ನಟ ಧನ್ವೀರ್ (Dhanveer) ಅವರು ಸ್ಯಾಂಡಲ್ವುಡ್ನಲ್ಲಿ ಈಗತಾನೇ ಗುರುತಿಸಿಕೊಳ್ಳುತ್ತಿದ್ದಾರೆ. ‘ಬೈ ಟು ಲವ್’ ಚಿತ್ರ (By Two Love Movie) ಫೆಬ್ರವರಿ 25ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಶ್ರೀಲೀಲಾ ನಾಯಕಿ. ಧನ್ವೀರ್ ನಟನೆಯ ‘ವಾಮನ’ ಸಿನಿಮಾ ಕೆಲಸಗಳು ಈಗಷ್ಟೇ ಆರಂಭವಾಗಿದೆ. ‘ಬೈ ಟು ಲವ್’ ಚಿತ್ರದ ಬಗ್ಗೆ ಧನ್ವೀರ್ ಹಾಗೂ ಶ್ರೀಲೀಲಾ (Sree Leela) ‘ಟಿವಿ9 ಕನ್ನಡ ಡಿಜಿಟಲ್’ ಜತೆಗೆ ಮಾತನಾಡಿದ್ದಾರೆ. ಈ ವೇಳೆ ಧನ್ವೀರ್ ಅವರು ತಮ್ಮ ಜೀವನದಲ್ಲಿ ನಡೆದ ಕೆಲ ಅಚ್ಚರಿಯ ವಿಚಾರಗಳ ಕುರಿತು ಮಾಹಿತಿ ನೀಡಿದ್ದಾರೆ. ಧನ್ವೀರ್ ಇತ್ತೀಚೆಗೆ ಫಾರ್ಮ್ಹೌಸ್ಗೆ ತೆರಳಿ ಬರ್ತ್ಡೇ ಆಚರಿಸಿಕೊಂಡಿದ್ದರು. ಈ ವೇಳೆ ಅವರ ಗೆಳೆಯರೂ ಇದ್ದರು. ಆಗ ಪಿರಿಯಾಪಟ್ಟಣದಿಂದ ಬಂದಿದ್ದ ವ್ಯಕ್ಯಿಯೋರ್ವ ಗಿಫ್ಟ್ ಆಗಿ ನಾಗರಹಾವನ್ನು ನೀಡಿದ್ದರು! ಹಾವನ್ನು ನೋಡಿ ಧನ್ವೀರ್ ಓಡಿ ಹೋಗಿದ್ದಾರೆ. ಆ ಭಯಾನಕ ಘಟನೆ ಬಗ್ಗೆ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: ಸಂಕ್ರಾಂತಿಗೆ ಧನ್ವೀರ್ ಹೊಸಸಿನಿಮಾ ಶೀರ್ಷಿಕೆ ಘೋಷಣೆ; ರಕ್ತಸಿಕ್ತ ಚಾಕು ಹಿಡಿದು ಬಂದ ‘ವಾಮನ’
‘ಹೆಣ್ಣುಮಗು ಹುಟ್ಟೋಕೆ ನಾನು ಮದುವೆ ಆಗಲ್ಲ’; ಶ್ರೀಲೀಲಾಗೆ ನೇರವಾಗಿ ಹೇಳಿದ ಧನ್ವೀರ್