Onam 2023: ಕಾಲೇಜ್​ನಲ್ಲಿ ಮುಗಿಲು ಮುಟ್ಟಿದ ಓಣಂ ಸಂಭ್ರಮ- ಮಿರ ಮಿರ ಮಿಂಚಿದ ವಿದ್ಯಾರ್ಥಿನಿಯರು

Edited By: ಸಾಧು ಶ್ರೀನಾಥ್​

Updated on: Aug 26, 2023 | 2:51 PM

ಮಂಗಳೂರಿನ ಪಾಂಡೇಶ್ವರ ಬಳಿ ಇರುವ ಖಾಸಗಿ ಕಾಲೇಜ್​ನಲ್ಲಿ ಓಣಂ ಹಬ್ಬದ ಜೋಶ್​ ಸಖತ್ತಾಗಿಯೇ ಇತ್ತು. ಮಂಗಳೂರು ಫಿಸಿಯೋಥೆರಪಿ ಇನ್ಸ್​​ಟಿಟ್ಯೂಟ್​ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೇರಳ ಸಂಪ್ರದಾಯ ಉಡುಗೆಯಲ್ಲಿ ಭರ್ಜರಿಯಾಗಿಯೇ ರೆಡಿ ಆಗಿದ್ರು. ಮೊದಲಿಗೆ ಮಹಾಬಲಿಯ ಪಾತ್ರದಾರಿಯನ್ನ ಮೆರವಣಿಗೆ ಮೂಲಕ ಕಾಲೇಜು ಆವರಣಕ್ಕೆ ಕರೆತಂದು ಈ ಓಣಂ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು.

ಅಲ್ಲಿನ ಕಾಲೇಜ್​ನಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು.. ಓಣಂ ನಿಮಿತ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಪ್ರದಾಯ ಉಡುಗೆ ತೊಟ್ಟು ಮಿರ ಮಿರ ಮಿಂಚಿದ್ದಾರೆ.. ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.. ಮಸ್ತ್​ ಮಸ್ತ್​ ಡ್ಯಾನ್ಸ್​.. ಸೀರೆಯಲ್ಲಿ ಸಖತ್​ ಮಿಂಚಿಂಗ್​.. ನಾವೇನ್​ ಕಮ್ಮಿ ಅಂತ ಪಂಚೆ ತೊಟ್ಟು ಬಂದ ಪಡ್ಡೆ ಹುಡುಗರು.. ಫೋಟೋ ಕ್ರೇಜ್​.. ಬಿಂದಾಸ್​ ಭೋಜನ.. ಮದುವಣಗಿತ್ತಿ ಸಿಂಗಾರಗೊಂಡ ಕಾಲೇಜ್​.. ಮುಗಿಲು ಮುಟ್ಟಿದ ಸಂಭ್ರಮ..
ವಾವ್​.. ಅದೇನ್​ ಸಡಗರ.. ಅದೇನ್​ ವಯ್ಯಾರ ಅಂತೀರಾ.. ಮಂಗಳೂರಿನ ಪಾಂಡೇಶ್ವರ ಬಳಿ ಇರುವ ಖಾಸಗಿ ಕಾಲೇಜ್​ನಲ್ಲಿ ಓಣಂ ಹಬ್ಬದ ಜೋಶ್​ ಸಖತ್ತಾಗಿಯೇ ಇತ್ತು. ಮಂಗಳೂರು ಫಿಸಿಯೋಥೆರಪಿ ಇನ್ಸ್​​ಟಿಟ್ಯೂಟ್​ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೇರಳ ಸಂಪ್ರದಾಯ ಉಡುಗೆಯಲ್ಲಿ ಭರ್ಜರಿಯಾಗಿಯೇ ರೆಡಿ ಆಗಿದ್ರು. ಮೊದಲಿಗೆ ಮಹಾಬಲಿಯ ಪಾತ್ರದಾರಿಯನ್ನ ಮೆರವಣಿಗೆ ಮೂಲಕ ಕಾಲೇಜು ಆವರಣಕ್ಕೆ ಕರೆತಂದು ಈ ಓಣಂ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ಇಷ್ಟೇ ಅಲ್ಲ ಹೂಗಳಿಂದ ರಂಗೋಲಿ ಹಾಕಿದ ಯುವತಿಯರು, ಅಲ್ಲಿಯೇ ಫೋಟೋಗೆ ಫೋಸ್​​ ಕೊಟ್ರು. ಈ ಸಂಭ್ರಮಗಳ ನಡುವೆ ಒಂದಿಷ್ಟು ಮನೋರಂಜನಾ ಕ್ರೀಡೆಗಳು ಗಮನ ಸೆಳೆದ್ವು. ಬಾಯಲ್ಲಿ ಸ್ಪೂನ್​ ಅದರ ಮೇಲೆ ನಿಂಬೆ ಇಟ್ಟುಕೊಂಡ ಯುವಕ, ಯುವತಿಯರು ವಾಕ್​ ಮಾಡಿದ್ರು. ಅಂತಿಮವಾಗಿ ಓಣಂ ಪ್ರಯುಕ್ತ ಭೂರಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಅನ್ನ ಸಾಂಬಾರ್, ವೆರೈಟಿ ವೆರೈಟಿ ಪಲ್ಯ ಇತರೆ ತಿನಿಸುಗಳನ್ನ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೇವಲ ಕೇರಳದ ವಿದ್ಯಾರ್ಥಿಗಳು ಮಾತ್ರವಲ್ಲ, ರಾಜ್ಯದ ಹಲವು ಜಿಲ್ಲೆ, ಗುಜರಾತ್ ಸೇರಿದಂತೆ ಇತರ ರಾಜ್ಯದ ವಿದ್ಯಾರ್ಥಿಗಳು ಭಾಗಿಯಾಗಿ ಎಂಜಾಯ್ ಮಾಡಿದ್ರು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠದ ಜತೆ ಜತೆಗೆ ಅನೇಕತೆಯಲ್ಲಿ ಏಕತೆ ಅನ್ನೋ ಸಂದೇಶವನ್ನ ಮನವರಿಕೆ ಮಾಡ್ತಿರೋದು ಖುಷಿಯ ಸಂಗತಿ.

Follow Us
Ashok

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸುದ್ದಿಬಿಡುಗಡೆ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಪ್ರಜಾ ಟಿ.ವಿಯ ಉಡುಪಿ ಜಿಲ್ಲಾ ವರದಿಗಾರರಾಗಿ ಒಂದು ವರ್ಷ ಏಳು ತಿಂಗಳು ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ, ಒಂದು ವರ್ಷ ನಾಲ್ಕು ತಿಂಗಳಿನಿಂದ ಟಿ.ವಿ 9 ವಾಹಿನಿಯಲ್ಲಿ ದಕ್ಷಿಣಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ ಇಂಡಿಯಾ ಟೆಲಿವಿಷನ್​ . ಕಾಮ್​ 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More