ನಡುವೆ ಮಾತ್ರ ತಾನು ಮಾತಾಡೋದು ಮತ್ತು ನಾರಾಯಣಸ್ವಾಮಿಗೂ ಅದೇ ಸಲಹೆ ನೀಡುತ್ತೇನೆ ಎಂದರು.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಹಾನ್ ದೈವಭಕ್ತರು, ಅವರು ಮಹಾಕುಂಭಮೇಳ ಮಾತ್ರ ಅಲ್ಲ, ದೇಶದ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ, ಅವರು ಪ್ರಯಾಗ್​ರಾಜ್ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿರುವುದಕ್ಕೂ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಹೇಳಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಖರ್ಗೆ ಅವರು ಹೇಳಿದ್ದು ಬಿಜೆಪಿಯನ್ನು ಕುರಿತು, ಅವರು ಅಧಿಕಾರಕ್ಕೆ ಬಂದ ಬಳಿಕ ಅನೇಕ ತಪ್ಪಗಳನ್ನು ಮಾಡಿದ್ದಾರೆ, ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡುವುದರಿಂದ ಅವರ ತಪ್ಪುಗಳು ಸರಿಯಾಗಲಾರವು ಎಂದು ಹೇಳಿದ್ದಾರೆ ಅಂತ ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರಾಮಲಿಂಗಾರೆಡ್ಡಿಗೆ ರೋಬೋಟ್‌ ನೆರವಿನ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ: ಚೇತರಿಕೆ ಅನುಭವ ಹಂಚಿಕೊಂಡ ಸಚಿವ