ಔತಣಕ್ಕೆ ಕರೆಯುವ ವಿಜಯೇಂದ್ರ ನನ್ನನ್ನು ಉಚ್ಛಾಟಿಸುವಂತೆ ಒತ್ತಾಯಿಸಲು ಸಭೆಗಳನ್ನೂ ಮಾಡಿಸುತ್ತಾರೆ: ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ

Updated on: Dec 17, 2024 | 1:55 PM

ಯಡಿಯೂರಪ್ಪ ಮತ್ತು ವಿಜಯೇಂದ್ರ ಎಲ್ಲ ಆಟಗಳನ್ನು ಆಡಿಸಿ ತಾವು ಪ್ರಾಮಾಣಿಕರು ಅಂತ ತೋರಿಸಿಕೊಳ್ಳುತ್ತಾರೆ, ಅವರೊಂದಿಗೆ 4 ದಶಕಗಳ ಕಾಲ ರಾಜಕಾರಣ ಮಾಡಿರುವ ತನಗೆ ಯಡಿಯೂರಪ್ಪನವರ ಎಲ್ಲ ವರಸೆಗಳು ಗೊತ್ತು, ಪಕ್ಷವನ್ನು ಅವರೊಬ್ಬರೇ ಕಟ್ಟಿಲ್ಲ, ಸೈಕಲ್ ಮೇಲೆ ಓಡಾಡಿರುವುದಾಗಿ ಹೇಳುತ್ತಾರೆ ಆದರೆ ಅವರ ವಾಹನಗಳಿಗೆ ತಾವೇ ಪೆಟ್ರೋಲ್ ಹಾಕಿಸಿದ್ದು ಎಂದು ಯತ್ನಾಳ್ ಹೇಳಿದರು.

ಬೆಳಗಾವಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿಎಸ್ ಯಡಿಯೂರಪ್ಪ ಕುಟುಂಬದ ನಡುವಿನ ವೈಮನಸ್ಸು, ಜಗಳ ಯುಗಾಂತ್ಯಗೊಂಡರೂ ಕೊನೆಗೊಳ್ಳದು. ನಗರದಲ್ಲಿ ನಮ್ಮ ಪ್ರತಿನನಿಧಿಯೊಂದಿಗೆ ಮಾತಾಡಿದ ಯತ್ನಾಳ್ ಮತ್ತೊಮ್ಮೆ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರರನ್ನು ತರಾಟೆಗೆ ತೆಗೆದುಕೊಂಡರು. ವಿಜಯೇಂದ್ರ ಕರೆದಿರುವ ಡಿನ್ನರ್ ಸಭೆಗೆ ತಾನು ಮತ್ತು ರಮೇಶ್ ಜಾರಕಿಹೊಳಿ ಹೋಗುವುದಿಲ್ಲ ಎಂದ ಯತ್ನಾಳ್, ಒಂದೆಡೆ ಔತಣಕ್ಕೆ ಕರೆಯುತ್ತಾರೆ ಮತ್ತೊಂದು ಕಡೆ ತಮ್ಮ ಚೇಲಾಗಳಿಂದ ಸಭೆ ಮಾಡಿಸಿ ಯತ್ನಾಳ್​ರನ್ನು ಉಚ್ಛಾಟಿಸಬೇಕೆಂದು ಹೇಳಿಸುತ್ತಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪಂಚಮಸಾಲಿ ಹೋರಾಟಕ್ಕೆ ಅನುಮತಿ ನೀಡದಿರಲು ಬೆಳಗಾವಿ ಡಿಸಿ ಸರ್ವಾಧಿಕಾರ ನಡೆಸುತ್ತಿದ್ದಾರೆಯೇ? ಬಸನಗೌಡ ಯತ್ನಾಳ್

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.